ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಉರೂಸ್ ಹಾಲನ್ನ ಪ್ರಸಾದ ಇಲ್ಲಿನ ವಿಶೇಷ ಕುರಿ ಅಥವಾ ಕೋಳಿಮಾಂಸ, ತುಪ್ಪದ ಅನ್ನ ಅನ್ನ ಪ್ರಸಾದ ವಿತರಣೆ
ಉರೂಸ್ಗೆ ಇದೆ 4 ಶತಮಾನಗಳ ಇತಿಹಾಸ
ಸುಮಾರು 4 ಶತಮಾನಗಳ ಹಿಂದೆ ಕೊಡಗಿಗೆ ಬಂದು ಎಮ್ಮೆಮಾಡಿನಲ್ಲಿ ಸಮಾಧಿಯಾದ ಸೂಫಿ ಶಹೀದ್ ವಲಿಯುಲ್ಲಾ ಅವರು ಭಾಗಮಂಡಲ ಬಳಿಯ ತಾವೂರಿಗೆ ತೆರಳುವ ಮಾರ್ಗಮಧ್ಯೆ ದಟ್ಟಾರಣ್ಯವಾದ ಕುತ್ತುನಾಡಿನ ಕೊಂಗಣ ಕಾಡಿನಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಸೂಫಿ ಸಂತರನ್ನು ಅಲ್ಲಿನ ಕರ್ತುರ ಕುಟುಂಬದ ಹಿರಿಯರೊಬ್ಬರು ಕಾಡಿನಲ್ಲಿ ಭೇಟಿಯಾದರು ಎನ್ನಲಾಗಿದೆ. ಕಾಡಿನಲ್ಲಿ ವಿಶ್ರಾಂತಿ ಪಡೆದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ಇವರು ಸಮೀಪದ ಮಾಪಿಳೆತೋಡುವಿನ ಮುಸ್ಲಿಂ ಜನಾಂಗದವರನ್ನು ಸೇರಿಸಿಕೊಂಡು ಈ ದಾರ್ಶನಿಕ ವ್ಯಕ್ತಿ ವಿಶ್ರಾಂತಿ ಪಡೆದ ಸ್ಥಳದಲ್ಲಿ ಅವರ ನೆನಪಿಗಾಗಿ ಬಿಡಾರವೊಂದನ್ನು ನಿರ್ಮಿಸಿ ಅಂದಿನಿಂದ ಪ್ರತಿವರ್ಷ ಉರೂಸ್ ಆಚರಣೆಯನ್ನು ಪ್ರಾರಂಭಿಸಲಾಯಿತು ಎಂಬ ಪ್ರತೀತಿ ಇದೆ.
₹ 1 ಸಾವಿರಕ್ಕೂ ಅಧಿಕ ಬೆಲೆಗೆ ನಾಟಿಕೋಳಿ ಹರಾಜು
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಒಪ್ಪಿಸುವ ಹರಕೆಗಳನ್ನು ಮಧ್ಯಾಹ್ನದ ನಂತರ ಹರಾಜು ಮಾಡಲಾಗುತ್ತದೆ. ಹಸು ಕರು ಕೋಳಿ ಅಕ್ಕಿ ತೆಂಗಿನಕಾಯಿ ಹಾಲು ತುಪ್ಪ ಕಾಫಿ ಕರಿಮೆಣಸು ಮೊದಲಾದವುಗಳನ್ನು ಇಲ್ಲಿ ಹರಾಜು ಹಾಕಲಾಗುತ್ತದೆ. ನಾಟಿ ಕೋಳಿಗಳನ್ನು ಉರೂಸ್ನ ಹರಾಜಿನಲ್ಲಿ ಪಡೆದು ಸಾಕಿದರೆ ಅವುಗಳ ಸಂಖ್ಯೆ ಹೆಚ್ಚುತ್ತದೆ ಎಂದು ಭಕ್ತರು ನಂಬುತ್ತಾರೆ. ಇದರಿಂದ ನಾಟಿ ಕೋಳಿಯೊಂದು ಇಲ್ಲಿ ₹ 1000ದಿಂದ ₹ 1500ರವರೆಗೂ ಹರಾಜಾಗುತ್ತದೆ.