<p><strong>ನಾಪೋಕ್ಲು</strong>: ಬಿರುಸಿನ ಮಳೆಯ ನಡುವೆ ರಸ್ತೆಗಳ ಅಧ್ವಾನ ಹೋಬಳಿಯಾದ್ಯಂತ ಎದ್ದು ಕಾಣುತ್ತಿದೆ. ಎಲ್ಲೆಲ್ಲೂ ರಸ್ತೆಹೊಂಡಗಳಾಗಿದ್ದು, ವಾಹನ ಚಾಲಕರಿಗೆ ರಸ್ತೆಗಳು ದುಸ್ವಪ್ನವಾಗಿಯೇ ಕಾಡುತ್ತಿವೆ. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಹೊಂಡಗಳಾಗಿದ್ದು, ವಾಹನ ಚಾಲಕರು ಎದ್ದುಬಿದ್ದು ಸಂಚರಿಸುವಂತಾಗಿದೆ. ಕೆಲವೆಡೆ ರಸ್ತೆ ಸಂಪರ್ಕವೇ ಕಡಿದುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಸಮೀಪದ ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ಮಕ್ಕಿಕಡು ಸೇತುವೆ ಬಿರುಸಿನ ಮಳೆಯಿಂದ ಪ್ರವಾಹ ಏರ್ಪಟ್ಟು ಮುಳುಗಡೆಯಾಗಿತ್ತು. ಸಂಪರ್ಕ ರಸ್ತೆಯಲ್ಲೂ ನೀರು ಶೇಖರಣೆಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿತು. ಬಿರುಸಿನ ಮಳೆ ತಗ್ಗುವ ವೇಳೆಗೆ ರಸ್ತೆ ಗುಂಡಿ ಬಿದ್ದಿದೆ. ಎರಡು ಗದ್ದೆಗಳ ನಡುವೆ ನೀರು ಹರಿದು ಹೋಗಲು ಹಾಕಿದ್ದ ಮೋರಿ ಕುಸಿದಿದ್ದು ಮಾತ್ರವಲ್ಲದೆ ರಸ್ತೆಯ ತಿರುವಿನಲ್ಲಿ ರಸ್ತೆಯೂ ಕುಸಿತಗೊಂಡಿದ್ದು, ಸಂಚಾರ ಸ್ಥಗಿತದ ಭೀತಿ ಎದುರಾಗಿದೆ. ಪ್ರವಾಹ ಇಳಿದ ಸಂದರ್ಭದಲ್ಲಿ ರಸ್ತೆಯಲ್ಲಿ ದೊಡ್ಡ ಹೊಂಡ ಗೋಚರಿಸಿದ್ದು,ವಾಹನ ಸಂಚಾರಕ್ಕೆ ತೊಡಕಾಗುವುದನ್ನು ಮನಗಂಡ ಗ್ರಾಮ ಪಂಚಾಯಿತಿ ಗುಂಡಿಗೆ ಜಲ್ಲಿ ತುಂಬಿ ಮುಚ್ಚಿ ತಾತ್ಕಾಲಿಕ ರಸ್ತೆ ನಿರ್ಮಿಸಿದೆ.</p>.<p>ಇತ್ತೀಚೆಗಷ್ಟೇ ಮಕ್ಕಿಕಡು ಸೇತುವೆ ನಿರ್ಮಾಣದಿಂದಾಗಿ ನಾಪೋಕ್ಲುವಿನಿಂದ ಮೂರ್ನಾಡು, ಪಾರಾಣೆ, ವಿರಾಜಪೇಟೆ ಭಾಗಗಳಿಗೆ ತೆರಳುವ ಮಂದಿಗೆ ಬಹಳ ಅನುಕೂಲವಾಗಿತ್ತು. ಸೇತುವೆಯ ಬಳಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ, ದೇವಾಲಯದಿಂದ ಸ್ವಲ್ಪ ಮುಂದಕ್ಕೆ ಇಳಿಜಾರಿನಲ್ಲಿ ಕಿರಿದಾದ ರಸ್ತೆ ಇದ್ದು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿವೆ. ಡಾಂಬರು ಕಿತ್ತು ಹೋಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯ ಮರು ಡಾಂಬರೀಕರಣ ಮಾಡಬೇಕು ಎಂದು ಸ್ಥಳೀಯ ನಿವಾಸಿ ಕೊಂಡೀರ ಗಣೇಶ್ ಒತ್ತಾಯಿಸಿದ್ದಾರೆ.</p>.<p>ಮಳೆಗಾಲದ ಆರಂಭದಲ್ಲಿ ಸಾಮಾನ್ಯವಾಗಿರುವ ರಸ್ತೆಗಳು ಮಳೆಗಾಲ ಕಳೆಯುವ ವೇಳೆಗೆ ಸಂಪೂರ್ಣ ಹಾಳಾಗಿಬಿಡುತ್ತವೆ. ವರ್ಷದ ಆರು ತಿಂಗಳು ಮಳೆಗಾಲ ಇರುವುದರಿಂದ ಗ್ರಾಮೀಣ ರಸ್ತೆಗಳಲ್ಲಿ ಸಮಸ್ಯೆ ಕಾಡುತ್ತದೆ. ಬಹಳಷ್ಟು ಗ್ರಾಮೀಣ ರಸ್ತೆಗಳಲ್ಲಿ ಬಿರುಸಿನ ಮಳೆಯಾದ ಸಂದರ್ಭದಲ್ಲಿ ಮರಳು, ಮಣ್ಣಿನರಾಶಿ ರಸ್ತೆಗೆ ಬಂದು ರಸ್ತೆಯಲ್ಲಿ ಹೊಂಡಗುಂಡಿಗಳಾಗುತ್ತಿವೆ. ಚರಂಡಿಗಳು ಇಲ್ಲದೇ ಇರುವುದರಿಂದ ರಸ್ತೆಯಲ್ಲಿ ಸಂಪೂರ್ಣವಾಗಿ ನೀರು ಹರಿದು ರಸ್ತೆಗಳು ಕೆರೆಯಂತಾಗುತ್ತವೆ. ಹೊಂಡಗಳು ಗೋಚರಿಸುವುದಿಲ್ಲ. ಹೀಗಾಗಿ, ಚಾಲಕರಿಗೆ ದೊಡ್ಡ ಸಮಸ್ಯೆ ಆಗುತ್ತಿದೆ.</p>.<p>ಮಳೆಯಿಂದಾಗಿ ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಡಾಂಬರು ಮಾಯವಾಗಿದೆ. ಸಮೀಪದ ಎಮ್ಮೆಮಾಡು, ಪೇರೂರು ಗ್ರಾಮಗಳಲ್ಲಿ ಜಲ್ಲಿಗಳೇ ಎದ್ದು ಜಲ್ಲಿಗಳ ರಾಶಿಯೇ ಸಾಲು ಸಾಲಾಗಿ ಗೋಚರಿಸುತ್ತವೆ. ರಸ್ತೆ ಹೊಂಡಗಳಲ್ಲಿ ಮಳೆ ನೀರು ನಿಂತು ಚಾಲಕರಿಗೆ ರಸ್ತೆ ಯಾವುದು? ಗುಂಡಿ ಯಾವುದು ಎಂಬುದೇ ಗೋಚರಿಸುತ್ತಿಲ್ಲ. ಹೀಗಾಗಿ, ರಸ್ತೆಗಳಲ್ಲಿ ಎದ್ದು ಬಿದ್ದು ಸಾಗುವ ಪರಿಸ್ಥಿತಿ ಇದೆ. ಸಂಪೂರ್ಣವಾಗಿ ನೀರು ಹರಿದುಹೋಗುವಂತೆ ಚರಂಡಿಗಳನ್ನು ನಿರ್ಮಿಸಿ ಬಳಿಕ ರಸ್ತೆ ಡಾಂಬರೀಕರಣ ಮಾಡಿದರೆ ಒಂದಷ್ಟು ಸಮಯ ರಸ್ತೆ ಉಳಿದೀತು ಎಂಬುದು ಸ್ಥಳೀಯರ ಅಭಿಪ್ರಾಯ.</p>.<p><strong>ರಸ್ತೆ ಗುಂಡಿ ಮುಚ್ಚಿದ ಆಟೊ ಚಾಲಕರು</strong></p><p>ನಾಪೋಕ್ಲು ಸಮೀಪದ ಹಳೆ ತಾಲೂಕಿನ ಪೊನ್ನು ಮುತ್ತಪ್ಪ ದೇವಾಲಯದ ಬಳಿ ಗುರುವಾರ ಆಟೊ ಚಾಲಕರು ಒಟ್ಟುಗೂಡಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿದ್ದರು. ಆಟೊ ಚಾಲಕ ರಜಾಕ್ ಮಾತನಾಡಿ ‘ರಸ್ತೆ ಹೊಂಡಗಳಿಂದಾಗಿ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯನ್ನು ದುರಸ್ತಿಪಡಿಸುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಂದು ಆಟೊ ಚಾಲಕರ ಶ್ರಮದಾನ ಮಾಡಿದ್ದಾರೆ. ರಸ್ತೆ ಹೊಂಡಗಳನ್ನು ಮುಚ್ಚಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು</strong>: ಬಿರುಸಿನ ಮಳೆಯ ನಡುವೆ ರಸ್ತೆಗಳ ಅಧ್ವಾನ ಹೋಬಳಿಯಾದ್ಯಂತ ಎದ್ದು ಕಾಣುತ್ತಿದೆ. ಎಲ್ಲೆಲ್ಲೂ ರಸ್ತೆಹೊಂಡಗಳಾಗಿದ್ದು, ವಾಹನ ಚಾಲಕರಿಗೆ ರಸ್ತೆಗಳು ದುಸ್ವಪ್ನವಾಗಿಯೇ ಕಾಡುತ್ತಿವೆ. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಹೊಂಡಗಳಾಗಿದ್ದು, ವಾಹನ ಚಾಲಕರು ಎದ್ದುಬಿದ್ದು ಸಂಚರಿಸುವಂತಾಗಿದೆ. ಕೆಲವೆಡೆ ರಸ್ತೆ ಸಂಪರ್ಕವೇ ಕಡಿದುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಸಮೀಪದ ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ಮಕ್ಕಿಕಡು ಸೇತುವೆ ಬಿರುಸಿನ ಮಳೆಯಿಂದ ಪ್ರವಾಹ ಏರ್ಪಟ್ಟು ಮುಳುಗಡೆಯಾಗಿತ್ತು. ಸಂಪರ್ಕ ರಸ್ತೆಯಲ್ಲೂ ನೀರು ಶೇಖರಣೆಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿತು. ಬಿರುಸಿನ ಮಳೆ ತಗ್ಗುವ ವೇಳೆಗೆ ರಸ್ತೆ ಗುಂಡಿ ಬಿದ್ದಿದೆ. ಎರಡು ಗದ್ದೆಗಳ ನಡುವೆ ನೀರು ಹರಿದು ಹೋಗಲು ಹಾಕಿದ್ದ ಮೋರಿ ಕುಸಿದಿದ್ದು ಮಾತ್ರವಲ್ಲದೆ ರಸ್ತೆಯ ತಿರುವಿನಲ್ಲಿ ರಸ್ತೆಯೂ ಕುಸಿತಗೊಂಡಿದ್ದು, ಸಂಚಾರ ಸ್ಥಗಿತದ ಭೀತಿ ಎದುರಾಗಿದೆ. ಪ್ರವಾಹ ಇಳಿದ ಸಂದರ್ಭದಲ್ಲಿ ರಸ್ತೆಯಲ್ಲಿ ದೊಡ್ಡ ಹೊಂಡ ಗೋಚರಿಸಿದ್ದು,ವಾಹನ ಸಂಚಾರಕ್ಕೆ ತೊಡಕಾಗುವುದನ್ನು ಮನಗಂಡ ಗ್ರಾಮ ಪಂಚಾಯಿತಿ ಗುಂಡಿಗೆ ಜಲ್ಲಿ ತುಂಬಿ ಮುಚ್ಚಿ ತಾತ್ಕಾಲಿಕ ರಸ್ತೆ ನಿರ್ಮಿಸಿದೆ.</p>.<p>ಇತ್ತೀಚೆಗಷ್ಟೇ ಮಕ್ಕಿಕಡು ಸೇತುವೆ ನಿರ್ಮಾಣದಿಂದಾಗಿ ನಾಪೋಕ್ಲುವಿನಿಂದ ಮೂರ್ನಾಡು, ಪಾರಾಣೆ, ವಿರಾಜಪೇಟೆ ಭಾಗಗಳಿಗೆ ತೆರಳುವ ಮಂದಿಗೆ ಬಹಳ ಅನುಕೂಲವಾಗಿತ್ತು. ಸೇತುವೆಯ ಬಳಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ, ದೇವಾಲಯದಿಂದ ಸ್ವಲ್ಪ ಮುಂದಕ್ಕೆ ಇಳಿಜಾರಿನಲ್ಲಿ ಕಿರಿದಾದ ರಸ್ತೆ ಇದ್ದು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿವೆ. ಡಾಂಬರು ಕಿತ್ತು ಹೋಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯ ಮರು ಡಾಂಬರೀಕರಣ ಮಾಡಬೇಕು ಎಂದು ಸ್ಥಳೀಯ ನಿವಾಸಿ ಕೊಂಡೀರ ಗಣೇಶ್ ಒತ್ತಾಯಿಸಿದ್ದಾರೆ.</p>.<p>ಮಳೆಗಾಲದ ಆರಂಭದಲ್ಲಿ ಸಾಮಾನ್ಯವಾಗಿರುವ ರಸ್ತೆಗಳು ಮಳೆಗಾಲ ಕಳೆಯುವ ವೇಳೆಗೆ ಸಂಪೂರ್ಣ ಹಾಳಾಗಿಬಿಡುತ್ತವೆ. ವರ್ಷದ ಆರು ತಿಂಗಳು ಮಳೆಗಾಲ ಇರುವುದರಿಂದ ಗ್ರಾಮೀಣ ರಸ್ತೆಗಳಲ್ಲಿ ಸಮಸ್ಯೆ ಕಾಡುತ್ತದೆ. ಬಹಳಷ್ಟು ಗ್ರಾಮೀಣ ರಸ್ತೆಗಳಲ್ಲಿ ಬಿರುಸಿನ ಮಳೆಯಾದ ಸಂದರ್ಭದಲ್ಲಿ ಮರಳು, ಮಣ್ಣಿನರಾಶಿ ರಸ್ತೆಗೆ ಬಂದು ರಸ್ತೆಯಲ್ಲಿ ಹೊಂಡಗುಂಡಿಗಳಾಗುತ್ತಿವೆ. ಚರಂಡಿಗಳು ಇಲ್ಲದೇ ಇರುವುದರಿಂದ ರಸ್ತೆಯಲ್ಲಿ ಸಂಪೂರ್ಣವಾಗಿ ನೀರು ಹರಿದು ರಸ್ತೆಗಳು ಕೆರೆಯಂತಾಗುತ್ತವೆ. ಹೊಂಡಗಳು ಗೋಚರಿಸುವುದಿಲ್ಲ. ಹೀಗಾಗಿ, ಚಾಲಕರಿಗೆ ದೊಡ್ಡ ಸಮಸ್ಯೆ ಆಗುತ್ತಿದೆ.</p>.<p>ಮಳೆಯಿಂದಾಗಿ ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಡಾಂಬರು ಮಾಯವಾಗಿದೆ. ಸಮೀಪದ ಎಮ್ಮೆಮಾಡು, ಪೇರೂರು ಗ್ರಾಮಗಳಲ್ಲಿ ಜಲ್ಲಿಗಳೇ ಎದ್ದು ಜಲ್ಲಿಗಳ ರಾಶಿಯೇ ಸಾಲು ಸಾಲಾಗಿ ಗೋಚರಿಸುತ್ತವೆ. ರಸ್ತೆ ಹೊಂಡಗಳಲ್ಲಿ ಮಳೆ ನೀರು ನಿಂತು ಚಾಲಕರಿಗೆ ರಸ್ತೆ ಯಾವುದು? ಗುಂಡಿ ಯಾವುದು ಎಂಬುದೇ ಗೋಚರಿಸುತ್ತಿಲ್ಲ. ಹೀಗಾಗಿ, ರಸ್ತೆಗಳಲ್ಲಿ ಎದ್ದು ಬಿದ್ದು ಸಾಗುವ ಪರಿಸ್ಥಿತಿ ಇದೆ. ಸಂಪೂರ್ಣವಾಗಿ ನೀರು ಹರಿದುಹೋಗುವಂತೆ ಚರಂಡಿಗಳನ್ನು ನಿರ್ಮಿಸಿ ಬಳಿಕ ರಸ್ತೆ ಡಾಂಬರೀಕರಣ ಮಾಡಿದರೆ ಒಂದಷ್ಟು ಸಮಯ ರಸ್ತೆ ಉಳಿದೀತು ಎಂಬುದು ಸ್ಥಳೀಯರ ಅಭಿಪ್ರಾಯ.</p>.<p><strong>ರಸ್ತೆ ಗುಂಡಿ ಮುಚ್ಚಿದ ಆಟೊ ಚಾಲಕರು</strong></p><p>ನಾಪೋಕ್ಲು ಸಮೀಪದ ಹಳೆ ತಾಲೂಕಿನ ಪೊನ್ನು ಮುತ್ತಪ್ಪ ದೇವಾಲಯದ ಬಳಿ ಗುರುವಾರ ಆಟೊ ಚಾಲಕರು ಒಟ್ಟುಗೂಡಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿದ್ದರು. ಆಟೊ ಚಾಲಕ ರಜಾಕ್ ಮಾತನಾಡಿ ‘ರಸ್ತೆ ಹೊಂಡಗಳಿಂದಾಗಿ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯನ್ನು ದುರಸ್ತಿಪಡಿಸುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಂದು ಆಟೊ ಚಾಲಕರ ಶ್ರಮದಾನ ಮಾಡಿದ್ದಾರೆ. ರಸ್ತೆ ಹೊಂಡಗಳನ್ನು ಮುಚ್ಚಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>