<p><strong>ಕೆಜಿಎಫ್:</strong> ಇಲ್ಲಿನ ಬೆಮಲ್ ಆಲದ ಮರದಿಂದ ಕೃಷ್ಣಾವರಂ ಗ್ರಾಮದವರೆಗಿನ ರಾಜ್ಯ ಹೆದ್ದಾರಿ ಅಕ್ಕಪಕ್ಕ ಒತ್ತುವರಿಯಾಗಿದ್ದು, ಇಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಬಂಗಾರಪೇಟೆಯಿಂದ ಕೆಜಿಎಫ್ ನಗರವನ್ನು ಮುಟ್ಟದೇ ಬೇತಮಂಗಲ ಮತ್ತು ಆಂಧ್ರದ ವಿ.ಕೋಟೆಗೆ ಹೋಗಲು ಈ ಮಾರ್ಗವನ್ನು ಬಳಸಲಾಗುತ್ತಿದೆ. ಇದು ರಾಜ್ಯ ಹೆದ್ದಾರಿಯಾಗಿದೆ. ಇತ್ತೀಚೆಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಚೆನ್ನಾಗಿರುವುದರಿಂದ ವಾಹನಸವಾರರು ಮಿತಿಮೀರಿದ ವೇಗದಲ್ಲಿ ಸಾಗುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕ ಜಾಗ ಒತ್ತುವರಿಯಾಗಿದ್ದು, ಕೆಲವರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬುದು ನಾಗರಿಕರ ಆರೋಪ.</p>.<p>ಬೆಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಪಘಾತವಾಗುವ ವಲಯ ಎಂಬ ಕುಖ್ಯಾತಿಗೆ ಈ ರಸ್ತೆ ಪಾತ್ರವಾಗಿದೆ. ರಸ್ತೆಯ ಒಂದು ಬದಿ ಕೆಜಿಎಫ್ ತಾಲ್ಲೂಕಿಗೆ ಸೇರಿದೆ. ಮತ್ತೊಂದು ಬದಿ ಬಂಗಾರಪೇಟೆ ತಾಲ್ಲೂಕಿಗೆ ಸೇರಿದೆ. ರಸ್ತೆಯ ದಕ್ಷಿಣ ಭಾಗ ರಾಬರ್ಟಸನ್ಪೇಟೆ ನಗರಸಭೆಯ ವ್ಯಾಪ್ತಿಗೆ ಬಂದರೆ, ಉತ್ತರದ ಭಾಗ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರುತ್ತದೆ.</p>.<p>ಮಂಗಳವಾರವಷ್ಟೇ ಈ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಮೃತಪಟ್ಟು, ತಮಿಳುನಾಡು ಮೂಲದ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದ.</p>.<p> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳಕ್ಕೆ ಆಗಮಿಸಿ, ರಸ್ತೆಯಲ್ಲಿ ವೇಗದ ಮಿತಿಯನ್ನು ತಡೆಯಲು ಬೆಮಲ್ ಪೊಲೀಸರಿಗೆ ಸೂಚನೆಗಳನ್ನು ನೀಡಿದರು. ಬುಧವಾರ ರಸ್ತೆಯಲ್ಲಿ ವೇಗ ಮಿತಿ ಮಾಡಲು ಬ್ಯಾರಿಕೇಡ್ ಅಳವಡಿಸಲಾಗಿದೆ.</p>.<p>ಈ ಹಿಂದೆ ಬೆಮೆಲ್ ಕಾಲೊನಿಯಲ್ಲಿ ನಡೆಯುತ್ತಿದ್ದ ‘ಪೇಮೆಂಟ್ ಮಾರ್ಕೆಟ್’ (ಕಾರ್ಮಿಕರ ಸಂಬಳ ದಿನ ನಡೆಯುವ ಸಂತೆ) ಇದೀಗ ಆಲದಮರ–ಬೇತಮಂಗಲ ರಸ್ತೆಯ ಅಕ್ಕಪಕ್ಕಕ್ಕೆ ಸ್ಥಳಾಂತರವಾಗಿದೆ. ಹಾಗಾಗಿ, ತಿಂಗಳ ಕೊನೆಯದಿನ ಈ ರಸ್ತೆಯಲ್ಲಿ ಜನಸಂಚಾರ ಹೆಚ್ಚಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.</p>.<p>ಆಲದ ಮರದ ಬಳಿಯ ರಸ್ತೆಯ ಒಂದು ಭಾಗ ನಗರಸಭೆ ವ್ಯಾಪ್ತಿಗೆ ಬಂದರೂ, ಅದರ ಉಸ್ತುವಾರಿ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ. ಈಗ ಆಗಿರುವ ಒತ್ತುವರಿಯನ್ನು ಅವರೇ ತೆರವು ಗೊಳಿಸಬೇಕು ಎಂದು ನಗರಸಭೆ ಆಯುಕ್ತ ಪವನ್ಕುಮಾರ್ ಹೇಳುತ್ತಾರೆ.</p>.<div><blockquote>ಪದೇಪದೇ ಈ ರಸ್ತೆಯಲ್ಲಿ ಅಪಘಾತವಾಗಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. </blockquote><span class="attribution">ಅನ್ಬರಸನ್ ನಿವಾಸಿ</span></div>.<div><blockquote>ರಸ್ತೆಯ ಅಕ್ಕಪಕ್ಕದಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. </blockquote><span class="attribution">ರವಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ಇಲ್ಲಿನ ಬೆಮಲ್ ಆಲದ ಮರದಿಂದ ಕೃಷ್ಣಾವರಂ ಗ್ರಾಮದವರೆಗಿನ ರಾಜ್ಯ ಹೆದ್ದಾರಿ ಅಕ್ಕಪಕ್ಕ ಒತ್ತುವರಿಯಾಗಿದ್ದು, ಇಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಬಂಗಾರಪೇಟೆಯಿಂದ ಕೆಜಿಎಫ್ ನಗರವನ್ನು ಮುಟ್ಟದೇ ಬೇತಮಂಗಲ ಮತ್ತು ಆಂಧ್ರದ ವಿ.ಕೋಟೆಗೆ ಹೋಗಲು ಈ ಮಾರ್ಗವನ್ನು ಬಳಸಲಾಗುತ್ತಿದೆ. ಇದು ರಾಜ್ಯ ಹೆದ್ದಾರಿಯಾಗಿದೆ. ಇತ್ತೀಚೆಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಚೆನ್ನಾಗಿರುವುದರಿಂದ ವಾಹನಸವಾರರು ಮಿತಿಮೀರಿದ ವೇಗದಲ್ಲಿ ಸಾಗುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕ ಜಾಗ ಒತ್ತುವರಿಯಾಗಿದ್ದು, ಕೆಲವರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬುದು ನಾಗರಿಕರ ಆರೋಪ.</p>.<p>ಬೆಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಪಘಾತವಾಗುವ ವಲಯ ಎಂಬ ಕುಖ್ಯಾತಿಗೆ ಈ ರಸ್ತೆ ಪಾತ್ರವಾಗಿದೆ. ರಸ್ತೆಯ ಒಂದು ಬದಿ ಕೆಜಿಎಫ್ ತಾಲ್ಲೂಕಿಗೆ ಸೇರಿದೆ. ಮತ್ತೊಂದು ಬದಿ ಬಂಗಾರಪೇಟೆ ತಾಲ್ಲೂಕಿಗೆ ಸೇರಿದೆ. ರಸ್ತೆಯ ದಕ್ಷಿಣ ಭಾಗ ರಾಬರ್ಟಸನ್ಪೇಟೆ ನಗರಸಭೆಯ ವ್ಯಾಪ್ತಿಗೆ ಬಂದರೆ, ಉತ್ತರದ ಭಾಗ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರುತ್ತದೆ.</p>.<p>ಮಂಗಳವಾರವಷ್ಟೇ ಈ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಮೃತಪಟ್ಟು, ತಮಿಳುನಾಡು ಮೂಲದ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದ.</p>.<p> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳಕ್ಕೆ ಆಗಮಿಸಿ, ರಸ್ತೆಯಲ್ಲಿ ವೇಗದ ಮಿತಿಯನ್ನು ತಡೆಯಲು ಬೆಮಲ್ ಪೊಲೀಸರಿಗೆ ಸೂಚನೆಗಳನ್ನು ನೀಡಿದರು. ಬುಧವಾರ ರಸ್ತೆಯಲ್ಲಿ ವೇಗ ಮಿತಿ ಮಾಡಲು ಬ್ಯಾರಿಕೇಡ್ ಅಳವಡಿಸಲಾಗಿದೆ.</p>.<p>ಈ ಹಿಂದೆ ಬೆಮೆಲ್ ಕಾಲೊನಿಯಲ್ಲಿ ನಡೆಯುತ್ತಿದ್ದ ‘ಪೇಮೆಂಟ್ ಮಾರ್ಕೆಟ್’ (ಕಾರ್ಮಿಕರ ಸಂಬಳ ದಿನ ನಡೆಯುವ ಸಂತೆ) ಇದೀಗ ಆಲದಮರ–ಬೇತಮಂಗಲ ರಸ್ತೆಯ ಅಕ್ಕಪಕ್ಕಕ್ಕೆ ಸ್ಥಳಾಂತರವಾಗಿದೆ. ಹಾಗಾಗಿ, ತಿಂಗಳ ಕೊನೆಯದಿನ ಈ ರಸ್ತೆಯಲ್ಲಿ ಜನಸಂಚಾರ ಹೆಚ್ಚಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.</p>.<p>ಆಲದ ಮರದ ಬಳಿಯ ರಸ್ತೆಯ ಒಂದು ಭಾಗ ನಗರಸಭೆ ವ್ಯಾಪ್ತಿಗೆ ಬಂದರೂ, ಅದರ ಉಸ್ತುವಾರಿ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ. ಈಗ ಆಗಿರುವ ಒತ್ತುವರಿಯನ್ನು ಅವರೇ ತೆರವು ಗೊಳಿಸಬೇಕು ಎಂದು ನಗರಸಭೆ ಆಯುಕ್ತ ಪವನ್ಕುಮಾರ್ ಹೇಳುತ್ತಾರೆ.</p>.<div><blockquote>ಪದೇಪದೇ ಈ ರಸ್ತೆಯಲ್ಲಿ ಅಪಘಾತವಾಗಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. </blockquote><span class="attribution">ಅನ್ಬರಸನ್ ನಿವಾಸಿ</span></div>.<div><blockquote>ರಸ್ತೆಯ ಅಕ್ಕಪಕ್ಕದಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. </blockquote><span class="attribution">ರವಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>