<p><strong>ಶನಿವಾರಸಂತೆ</strong>: ‘ಕೊಡಗು ಪ್ರತ್ಯೇಕ ರಾಜ್ಯವಾಗುವುದು ಬೇಡ’ ಎಂದು ಇಲ್ಲಿ ಭಾನುವಾರ ನಡೆದ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.</p>.<p>ಕೊಡವ ಲ್ಯಾಂಡ್ ಹೋರಟವನ್ನು ವಿರೋಧಿಸುವ ಕುರಿತಾಗಿ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಪ್ರತಿಭಟನೆ ನಡೆಸುವುದು, ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡುವುದು, ಕಾನೂನು ಹೋರಾಟ ಕೈಗೊಳ್ಳಲೂ ನಿರ್ಧರಿಸಲಾಯಿತು.</p>.<p>ಸಭೆಯಲ್ಲಿ ಸಂಘಟನೆಯ ಸಂಚಾಲಕರಾಗಿ ಚಂದ್ರಕಾಂತ್ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ವಿವಿಧ ಜನಾಂಗದಿಂದ 20 ಮಂದಿಯನ್ನು ನೇಮಿಸಲಾಯಿತು.</p>.<p>ಕೊಡಗು ಕೊಡವ ಲ್ಯಾಂಡ್ ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾದರೆ ಆಗುವ ಪರಿಣಾಮಗಳನ್ನು ಕುರಿತು ಹಲವು ಮಂದಿ ಮಾತನಾಡಿದರು.</p>.<p>ಸಭೆಯಲ್ಲಿ ಎಸ್.ಎಂ.ಚಂಗಪ್ಪ, ಶುಂಠಿ ಭರತ್ಕುಮಾರ್, ಡಿ.ಬಿ.ಧರ್ಮಪ್ಪ, ಎನ್.ಕೆ.ಅಪ್ಪಸ್ವಾಮಿ ಗೌಡ, ಎಸ್.ಎನ್.ರಘು, ಜಿ.ಎಂ.ಕಾಂತರಾಜ್, ಬಿ.ಕೆ.ಚಂದ್ರು, ಟಿ.ಆರ್.ಪುರುಷೋತ್ತಮ್, ರಂಗಸ್ವಾಮಿ, ಎನ್.ಬಿ.ನಾಗಪ್ಪ, ಸಿ.ಜೆ.ಗಿರೀಶ್, ಆನಂದ್, ಶಿವಾನಂದ್, ಬಿ.ಎಸ್.ಮಂಜುನಾಥ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ</strong>: ‘ಕೊಡಗು ಪ್ರತ್ಯೇಕ ರಾಜ್ಯವಾಗುವುದು ಬೇಡ’ ಎಂದು ಇಲ್ಲಿ ಭಾನುವಾರ ನಡೆದ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.</p>.<p>ಕೊಡವ ಲ್ಯಾಂಡ್ ಹೋರಟವನ್ನು ವಿರೋಧಿಸುವ ಕುರಿತಾಗಿ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಪ್ರತಿಭಟನೆ ನಡೆಸುವುದು, ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡುವುದು, ಕಾನೂನು ಹೋರಾಟ ಕೈಗೊಳ್ಳಲೂ ನಿರ್ಧರಿಸಲಾಯಿತು.</p>.<p>ಸಭೆಯಲ್ಲಿ ಸಂಘಟನೆಯ ಸಂಚಾಲಕರಾಗಿ ಚಂದ್ರಕಾಂತ್ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ವಿವಿಧ ಜನಾಂಗದಿಂದ 20 ಮಂದಿಯನ್ನು ನೇಮಿಸಲಾಯಿತು.</p>.<p>ಕೊಡಗು ಕೊಡವ ಲ್ಯಾಂಡ್ ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾದರೆ ಆಗುವ ಪರಿಣಾಮಗಳನ್ನು ಕುರಿತು ಹಲವು ಮಂದಿ ಮಾತನಾಡಿದರು.</p>.<p>ಸಭೆಯಲ್ಲಿ ಎಸ್.ಎಂ.ಚಂಗಪ್ಪ, ಶುಂಠಿ ಭರತ್ಕುಮಾರ್, ಡಿ.ಬಿ.ಧರ್ಮಪ್ಪ, ಎನ್.ಕೆ.ಅಪ್ಪಸ್ವಾಮಿ ಗೌಡ, ಎಸ್.ಎನ್.ರಘು, ಜಿ.ಎಂ.ಕಾಂತರಾಜ್, ಬಿ.ಕೆ.ಚಂದ್ರು, ಟಿ.ಆರ್.ಪುರುಷೋತ್ತಮ್, ರಂಗಸ್ವಾಮಿ, ಎನ್.ಬಿ.ನಾಗಪ್ಪ, ಸಿ.ಜೆ.ಗಿರೀಶ್, ಆನಂದ್, ಶಿವಾನಂದ್, ಬಿ.ಎಸ್.ಮಂಜುನಾಥ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>