<p><strong>ಅಳವಂಡಿ</strong>: ‘ಪುಸ್ತಕಗಳನ್ನು ಹೆಚ್ಚು ಓದಿದಷ್ಟು ಜ್ಞಾನ ಹೆಚ್ಚಿ, ಅರಿವಿನ ವ್ಯಾಪ್ತಿ ವಿಸ್ತರಿಸುತ್ತದೆ. ಪುಸ್ತಕದಿಂದ ಸಿಗುವ ಜ್ಞಾನಕ್ಕೆ ಸಮಾನವಾದುದಿಲ್ಲ’ ಎಂದು ಕೊಪ್ಪಳದ ಸಾಹಿತಿ, ವಿಮರ್ಶಕ ಡಿ.ರಾಮಣ್ಣ ಅಲ್ಮರ್ಶಿನಕೇರಿ ಹೇಳಿದರು</p>.<p>ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಸಾಪ ಕೊಪ್ಪಳ, ಕಸಾಪ ಅಳವಂಡಿ ಹೋಬಳಿ ಘಟಕ, ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ, ಎನ್ಎಸ್ಎಸ್ ಘಟಕ, ಸೋನಲ್ ಪ್ರಕಾಶನ ಮಂಡ್ಯ ಆಶ್ರಯದಲ್ಲಿ ಸಾಹಿತಿ ಯಲ್ಲಪ್ಪ ಹರ್ನಾಳಗಿ ಅವರ ‘ಓದಿದಷ್ಟು ಒಳನೋಟ’ ಪುಸ್ತಕ ಲೋಕಾರ್ಪಣೆ ಮತ್ತು ವಿದ್ಯಾರ್ಥಿಗಳಿಗಾಗಿ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>‘ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಲೇಖನ ಹಾಗೂ ಕವನ ರಚಿಸಲು ಸಾಧ್ಯವಾಗುತ್ತದೆ. ನಮ್ಮ ಕನ್ನಡ ಭಾಷೆಯನ್ನು ಎತ್ತರೆತ್ತರಕ್ಕೆ ಹಾರಿಸಲು ಜ್ಞಾನಪೀಠ ಪುರಸ್ಕೃತ ಕವಿಗಳಂತೆ ಇಂದಿನ ಯುವ ಕವಿಗಳು ಎತ್ತರಕ್ಕೆ ಬೆಳೆಯಲು ಮುಂದಾಗಬೇಕು. ಜತೆಗೆ ಕನ್ನಡತನದ ಬೆಳಕನ್ನು ಪ್ರಪಂಚದಾದ್ಯಂತ ಪಸರಿಸಬೇಕು. ಶಿಕ್ಷಕರು ಮಕ್ಕಳಿಗೆ ದಾರಿದೀಪವಾಗಿದ್ದಾರೆ, ಬೌದ್ಧಿಕವಾಗಿ ಮಕ್ಕಳನ್ನು ವಿಕಾಸ ಮಾಡುವ ಶಕ್ತಿ ಹೊಂದಿದ್ದಾರೆ. ಮಕ್ಕಳು ಸಾಹಿತ್ಯದ ಬಗ್ಗೆ ಒಡನಾಟ ಇಟ್ಟುಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ನಿವೃತ್ತ ಪ್ರಾಚಾರ್ಯ ಎ.ಟಿ. ಕಲ್ಮಠ ಮಾತನಾಡಿ, ‘ಅಕ್ಷರಕ್ಕೆ ಬಹು ದೊಡ್ಡ ಶಕ್ತಿಯಿದೆ. ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಸ್ಫೂರ್ತಿ ಹಾಗೂ ಜಗತ್ತಿಗೆ ಒಳ್ಳೆಯದನ್ನು ಮಾಡುವ ಗುಣ ಬೆಳೆಸಿಕೊಳ್ಳಿ. ಪ್ರತೊಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆ ಅಡಕವಾಗಿರುತ್ತದೆ ಕಾರಣ ವಿದ್ಯಾರ್ಥಿಗಳ ಇಂತಹ ವೇದಿಕೆಗಳನ್ನು ಚನ್ನಾಗಿ ಬಳಸಿಕೊಂಡು ಪ್ರತಿಭೆಗಳನ್ನು ಅನಾವರಣ ಮಾಡಬೇಕು. ಸಾಧಕರಿಗೆ ಅವಕಾಶ ನೀಡಿ ಬೆಳೆಸಬೇಕು. ಬೀಜ ಮೊಳಕೆಯೊಡೆಯಲು ನೀರು, ಭೂಮಿ ಮುಖ್ಯ ಅದೇ ರೀತಿ ಪ್ರತಿಭೆಗಳು ಹೊರಬರಲು ಇಂತಹ ವೇದಿಕೆ ಅವಶ್ಯ. ಶಿಕ್ಷಕರು ಹಾಗೂ ಸಂಘಟನೆಗಳು ಮಕ್ಕಳಿಗೆ ಸಾಹಿತ್ಯದತ್ತ ಒಲವು ಹೊಂದುವ ಕೆಲಸ ಮಾಡಬೇಕು’ ಎಂದರು.</p>.<p>ಉಪನ್ಯಾಸಕ ನವೀನ ಇನಾಮದಾರ ವಾಚನ ಮಾಡಿದ ಕವಿತೆಗಳ ಬಗ್ಗೆ ವಿಮರ್ಶೆ ಮಾಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಹಾಗೂ ಸಾಹಿತಿ ಯಲ್ಲಪ್ಪ ಹರ್ನಾಳಗಿ, ಕಿರಣಕುಮಾರ ಅಂಗಡಿ, ನೀಲಪ್ಪ ಹಕ್ಕಂಡಿ ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಹಾಗೂ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದರು.</p>.<p>ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಉಪನ್ಯಾಸಕ ಎಚ್.ಮಹಾನಂದಿ, ಸಿದ್ದು ಅಂಗಡಿ, ದೇವಮ್ಮ ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಪ್ರಮುಖರಾದ ಜುನಸಾಬ ಹಾಗೂ ಇತರರು ಪಾಲ್ಗೊಂಡಿದ್ದರು.</p>.<p>ಯುವ ಸಾಹಿತಿಗಳ ಕವಿಗೋಷ್ಠಿ</p><p>ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಯುವ ಸಾಹಿತಿಗಳಿಗೆ ಕವಿಗೋಷ್ಠಿ ಆಯೋಜಿಸಲಾಗಿತ್ತು. ಯುವ ಸಾಹಿತಿಗಳಾದ ಸಂಗೀತಾ ಹಳ್ಳಿ, ಅಮೃತಾ ಅಂಬಿಗೇರ, ಕವಿತಾ ಗುಜನೂರ, ಶ್ರೀಧರ ಹಡಪದ, ನಂದೀಶ, ಲೀಲಾವತಿ ಮಾಗಳದ, ರುದ್ರಮ್ಮ ಅಳವಂಡಿ, ದೀಪಾ ತಳವಾರ, ಮಲ್ಲಮ್ಮ ಕಂಪ್ಲಿ, ಸುನೀತಾ ಗೌಡ್ರು, ಸಹನಾ ಇಟಗಿ, ಕಾವೇರಿ ಮಜ್ಜಿಗೆ ಅವರು ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು. ಕವನ ವಾಚನ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ</strong>: ‘ಪುಸ್ತಕಗಳನ್ನು ಹೆಚ್ಚು ಓದಿದಷ್ಟು ಜ್ಞಾನ ಹೆಚ್ಚಿ, ಅರಿವಿನ ವ್ಯಾಪ್ತಿ ವಿಸ್ತರಿಸುತ್ತದೆ. ಪುಸ್ತಕದಿಂದ ಸಿಗುವ ಜ್ಞಾನಕ್ಕೆ ಸಮಾನವಾದುದಿಲ್ಲ’ ಎಂದು ಕೊಪ್ಪಳದ ಸಾಹಿತಿ, ವಿಮರ್ಶಕ ಡಿ.ರಾಮಣ್ಣ ಅಲ್ಮರ್ಶಿನಕೇರಿ ಹೇಳಿದರು</p>.<p>ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಸಾಪ ಕೊಪ್ಪಳ, ಕಸಾಪ ಅಳವಂಡಿ ಹೋಬಳಿ ಘಟಕ, ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ, ಎನ್ಎಸ್ಎಸ್ ಘಟಕ, ಸೋನಲ್ ಪ್ರಕಾಶನ ಮಂಡ್ಯ ಆಶ್ರಯದಲ್ಲಿ ಸಾಹಿತಿ ಯಲ್ಲಪ್ಪ ಹರ್ನಾಳಗಿ ಅವರ ‘ಓದಿದಷ್ಟು ಒಳನೋಟ’ ಪುಸ್ತಕ ಲೋಕಾರ್ಪಣೆ ಮತ್ತು ವಿದ್ಯಾರ್ಥಿಗಳಿಗಾಗಿ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>‘ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಲೇಖನ ಹಾಗೂ ಕವನ ರಚಿಸಲು ಸಾಧ್ಯವಾಗುತ್ತದೆ. ನಮ್ಮ ಕನ್ನಡ ಭಾಷೆಯನ್ನು ಎತ್ತರೆತ್ತರಕ್ಕೆ ಹಾರಿಸಲು ಜ್ಞಾನಪೀಠ ಪುರಸ್ಕೃತ ಕವಿಗಳಂತೆ ಇಂದಿನ ಯುವ ಕವಿಗಳು ಎತ್ತರಕ್ಕೆ ಬೆಳೆಯಲು ಮುಂದಾಗಬೇಕು. ಜತೆಗೆ ಕನ್ನಡತನದ ಬೆಳಕನ್ನು ಪ್ರಪಂಚದಾದ್ಯಂತ ಪಸರಿಸಬೇಕು. ಶಿಕ್ಷಕರು ಮಕ್ಕಳಿಗೆ ದಾರಿದೀಪವಾಗಿದ್ದಾರೆ, ಬೌದ್ಧಿಕವಾಗಿ ಮಕ್ಕಳನ್ನು ವಿಕಾಸ ಮಾಡುವ ಶಕ್ತಿ ಹೊಂದಿದ್ದಾರೆ. ಮಕ್ಕಳು ಸಾಹಿತ್ಯದ ಬಗ್ಗೆ ಒಡನಾಟ ಇಟ್ಟುಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ನಿವೃತ್ತ ಪ್ರಾಚಾರ್ಯ ಎ.ಟಿ. ಕಲ್ಮಠ ಮಾತನಾಡಿ, ‘ಅಕ್ಷರಕ್ಕೆ ಬಹು ದೊಡ್ಡ ಶಕ್ತಿಯಿದೆ. ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಸ್ಫೂರ್ತಿ ಹಾಗೂ ಜಗತ್ತಿಗೆ ಒಳ್ಳೆಯದನ್ನು ಮಾಡುವ ಗುಣ ಬೆಳೆಸಿಕೊಳ್ಳಿ. ಪ್ರತೊಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆ ಅಡಕವಾಗಿರುತ್ತದೆ ಕಾರಣ ವಿದ್ಯಾರ್ಥಿಗಳ ಇಂತಹ ವೇದಿಕೆಗಳನ್ನು ಚನ್ನಾಗಿ ಬಳಸಿಕೊಂಡು ಪ್ರತಿಭೆಗಳನ್ನು ಅನಾವರಣ ಮಾಡಬೇಕು. ಸಾಧಕರಿಗೆ ಅವಕಾಶ ನೀಡಿ ಬೆಳೆಸಬೇಕು. ಬೀಜ ಮೊಳಕೆಯೊಡೆಯಲು ನೀರು, ಭೂಮಿ ಮುಖ್ಯ ಅದೇ ರೀತಿ ಪ್ರತಿಭೆಗಳು ಹೊರಬರಲು ಇಂತಹ ವೇದಿಕೆ ಅವಶ್ಯ. ಶಿಕ್ಷಕರು ಹಾಗೂ ಸಂಘಟನೆಗಳು ಮಕ್ಕಳಿಗೆ ಸಾಹಿತ್ಯದತ್ತ ಒಲವು ಹೊಂದುವ ಕೆಲಸ ಮಾಡಬೇಕು’ ಎಂದರು.</p>.<p>ಉಪನ್ಯಾಸಕ ನವೀನ ಇನಾಮದಾರ ವಾಚನ ಮಾಡಿದ ಕವಿತೆಗಳ ಬಗ್ಗೆ ವಿಮರ್ಶೆ ಮಾಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಹಾಗೂ ಸಾಹಿತಿ ಯಲ್ಲಪ್ಪ ಹರ್ನಾಳಗಿ, ಕಿರಣಕುಮಾರ ಅಂಗಡಿ, ನೀಲಪ್ಪ ಹಕ್ಕಂಡಿ ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಹಾಗೂ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದರು.</p>.<p>ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಉಪನ್ಯಾಸಕ ಎಚ್.ಮಹಾನಂದಿ, ಸಿದ್ದು ಅಂಗಡಿ, ದೇವಮ್ಮ ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಪ್ರಮುಖರಾದ ಜುನಸಾಬ ಹಾಗೂ ಇತರರು ಪಾಲ್ಗೊಂಡಿದ್ದರು.</p>.<p>ಯುವ ಸಾಹಿತಿಗಳ ಕವಿಗೋಷ್ಠಿ</p><p>ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಯುವ ಸಾಹಿತಿಗಳಿಗೆ ಕವಿಗೋಷ್ಠಿ ಆಯೋಜಿಸಲಾಗಿತ್ತು. ಯುವ ಸಾಹಿತಿಗಳಾದ ಸಂಗೀತಾ ಹಳ್ಳಿ, ಅಮೃತಾ ಅಂಬಿಗೇರ, ಕವಿತಾ ಗುಜನೂರ, ಶ್ರೀಧರ ಹಡಪದ, ನಂದೀಶ, ಲೀಲಾವತಿ ಮಾಗಳದ, ರುದ್ರಮ್ಮ ಅಳವಂಡಿ, ದೀಪಾ ತಳವಾರ, ಮಲ್ಲಮ್ಮ ಕಂಪ್ಲಿ, ಸುನೀತಾ ಗೌಡ್ರು, ಸಹನಾ ಇಟಗಿ, ಕಾವೇರಿ ಮಜ್ಜಿಗೆ ಅವರು ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು. ಕವನ ವಾಚನ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>