ಹಂಪಿ ಉತ್ಸವಕ್ಕೆ ಮಣೆ; ಕೊಪ್ಪಳ ಜಿಲ್ಲೆಯ ಉತ್ಸವಗಳ ಕಡೆಗಣನೆ
ಮೆಹಬೂಬಹುಸೇನ / ವಿಜಯ ಎನ್. ಗಂಗಾವತಿ
Published : 15 ಜನವರಿ 2024, 5:29 IST
Last Updated : 15 ಜನವರಿ 2024, 5:29 IST
ಫಾಲೋ ಮಾಡಿ
Comments
ಶಿಲ್ಪ ಸಂಪತ್ತಿನ ಕಲಾ ಕಣಜವಾಗಿರುವ ಕನಕಗಿರಿಯಲ್ಲಿ ಉತ್ಸವ ಪ್ರತಿ ವರ್ಷ ನಡೆಯಬೇಕು ಈ ಕುರಿತು ಸರ್ಕಾರ ಪ್ರತಿ ವರ್ಷ ಉತ್ಸವ ನಡೆಸಬೇಕು.
ದುರ್ಗಾದಾಸ ಯಾದವ, ಲೇಖಕ, ಕನಕಗಿರಿ
ನಡೆದು ನೋಡಲು ಹೋಗು ಹಂಪಿ ಸಿರಿ ಮನತಣಿದು ನೋಡಲು ಬಾ ಕನಕಗಿರಿ ಎಂಬ ಕವಿಯ ಸಾಲುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಸರ್ಕಾರ ಮಾಡಬೇಕು. ಒಂದು ವರ್ಷ ಉತ್ಸವ ಮಾಡಿ ಹತ್ತು ವರ್ಷ ಬಿಡುವುದು ಸರಿಯಲ್ಲ
ಕನಕರೆಡ್ಡಿ ಕೆರಿ, ಗೌರವ ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನಕಗಿರಿ
ಈ ಸಲದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವನೂ ಆಗಿದ್ದೇನೆ. ಕನಕಗಿರಿ ಉತ್ಸವ ಮಾಡಲು ಕ್ರಮ ವಹಿಸುತ್ತೇನೆ.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ
ಮೂರು ವರ್ಷಗಳಿಂದ ಆನೆಗೊಂದಿ ಉತ್ಸವ ನಡೆದಿಲ್ಲ. ಈ ವರ್ಷವಾದರೂ ಆಯೋಜಿಸಿ ಇಲ್ಲಿನ ಐತಿಹ್ಯ ಪರಂಪರೆ ಸಾರುವ ನಿಟ್ಟಿನಲ್ಲಿ ಪ್ರತಿವರ್ಷವೂ ಕೆಲಸವಾಗಬೇಕು.
ಸಾಯಿಕುಮಾರ ರಂಗಾಪುರ, ಗ್ರಾಮದ ನಿವಾಸಿ
ಹಂಪಿಯಷ್ಟೆ ಅನೆಗೊಂದಿ ಭಾಗಕ್ಕೆ ಮಹತ್ವವಿದ್ದು ಹಂಪಿ ಜೊತೆಗೆ ಆನೆಗೊಂದಿ ಉತ್ಸವು ನಡೆಯಬೇಕು. ಪ್ರತಿಬಾರಿ ಹಂಪಿ ಉತ್ಸವ ಮಾತ್ರ ನಡೆಸಿ ಆನೆಗೊಂದಿ ಉತ್ಸವ ಕೈಬಿಡಲಾಗುತ್ತಿದೆ. ಯಾಕೆ ಈ ತಾರತಮ್ಯ?