ಮಳೆಯ ನಡುವೆ ನಡೆದ ಕಾರ್ಯಕಾರಿಣಿ ನೂರಾರು ಮಂದಿ ಸಭೆಯಲ್ಲಿ ಭಾಗಿ ಮುಂದಿನ ಚುನಾವಣೆಯ ಗೆಲುವಿಗೆ ಕಾರ್ಯತಂತ್ರ
ಸಿದ್ದರಾಮಯ್ಯ ಅವರದ್ದು ಹಿಂದೂ ವಿರೋಧಿ ಸರ್ಕಾರ; ಬ್ರಿಜೇಶ್ ಚೌಟ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು ಅದೊಂದು ಮೀರ್ಜಾಫರ್ – 2 ಸರ್ಕಾರ ಎಂದು ಸಂಸದ ಬ್ರಿಜೇಶ್ ಚೌಟ ಟೀಕಿಸಿದರು. ರಾಜ್ಯಸರ್ಕಾರದ ಭ್ರಷ್ಟಾಚಾರ ಮೇರೆ ಮೀರಿದೆ. ಆರ್ಥಿಕ ಶಿಸ್ತು ಇಲ್ಲದ ಆಡಳಿತವನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ. ಈಗ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರ ಅಜ್ಜಿಯೂ ಇದೇ ರೀತಿ ಮಾಡಿ ಬಿಜೆಪಿಯನ್ನು ಬಗ್ಗು ಬಡಿಯಲು ನೋಡಿದರು. ಅವರಿಂದಾನೇ ಆಗದೇ ಹೋಗದ್ದು ಇನ್ನು ಅವರ ಮೊಮ್ಮಗನಿಂದಾಗುವುದೇ ಎಂದು ಪ್ರಶ್ನಿಸಿದರು.