<p><strong>ಸುಂಟಿಕೊಪ್ಪ (ಕೊಡಗು):</strong> ಸಮೀಪದ ಹೊಸತೋಟ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಗುರುವಾರ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ 2ನೇ ಐಗೂರು ನಿವಾಸಿ ರಮ್ಲಾನ್ ಅವರ ಪುತ್ರ ಮುಬಾಶೀರ್ (18) ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ವಿಷಯ ತಿಳಿದು ಯುವಕನ ಅಜ್ಜಿ ರುಕಿಯಾ (62) ಅವರೂ ಹೃದಯಾಘಾತದಿಂದ ನಿಧನರಾದ ಹೃದಯವಿದ್ರಾವಕ ಘಟನೆ ನಡೆದಿದೆ. ಯುವಕನ ತಾಯಿಯೂ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. </p>.<p>ಹೊಸತೋಟ ಹಾಗೂ ಐಗೂರಿವಿನ 11 ಮಂದಿ ಯುವಕರು ಗುರುವಾರ ಬೆಳಿಗ್ಗೆ ಫುಟ್ಬಾಲ್ ಆಡಲು ತೆರಳಿದ್ದರು. ನಂತರ, ಸ್ನಾನ ಮಾಡಲೆಂದು ಮುಬಾಶೀರ್ ಹೊಳೆಗೆ ಇಳಿದಿದ್ದಾನೆ. ಆದರೆ, ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಅದನ್ನು ಕಣ್ಣಾರೆ ಕಂಡಿದ್ದ ಉಳಿದವರ ಅಲ್ಲಿಂದ ತೆರಳಿದ್ದರು.</p>.<p>ಗುರುವಾರ ರಾತ್ರಿ 10 ಗಂಟೆಯಾದರೂ ಮುಬಾಶೀರ್ ಮನೆಗೆ ಬಂದಿರಲಿಲ್ಲ. ಸ್ನೇಹಿತರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಿಗ್ಗೆ ಯುವಕನ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದು ಅಜ್ಜಿ ನಿಧನರಾದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು.</p>.<p>ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ (ಕೊಡಗು):</strong> ಸಮೀಪದ ಹೊಸತೋಟ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಗುರುವಾರ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ 2ನೇ ಐಗೂರು ನಿವಾಸಿ ರಮ್ಲಾನ್ ಅವರ ಪುತ್ರ ಮುಬಾಶೀರ್ (18) ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ವಿಷಯ ತಿಳಿದು ಯುವಕನ ಅಜ್ಜಿ ರುಕಿಯಾ (62) ಅವರೂ ಹೃದಯಾಘಾತದಿಂದ ನಿಧನರಾದ ಹೃದಯವಿದ್ರಾವಕ ಘಟನೆ ನಡೆದಿದೆ. ಯುವಕನ ತಾಯಿಯೂ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. </p>.<p>ಹೊಸತೋಟ ಹಾಗೂ ಐಗೂರಿವಿನ 11 ಮಂದಿ ಯುವಕರು ಗುರುವಾರ ಬೆಳಿಗ್ಗೆ ಫುಟ್ಬಾಲ್ ಆಡಲು ತೆರಳಿದ್ದರು. ನಂತರ, ಸ್ನಾನ ಮಾಡಲೆಂದು ಮುಬಾಶೀರ್ ಹೊಳೆಗೆ ಇಳಿದಿದ್ದಾನೆ. ಆದರೆ, ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಅದನ್ನು ಕಣ್ಣಾರೆ ಕಂಡಿದ್ದ ಉಳಿದವರ ಅಲ್ಲಿಂದ ತೆರಳಿದ್ದರು.</p>.<p>ಗುರುವಾರ ರಾತ್ರಿ 10 ಗಂಟೆಯಾದರೂ ಮುಬಾಶೀರ್ ಮನೆಗೆ ಬಂದಿರಲಿಲ್ಲ. ಸ್ನೇಹಿತರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಿಗ್ಗೆ ಯುವಕನ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದು ಅಜ್ಜಿ ನಿಧನರಾದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು.</p>.<p>ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>