<p>ಸೋಮವಾರಪೇಟೆ: ತಾಲ್ಲೂಕಿನ ಶನಿವಾರಸಂತೆ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, 2 ದಿನಗಳಿಂದ ಕಾಡಾನೆಯ ಚಲನವಲನವನ್ನು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.</p>.<p>ಈಚೆಗೆ ಒಬ್ಬರನ್ನು ಹತ್ಯೆ ಮಾಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಶನಿವಾರಸಂತೆ ಅರಣ್ಯ ಇಲಾಖೆಗೆ ಮೇಲಾಧಿಕಾರಿಗಳಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಅಧಿಕಾರಿಗಳ ತಂಡ ಕಾರ್ಯಚರಣೆ ಪ್ರಾರಂಭಿಸಿದೆ.</p>.<p>ಡಿಸಿಎಫ್ ಭಾಸ್ಕರ್ ಅವರ ನಿರ್ದೇಶನದಂತೆ ಎಸಿಫ್ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಶನಿವಾರಸಂತೆ ಆರ್ಎಫ್ಒ ಗಾನವಿ ಅವರ ನೇತ್ರತ್ವದಲ್ಲಿ ಕುಶಾಲನಗರ ಟಾಸ್ಕ್ ಫೋರ್ಸ್ನ ನಾಲ್ವರು ಸಿಬ್ಬಂದಿಯು ಕಾಡಾನೆ ಮಾಲಂಬಿ ಅರಣ್ಯದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಗುರುವಾರ ಕಾರ್ಯಚರಣೆ ಮುಂದುವರಿಯಲಿದೆ.</p>.<p>‘ಆಲೂರು, ಬಾಣಾವಾರ, ದೊಡ್ಡಳ್ಳಿ, ಕಣಗಾಲು, ಕಂತೆಬಸನಳ್ಳಿ, ಕೂಡುರಸ್ತೆ ಗ್ರಾಮಗಳಲ್ಲಿ ಕಾಡಾನೆ ಓಡಾಟವಿರುವುದರಿಂದ ಗ್ರಾಮ ನಿವಾಸಿಗಳು ಬೆಳಿಗ್ಗೆ 7 ಗಂಟೆಯವರೆಗೆ ಹೊರ ಹೋಗಬಾರದು’ ಎಂದು ಆರ್ಎಫ್ಒ ಗಾನವಿ ಮನವಿ ಮಾಡಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಭಾಸ್ಕರ್, ‘ಒಂದು ಕಾಡಾನೆ ಸೆರೆಗೆ ಅನುಮತಿ ಸಿಕ್ಕಿದೆ. ಆದರೆ, ಈ ಕಾಡನೆಯೂ ಅತ್ಯಂತ ವೇಗವಾಗಿ ಓಡಾಡುತ್ತಿದೆ. ಇದನ್ನು ಪತ್ತೆ ಹಚ್ಚುವುದೇ ತ್ರಾಸದಾಯಕವಾಗಿದೆ. ಇದರ ಗುರುತು ಪತ್ತೆಯಾದ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲಾಗುವುದು’ ಎಂದು ತಿಳಿಸಿದರು.</p>.<p>ಹೊಸಗುತ್ತಿ ಗ್ರಾಮದ ಕೃಷಿಕ ಜಗದೀಶ್ (49) ಅವರು ಭಾನುವಾರ ಬೆಳಿಗ್ಗೆ ಕಾಡಾನೆಯೊಂದರ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೋಮವಾರಪೇಟೆ: ತಾಲ್ಲೂಕಿನ ಶನಿವಾರಸಂತೆ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, 2 ದಿನಗಳಿಂದ ಕಾಡಾನೆಯ ಚಲನವಲನವನ್ನು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.</p>.<p>ಈಚೆಗೆ ಒಬ್ಬರನ್ನು ಹತ್ಯೆ ಮಾಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಶನಿವಾರಸಂತೆ ಅರಣ್ಯ ಇಲಾಖೆಗೆ ಮೇಲಾಧಿಕಾರಿಗಳಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಅಧಿಕಾರಿಗಳ ತಂಡ ಕಾರ್ಯಚರಣೆ ಪ್ರಾರಂಭಿಸಿದೆ.</p>.<p>ಡಿಸಿಎಫ್ ಭಾಸ್ಕರ್ ಅವರ ನಿರ್ದೇಶನದಂತೆ ಎಸಿಫ್ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಶನಿವಾರಸಂತೆ ಆರ್ಎಫ್ಒ ಗಾನವಿ ಅವರ ನೇತ್ರತ್ವದಲ್ಲಿ ಕುಶಾಲನಗರ ಟಾಸ್ಕ್ ಫೋರ್ಸ್ನ ನಾಲ್ವರು ಸಿಬ್ಬಂದಿಯು ಕಾಡಾನೆ ಮಾಲಂಬಿ ಅರಣ್ಯದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಗುರುವಾರ ಕಾರ್ಯಚರಣೆ ಮುಂದುವರಿಯಲಿದೆ.</p>.<p>‘ಆಲೂರು, ಬಾಣಾವಾರ, ದೊಡ್ಡಳ್ಳಿ, ಕಣಗಾಲು, ಕಂತೆಬಸನಳ್ಳಿ, ಕೂಡುರಸ್ತೆ ಗ್ರಾಮಗಳಲ್ಲಿ ಕಾಡಾನೆ ಓಡಾಟವಿರುವುದರಿಂದ ಗ್ರಾಮ ನಿವಾಸಿಗಳು ಬೆಳಿಗ್ಗೆ 7 ಗಂಟೆಯವರೆಗೆ ಹೊರ ಹೋಗಬಾರದು’ ಎಂದು ಆರ್ಎಫ್ಒ ಗಾನವಿ ಮನವಿ ಮಾಡಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಭಾಸ್ಕರ್, ‘ಒಂದು ಕಾಡಾನೆ ಸೆರೆಗೆ ಅನುಮತಿ ಸಿಕ್ಕಿದೆ. ಆದರೆ, ಈ ಕಾಡನೆಯೂ ಅತ್ಯಂತ ವೇಗವಾಗಿ ಓಡಾಡುತ್ತಿದೆ. ಇದನ್ನು ಪತ್ತೆ ಹಚ್ಚುವುದೇ ತ್ರಾಸದಾಯಕವಾಗಿದೆ. ಇದರ ಗುರುತು ಪತ್ತೆಯಾದ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲಾಗುವುದು’ ಎಂದು ತಿಳಿಸಿದರು.</p>.<p>ಹೊಸಗುತ್ತಿ ಗ್ರಾಮದ ಕೃಷಿಕ ಜಗದೀಶ್ (49) ಅವರು ಭಾನುವಾರ ಬೆಳಿಗ್ಗೆ ಕಾಡಾನೆಯೊಂದರ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>