<p><strong>ಸೋಮವಾರಪೇಟೆ</strong>: ಬೈಂದೂರಿನಿಂದ ಮಾಗಡಿಗೆ ತೆರಳುವ ರಾಜ್ಯ ಹೆದ್ದಾರಿಯ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬಿಡು ಗ್ರಾಮದಲ್ಲಿ, ರಸ್ತೆಯ ಮೇಲೆ ಸುಮಾರು ಒಂದೂವರೆ ಅಡಿಯಷ್ಟು ಕೆಸರಿನೊಂದಿಗೆ ನೀರು ನಿಲ್ಲುತ್ತಿದ್ದರೂ, ಅದನ್ನು ಸರಿಪಡಿಸಲು ಮುಂದಾಗದ ಬಗ್ಗೆ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.</p><p>ಮೊದಲೇ ಈ ರಸ್ತೆ ಕಿರಿದಾಗಿದ್ದು, ಒಂದು ವಾಹನ ಮಾತ್ರ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇದೆ. ಎದುರಿನಿಂದ ಮತ್ತೊಂದು ವಾಹನ ಬಂದಲ್ಲಿ ರಸ್ತೆಯ ಬದಿಗೆ ಇಳಿಸಿ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಕಿರಿದಾದ ರಸ್ತೆಯಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದರೂ, ಹಲವು ವರ್ಷಗಳಿಂದ ರಸ್ತೆ ನಿರ್ವಹಣೆ ಮಾಡುವಂತೆ ಲೊಕೋಪಯೋಗಿ ಇಲಾಖೆಯವರನ್ನು ಒತ್ತಾಯಿಸಿದರೂ, ಇಂದಿಗೂ ರಸ್ತೆ ಸುಸ್ಥಿತಿಗೆ ತಲುಪಲಿಲ್ಲ. ಮಳೆಗಾಲವಾಗಿರುವುದರಿಂದ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.</p><p>ಇದರೊಂದಿಗೆ ಕಲ್ಕಂದೂರು ಗ್ರಾಮದಿಂದ ಕೂತಿ ಗ್ರಾಮದವರೆಗೆ 13 ಕಿ.ಮೀ ವರೆಗೂ ಸರಿಯಾದ ಚರಂಡಿ ನಿರ್ಮಿಸದೆ, ಕಾಟಾಚಾರಕ್ಕೆ ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ. ವರ್ಷದಲ್ಲಿ ಮಳೆಗಾಲಕ್ಕೂ ಮುನ್ನ ಮತ್ತು ಮಳೆಗಾಲದ ನಂತರ ಎರಡು ಬಾರಿ ರಸ್ತೆ ಬದಿಯ ಕಾಡು ಕಡಿಯುವುದು, ಚರಂಡಿ ನಿರ್ಮಾಣ ಮಾಡುವುದು ಹಾಗೂ ಗುಂಡಿ ಮುಚ್ಚಿಸುವ ಕೆಲಸ ಇಲಾಖೆ ಮಾಡಿಸಬೇಕಿದೆ. ಅದಾವುದು ಇಲ್ಲಿ ಆಗುತ್ತಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಸರಿಯಾಗಿ ಚರಂಡಿ ಮಾಡದಿರುವುದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಕ್ಕಪಕ್ಕ ಕೆಸರು ಇದರೊಂದಿಗೆ ಬಂದು ರಸ್ತೆಯಲ್ಲಿ ಸಂಗ್ರಹವಾಗುತ್ತಿದೆ. ಕೆಲವೆಡೆ ರಸ್ತೆ ಬದಿ ಕಿತ್ತುಬಂದಿದ್ದು, ಎದುರಿನಿಂದ ವಾಹನಗಳು ಬಂದ ಸಂದರ್ಭ ದ್ವಿಚಕ್ರ ವಾಹನಗಳು ಸಾಕಷ್ಟು ಭಾರಿ ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದು ಸ್ಥಳೀಯರಾದ ಕೂತಿ ಗ್ರಾಮದ ಗಿರೀಶ್, ವಿನಯ್, ಮೋಹನ್, ಉದಯ್ ಕುಮಾರ್ ಗ್ರಾಮದ ಗಿರೀಶ್ ದೂರಿದರು.</p><p>ಈ ರಸ್ತೆಯಲ್ಲಿ ಸೋಮವಾರಪೇಟೆ ಪಟ್ಟಣದ ಶಿಕ್ಷಣ ಸಂಸ್ಥೆಗಳ ಶಾಲಾ ವಾಹನ ಹಾಗೂ ಸರ್ಕಾರಿ ಬಸ್ ಸಂಚಾರ ಮಾಡುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ವಾಹನಗಳು ಹೆಚ್ಚಾಗಿರುತ್ತವೆ. ಇವುಗಳೊಂದಿಗೆ ಹೊರ ಊರುಗಳಿಂದ ಪಿಕ್ಅಪ್ ವಾಹನಗಳು ಕಾರ್ಮಿಕರನ್ನು ಹತ್ತಿಸಿಕೊಂಡು ಅತಿ ವೇಗವಾಗಿ ಇದೇ ರಸ್ತೆಯಲ್ಲಿ ಬರುತ್ತವೆ. ರಸ್ತೆಯಲ್ಲಿ ಸುರಕ್ಷಿತವಾಗಿ ಗುರಿ ತಲುಪುವುದೇ ಸಾಹಸವಾಗಿದೆ. ಯಾವಾಗ ಇಲಾಖಾಧಿಕಾರಿಗಳನ್ನು ಕೇಳಿದರೂ, ಸಿದ್ಧ ಉತ್ತರ ನೀಡುತ್ತಾರೆ. ಆದರೆ, ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ಮಾಡುತ್ತಿಲ್ಲ ಎಂದು ಹೊಸಬೀಡು, ತೋಳುರುಶೆಟ್ಟಳ್ಳಿ, ಕೂತಿ ಗ್ರಾಮಸ್ಥರು ಆರೋಪಿಸಿದರು.</p><p>ಈ ರಸ್ತೆಯ ಸಮಸ್ಯೆಗಳನ್ನು ಕೂಡಲೇ ಲೋಕೋಪಯೋಗಿ ಇಲಾಖೆಯವರು ಪರಿಹರಿಸಬೇಕು. ತಕ್ಷಣವೇ ಮುಖ್ಯ ರಸ್ತೆಯ ಬದಿ ಚರಂಡಿ ವ್ಯವಸ್ಥೆ ಕಲ್ಪಿಸಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು ಬದಿಯಲ್ಲಿ ಹರಿಯುವಂತೆ ಮಾಡಬೇಕು. ರಸ್ತೆಯ ಮೇಲಿರುವ ಮಣ್ಣನ್ನು ತೆರವುಗೊಳಿಸಬೇಕು ಎಂದು ತೋಳುರುಶೆಟ್ಟಳ್ಳಿಯ ಜೀವನ್, ಹೇಮಂತ್, ತೀರ್ಥ ಅವರು ಒತ್ತಾಯಿಸಿದರು.</p>.<div><blockquote>ರಸ್ತೆ ಬದಿಯ ಕಾಡು ಬೆಳೆದಿದ್ದು, ಎದುರಿನಿಂದ ಬರುವ ವಾಹನಗಳು ಕಾಣಿಸುತ್ತಿಲ್ಲ. ಭಾರಿ ಅನಾಹುತ ನಡೆಯುವ ಮುನ್ನ ರಸ್ತೆ ಬದಿಯ ಕಾಡನ್ನು ಕಡಿದು ಸುಗಮ ಸಂಚಾರಕ್ಕೆ ಅವಕಾಶ </blockquote><span class="attribution">ಮಾಡಿಕೊಡಬೇಕುಪವನ್, ಹೊಸಬೀಡು ಗ್ರಾಮ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ</strong>: ಬೈಂದೂರಿನಿಂದ ಮಾಗಡಿಗೆ ತೆರಳುವ ರಾಜ್ಯ ಹೆದ್ದಾರಿಯ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬಿಡು ಗ್ರಾಮದಲ್ಲಿ, ರಸ್ತೆಯ ಮೇಲೆ ಸುಮಾರು ಒಂದೂವರೆ ಅಡಿಯಷ್ಟು ಕೆಸರಿನೊಂದಿಗೆ ನೀರು ನಿಲ್ಲುತ್ತಿದ್ದರೂ, ಅದನ್ನು ಸರಿಪಡಿಸಲು ಮುಂದಾಗದ ಬಗ್ಗೆ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.</p><p>ಮೊದಲೇ ಈ ರಸ್ತೆ ಕಿರಿದಾಗಿದ್ದು, ಒಂದು ವಾಹನ ಮಾತ್ರ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇದೆ. ಎದುರಿನಿಂದ ಮತ್ತೊಂದು ವಾಹನ ಬಂದಲ್ಲಿ ರಸ್ತೆಯ ಬದಿಗೆ ಇಳಿಸಿ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಕಿರಿದಾದ ರಸ್ತೆಯಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದರೂ, ಹಲವು ವರ್ಷಗಳಿಂದ ರಸ್ತೆ ನಿರ್ವಹಣೆ ಮಾಡುವಂತೆ ಲೊಕೋಪಯೋಗಿ ಇಲಾಖೆಯವರನ್ನು ಒತ್ತಾಯಿಸಿದರೂ, ಇಂದಿಗೂ ರಸ್ತೆ ಸುಸ್ಥಿತಿಗೆ ತಲುಪಲಿಲ್ಲ. ಮಳೆಗಾಲವಾಗಿರುವುದರಿಂದ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.</p><p>ಇದರೊಂದಿಗೆ ಕಲ್ಕಂದೂರು ಗ್ರಾಮದಿಂದ ಕೂತಿ ಗ್ರಾಮದವರೆಗೆ 13 ಕಿ.ಮೀ ವರೆಗೂ ಸರಿಯಾದ ಚರಂಡಿ ನಿರ್ಮಿಸದೆ, ಕಾಟಾಚಾರಕ್ಕೆ ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ. ವರ್ಷದಲ್ಲಿ ಮಳೆಗಾಲಕ್ಕೂ ಮುನ್ನ ಮತ್ತು ಮಳೆಗಾಲದ ನಂತರ ಎರಡು ಬಾರಿ ರಸ್ತೆ ಬದಿಯ ಕಾಡು ಕಡಿಯುವುದು, ಚರಂಡಿ ನಿರ್ಮಾಣ ಮಾಡುವುದು ಹಾಗೂ ಗುಂಡಿ ಮುಚ್ಚಿಸುವ ಕೆಲಸ ಇಲಾಖೆ ಮಾಡಿಸಬೇಕಿದೆ. ಅದಾವುದು ಇಲ್ಲಿ ಆಗುತ್ತಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಸರಿಯಾಗಿ ಚರಂಡಿ ಮಾಡದಿರುವುದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಕ್ಕಪಕ್ಕ ಕೆಸರು ಇದರೊಂದಿಗೆ ಬಂದು ರಸ್ತೆಯಲ್ಲಿ ಸಂಗ್ರಹವಾಗುತ್ತಿದೆ. ಕೆಲವೆಡೆ ರಸ್ತೆ ಬದಿ ಕಿತ್ತುಬಂದಿದ್ದು, ಎದುರಿನಿಂದ ವಾಹನಗಳು ಬಂದ ಸಂದರ್ಭ ದ್ವಿಚಕ್ರ ವಾಹನಗಳು ಸಾಕಷ್ಟು ಭಾರಿ ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದು ಸ್ಥಳೀಯರಾದ ಕೂತಿ ಗ್ರಾಮದ ಗಿರೀಶ್, ವಿನಯ್, ಮೋಹನ್, ಉದಯ್ ಕುಮಾರ್ ಗ್ರಾಮದ ಗಿರೀಶ್ ದೂರಿದರು.</p><p>ಈ ರಸ್ತೆಯಲ್ಲಿ ಸೋಮವಾರಪೇಟೆ ಪಟ್ಟಣದ ಶಿಕ್ಷಣ ಸಂಸ್ಥೆಗಳ ಶಾಲಾ ವಾಹನ ಹಾಗೂ ಸರ್ಕಾರಿ ಬಸ್ ಸಂಚಾರ ಮಾಡುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ವಾಹನಗಳು ಹೆಚ್ಚಾಗಿರುತ್ತವೆ. ಇವುಗಳೊಂದಿಗೆ ಹೊರ ಊರುಗಳಿಂದ ಪಿಕ್ಅಪ್ ವಾಹನಗಳು ಕಾರ್ಮಿಕರನ್ನು ಹತ್ತಿಸಿಕೊಂಡು ಅತಿ ವೇಗವಾಗಿ ಇದೇ ರಸ್ತೆಯಲ್ಲಿ ಬರುತ್ತವೆ. ರಸ್ತೆಯಲ್ಲಿ ಸುರಕ್ಷಿತವಾಗಿ ಗುರಿ ತಲುಪುವುದೇ ಸಾಹಸವಾಗಿದೆ. ಯಾವಾಗ ಇಲಾಖಾಧಿಕಾರಿಗಳನ್ನು ಕೇಳಿದರೂ, ಸಿದ್ಧ ಉತ್ತರ ನೀಡುತ್ತಾರೆ. ಆದರೆ, ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ಮಾಡುತ್ತಿಲ್ಲ ಎಂದು ಹೊಸಬೀಡು, ತೋಳುರುಶೆಟ್ಟಳ್ಳಿ, ಕೂತಿ ಗ್ರಾಮಸ್ಥರು ಆರೋಪಿಸಿದರು.</p><p>ಈ ರಸ್ತೆಯ ಸಮಸ್ಯೆಗಳನ್ನು ಕೂಡಲೇ ಲೋಕೋಪಯೋಗಿ ಇಲಾಖೆಯವರು ಪರಿಹರಿಸಬೇಕು. ತಕ್ಷಣವೇ ಮುಖ್ಯ ರಸ್ತೆಯ ಬದಿ ಚರಂಡಿ ವ್ಯವಸ್ಥೆ ಕಲ್ಪಿಸಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು ಬದಿಯಲ್ಲಿ ಹರಿಯುವಂತೆ ಮಾಡಬೇಕು. ರಸ್ತೆಯ ಮೇಲಿರುವ ಮಣ್ಣನ್ನು ತೆರವುಗೊಳಿಸಬೇಕು ಎಂದು ತೋಳುರುಶೆಟ್ಟಳ್ಳಿಯ ಜೀವನ್, ಹೇಮಂತ್, ತೀರ್ಥ ಅವರು ಒತ್ತಾಯಿಸಿದರು.</p>.<div><blockquote>ರಸ್ತೆ ಬದಿಯ ಕಾಡು ಬೆಳೆದಿದ್ದು, ಎದುರಿನಿಂದ ಬರುವ ವಾಹನಗಳು ಕಾಣಿಸುತ್ತಿಲ್ಲ. ಭಾರಿ ಅನಾಹುತ ನಡೆಯುವ ಮುನ್ನ ರಸ್ತೆ ಬದಿಯ ಕಾಡನ್ನು ಕಡಿದು ಸುಗಮ ಸಂಚಾರಕ್ಕೆ ಅವಕಾಶ </blockquote><span class="attribution">ಮಾಡಿಕೊಡಬೇಕುಪವನ್, ಹೊಸಬೀಡು ಗ್ರಾಮ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>