<p><strong>ವಿರಾಜಪೇಟೆ:</strong> ಪಟ್ಟಣದ ತೆಲುಗರ ಬೀದಿಯಲ್ಲಿನ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ನಿಂದ ಏ.2 ರಿಂದ ಏ.4 ರವರೆಗೆ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಟಿ.ಪಿ ಕೃಷ್ಣ ತಿಳಿಸಿದರು.</p>.<p>‘500ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಮಹಾಕುಂಭಾಭಿಷೇಕ ಪೂಜೆ ಈ ವರ್ಷ ನಡೆಯಲಿದೆ. ಈ ಪೂಜಾ ಕೈಂಕರ್ಯಗಳನ್ನು ತಮಿಳುನಾಡಿನ 17 ಪುರೋಹಿತ ತಂತ್ರಿಗಳು ನಡೆಸಿ ಕೊಡಲಿದ್ದಾರೆ. ಆರಂಭದಲ್ಲಿ ತಲಕಾವೇರಿಯಿಂದ ತೀರ್ಥವನ್ನು ತಂದು ಅಂಗಾಳ ಪರಮೇಶ್ವರಿ ದೇವರಿಗೆ ಹಾಗೂ ಕುಂಭನಿಗೆ ಅಭಿಷೇಕ ಮಾಡಿ ನಂತರ ವಿವಿಧ ಪೂಜೆಗಳನ್ನು ನಡೆಸಲಾಗುವುದು. ಈ ಬಾರಿ ರಾಜ್ಯದಲ್ಲಿಯೇ ಬರಗಾಲ ಆವರಿಸಿಕೊಂಡಿರುವುದರಿಂದ ಉತ್ತಮ ಮಳೆ- ಬೆಳೆಯಾಗಿ ದೇಶ ಸುಭೀಕ್ಷೆಯಾಗಲು ವರುಣ ಪೂಜೆಯನ್ನು ನಡೆಸಲಾಗುವುದು’ ಎಂದು ಅವರು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ದೇವಾಲಯದಲ್ಲಿ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ (ಏ.4 ರಂದು) ಬೆಳಿಗ್ಗೆ 10.30ಕ್ಕೆ ಗೋಪುರ ಕಲಶ ಕುಂಭಾಭಿಷೇಕ, ಗಣಪತಿ, ಸುಬ್ರಹ್ಮಣ್ಯ, ಕರುಪ್ಪಸ್ವಾಮಿ, ಅಂಗಾಳ ಪರಮೇಶ್ವರಿ ದೇವಿಗೆ ಕುಂಭಾಭಿಷೇಕ ನಡೆದು ಬಳಿಕ ಗೋಪೂಜೆ ನಡೆಯಲಿದೆ’ ಎಂದರು.</p>.<p>ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ಟಿ.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಎನ್. ರಂಜನ್, ಟಿ.ಪಿ. ವೇಣುಗೋಪಾಲ್, ಟಿ.ಪಿ. ಗುರುನಾಥ್, ಟಿ.ಆರ್. ಜನಾರ್ಧನ್, ಟಿ.ಡಿ. ಹರೀಶ್ ಹಾಗೂ ಟಿ.ಸಿ. ನಿಶಾಂಕ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ:</strong> ಪಟ್ಟಣದ ತೆಲುಗರ ಬೀದಿಯಲ್ಲಿನ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ನಿಂದ ಏ.2 ರಿಂದ ಏ.4 ರವರೆಗೆ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಟಿ.ಪಿ ಕೃಷ್ಣ ತಿಳಿಸಿದರು.</p>.<p>‘500ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಮಹಾಕುಂಭಾಭಿಷೇಕ ಪೂಜೆ ಈ ವರ್ಷ ನಡೆಯಲಿದೆ. ಈ ಪೂಜಾ ಕೈಂಕರ್ಯಗಳನ್ನು ತಮಿಳುನಾಡಿನ 17 ಪುರೋಹಿತ ತಂತ್ರಿಗಳು ನಡೆಸಿ ಕೊಡಲಿದ್ದಾರೆ. ಆರಂಭದಲ್ಲಿ ತಲಕಾವೇರಿಯಿಂದ ತೀರ್ಥವನ್ನು ತಂದು ಅಂಗಾಳ ಪರಮೇಶ್ವರಿ ದೇವರಿಗೆ ಹಾಗೂ ಕುಂಭನಿಗೆ ಅಭಿಷೇಕ ಮಾಡಿ ನಂತರ ವಿವಿಧ ಪೂಜೆಗಳನ್ನು ನಡೆಸಲಾಗುವುದು. ಈ ಬಾರಿ ರಾಜ್ಯದಲ್ಲಿಯೇ ಬರಗಾಲ ಆವರಿಸಿಕೊಂಡಿರುವುದರಿಂದ ಉತ್ತಮ ಮಳೆ- ಬೆಳೆಯಾಗಿ ದೇಶ ಸುಭೀಕ್ಷೆಯಾಗಲು ವರುಣ ಪೂಜೆಯನ್ನು ನಡೆಸಲಾಗುವುದು’ ಎಂದು ಅವರು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ದೇವಾಲಯದಲ್ಲಿ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ (ಏ.4 ರಂದು) ಬೆಳಿಗ್ಗೆ 10.30ಕ್ಕೆ ಗೋಪುರ ಕಲಶ ಕುಂಭಾಭಿಷೇಕ, ಗಣಪತಿ, ಸುಬ್ರಹ್ಮಣ್ಯ, ಕರುಪ್ಪಸ್ವಾಮಿ, ಅಂಗಾಳ ಪರಮೇಶ್ವರಿ ದೇವಿಗೆ ಕುಂಭಾಭಿಷೇಕ ನಡೆದು ಬಳಿಕ ಗೋಪೂಜೆ ನಡೆಯಲಿದೆ’ ಎಂದರು.</p>.<p>ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ಟಿ.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಎನ್. ರಂಜನ್, ಟಿ.ಪಿ. ವೇಣುಗೋಪಾಲ್, ಟಿ.ಪಿ. ಗುರುನಾಥ್, ಟಿ.ಆರ್. ಜನಾರ್ಧನ್, ಟಿ.ಡಿ. ಹರೀಶ್ ಹಾಗೂ ಟಿ.ಸಿ. ನಿಶಾಂಕ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>