<p><strong>ಮಡಿಕೇರಿ</strong>: ಒಂದೆರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಭಾನುವಾರ ರಾತ್ರಿಯಿಂದ ಮತ್ತೆ ಬಿರುಸಾಗಿದೆ. ಮಡಿಕೇರಿ ನಗರ, ನಾಪೋಕ್ಲು, ಸೋಮವಾರಪೇಟೆ, ವಿರಾಜಪೇಟೆ ಭಾಗಗಳಲ್ಲಿ ಬಿರುಸಿನಿಂದ ಮಳೆಯಾಗಿದ್ದರೆ, ಪೊನ್ನಂಪೇಟೆ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಕುಸಿತ ಸಂಭವಿಸಿದ್ದ ಮಡಿಕೇರಿ– ಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಒಂದು ತಿಂಗಳ ಕಾಲ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜುಲೈ 30ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.</p>.<p>ಗಾಳಿಯ ಬಿರುಸು ಕಡಿಮೆಯಾಗಿದ್ದರೂ ಮರಗಳು, ವಿದ್ಯುತ್ ಕಂಬಗಳು ಬೀಳುವುದು ನಿಂತಿಲ್ಲ. 24 ಗಂಟೆಗಳ ಅವಧಿಯಲ್ಲಿ ಬರೋಬರಿ 102 ವಿದ್ಯುತ್ ಕಂಬಗಳು ನೆಲಕಚ್ಚಿವೆ.</p>.<p>ಮಡಿಕೇರಿ ನಗರದಲ್ಲಿ ನಿರಂತರವಾಗಿ ಸುರಿದ ಜಿಟಿಜಿಟಿ ಮಳೆ, ಪದೇ ಪದೇ ಬಿರುಸುಗೊಳ್ಳುತ್ತಿತ್ತು. ಬೀಸುತ್ತಿರುವ ಶೀತಗಾಳಿ, ಕವಿಯುತ್ತಿರುವ ದಟ್ಟ ಮಂಜು ಜನರನ್ನು ನಡುಗಿಸಿತು. ಬಿಸಿಲಿನ ಮುಖವನ್ನೇ ಕಾಣದ ಜನರು ಶೀತಮಯ ವಾತಾವರಣದಲ್ಲಿ ಬಸವಳಿದಿದ್ದಾರೆ.</p>.<p>ಇನ್ನು ಸೋಮವಾರಪೇಟೆ ತಾಲ್ಲೂಕಿನಲ್ಲೂ ಮಳೆಯ ಬಿರುಸು ಕಡಿಮೆಯಾಗಿಲ್ಲ. ಶಾಂತಳ್ಳಿ ಭಾಗದಲ್ಲಿ 11 ಸೆಂ.ಮೀನಷ್ಟು ಮಳೆ ಸುರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೋಮವಾರಪೇಟೆ ಹೋಬಳಿಯ ಯಡೂರು ಗ್ರಾಮದಲ್ಲಿ ಭೂಮಿಯಲ್ಲಿ ಒಂದು ಅಡಿಯಷ್ಟು ಬಿರುಕು ಮೂಡಿದೆ. ಸುತ್ತಮುತ್ತಲ ನಿವಾಸಿಗಳಿಗೆ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.</p>.<p>ಮಾದಾಪುರ– ಸೋಮವಾರಪೇಟೆ ರಸ್ತೆಯ ಬದಿಯಲ್ಲಿ ಕುಸಿತ ಉಂಟಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕದನೂರು ಗ್ರಾಮದ ಪಾರ್ವತಿ ಎಂಬುವವರ ಮನೆಯ ಗೋಡೆ ಕುಸಿದಿದೆ. ಕಾನೂರು ಗ್ರಾಮದ ಬ್ರಹ್ಮಗಿರಿ ಕಾಲೊನಿಯ ಹರೀಶ್ ಎಂಬುವವರ ಮನೆಗೂ ಮಳೆಯಿಂದ ಹಾನಿಗೀಡಾಗಿದೆ. ಕುಶಾಲನಗರ ಹೋಬಳಿ ತ್ಯಾಗತ್ತೂರು ಗ್ರಾಮದ ರಂಮ್ಲ ಎಂಬುವವರು ಮನೆಯ ಚಾವಣಿಯೂ ಕುಸಿದಿದೆ.</p>.<p>ನಾಪೋಕ್ಲು ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನಿರಾಳರಾಗಿದ್ದ ನದಿ ದಂಡೆಯ ನಿವಾಸಿಗಳಲ್ಲಿ ಮತ್ತೆ ಆತಂಕ ಎದುರಾಗಿದೆ.</p>.<p>ವಿರಾಜಪೇಟೆಯಲ್ಲಿ ಧಾರಾಕಾರ ಮಳೆ: ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ರಾತ್ರಿಯಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ.<br>ಕಳೆದ 2 ದಿನಗಳ ಕಾಲ ಬಿಡುವು ನೀಡಿದ್ದ ಮಳೆಯು ಭಾನುವಾರ ರಾತ್ರಿಯಿಂದ ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮತ್ತೆ ಆರ್ಭಟಿಸುತ್ತಿದೆ. ಭಾನುವಾರ ರಾತ್ರಿಯಿಡಿ ಸುರಿದ ಮಳೆಯು ಸೋಮವಾರ ಬೆಳಗ್ಗಿನಿಂದ ಸಂಜೆಯವರೆಗೂ ನಿರಂತರವಾಗಿ ಸುರಿಯಿತು.</p>.<p>ಸಮೀಪದ ಆರ್ಜಿ, ಬಾಳುಗೋಡು, ಹೆಗ್ಗಳ, ರಾಮನಗರ, ಕದನೂರು, ಬಿಟ್ಟಂಗಾಲ, ಬೇಟೋಳಿ, ಕಾಕೋಟುಪರಂಬು, ಒಂಟಿಯಂಗಡಿ, ಚೆಂಬೆಬೆಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲು ಉತ್ತಮ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಒಂದೆರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಭಾನುವಾರ ರಾತ್ರಿಯಿಂದ ಮತ್ತೆ ಬಿರುಸಾಗಿದೆ. ಮಡಿಕೇರಿ ನಗರ, ನಾಪೋಕ್ಲು, ಸೋಮವಾರಪೇಟೆ, ವಿರಾಜಪೇಟೆ ಭಾಗಗಳಲ್ಲಿ ಬಿರುಸಿನಿಂದ ಮಳೆಯಾಗಿದ್ದರೆ, ಪೊನ್ನಂಪೇಟೆ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಕುಸಿತ ಸಂಭವಿಸಿದ್ದ ಮಡಿಕೇರಿ– ಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಒಂದು ತಿಂಗಳ ಕಾಲ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜುಲೈ 30ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.</p>.<p>ಗಾಳಿಯ ಬಿರುಸು ಕಡಿಮೆಯಾಗಿದ್ದರೂ ಮರಗಳು, ವಿದ್ಯುತ್ ಕಂಬಗಳು ಬೀಳುವುದು ನಿಂತಿಲ್ಲ. 24 ಗಂಟೆಗಳ ಅವಧಿಯಲ್ಲಿ ಬರೋಬರಿ 102 ವಿದ್ಯುತ್ ಕಂಬಗಳು ನೆಲಕಚ್ಚಿವೆ.</p>.<p>ಮಡಿಕೇರಿ ನಗರದಲ್ಲಿ ನಿರಂತರವಾಗಿ ಸುರಿದ ಜಿಟಿಜಿಟಿ ಮಳೆ, ಪದೇ ಪದೇ ಬಿರುಸುಗೊಳ್ಳುತ್ತಿತ್ತು. ಬೀಸುತ್ತಿರುವ ಶೀತಗಾಳಿ, ಕವಿಯುತ್ತಿರುವ ದಟ್ಟ ಮಂಜು ಜನರನ್ನು ನಡುಗಿಸಿತು. ಬಿಸಿಲಿನ ಮುಖವನ್ನೇ ಕಾಣದ ಜನರು ಶೀತಮಯ ವಾತಾವರಣದಲ್ಲಿ ಬಸವಳಿದಿದ್ದಾರೆ.</p>.<p>ಇನ್ನು ಸೋಮವಾರಪೇಟೆ ತಾಲ್ಲೂಕಿನಲ್ಲೂ ಮಳೆಯ ಬಿರುಸು ಕಡಿಮೆಯಾಗಿಲ್ಲ. ಶಾಂತಳ್ಳಿ ಭಾಗದಲ್ಲಿ 11 ಸೆಂ.ಮೀನಷ್ಟು ಮಳೆ ಸುರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೋಮವಾರಪೇಟೆ ಹೋಬಳಿಯ ಯಡೂರು ಗ್ರಾಮದಲ್ಲಿ ಭೂಮಿಯಲ್ಲಿ ಒಂದು ಅಡಿಯಷ್ಟು ಬಿರುಕು ಮೂಡಿದೆ. ಸುತ್ತಮುತ್ತಲ ನಿವಾಸಿಗಳಿಗೆ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.</p>.<p>ಮಾದಾಪುರ– ಸೋಮವಾರಪೇಟೆ ರಸ್ತೆಯ ಬದಿಯಲ್ಲಿ ಕುಸಿತ ಉಂಟಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕದನೂರು ಗ್ರಾಮದ ಪಾರ್ವತಿ ಎಂಬುವವರ ಮನೆಯ ಗೋಡೆ ಕುಸಿದಿದೆ. ಕಾನೂರು ಗ್ರಾಮದ ಬ್ರಹ್ಮಗಿರಿ ಕಾಲೊನಿಯ ಹರೀಶ್ ಎಂಬುವವರ ಮನೆಗೂ ಮಳೆಯಿಂದ ಹಾನಿಗೀಡಾಗಿದೆ. ಕುಶಾಲನಗರ ಹೋಬಳಿ ತ್ಯಾಗತ್ತೂರು ಗ್ರಾಮದ ರಂಮ್ಲ ಎಂಬುವವರು ಮನೆಯ ಚಾವಣಿಯೂ ಕುಸಿದಿದೆ.</p>.<p>ನಾಪೋಕ್ಲು ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನಿರಾಳರಾಗಿದ್ದ ನದಿ ದಂಡೆಯ ನಿವಾಸಿಗಳಲ್ಲಿ ಮತ್ತೆ ಆತಂಕ ಎದುರಾಗಿದೆ.</p>.<p>ವಿರಾಜಪೇಟೆಯಲ್ಲಿ ಧಾರಾಕಾರ ಮಳೆ: ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ರಾತ್ರಿಯಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ.<br>ಕಳೆದ 2 ದಿನಗಳ ಕಾಲ ಬಿಡುವು ನೀಡಿದ್ದ ಮಳೆಯು ಭಾನುವಾರ ರಾತ್ರಿಯಿಂದ ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮತ್ತೆ ಆರ್ಭಟಿಸುತ್ತಿದೆ. ಭಾನುವಾರ ರಾತ್ರಿಯಿಡಿ ಸುರಿದ ಮಳೆಯು ಸೋಮವಾರ ಬೆಳಗ್ಗಿನಿಂದ ಸಂಜೆಯವರೆಗೂ ನಿರಂತರವಾಗಿ ಸುರಿಯಿತು.</p>.<p>ಸಮೀಪದ ಆರ್ಜಿ, ಬಾಳುಗೋಡು, ಹೆಗ್ಗಳ, ರಾಮನಗರ, ಕದನೂರು, ಬಿಟ್ಟಂಗಾಲ, ಬೇಟೋಳಿ, ಕಾಕೋಟುಪರಂಬು, ಒಂಟಿಯಂಗಡಿ, ಚೆಂಬೆಬೆಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲು ಉತ್ತಮ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>