ಕೆಲಸಕ್ಕೆ ಅಡ್ಡಿ, ಪಂಪ್ಹೌಸ್ಗೆ ಕೀಲಿ
ಮುದುಟಗಿ ಬಳಿ ಡೆಲೆವರಿ ಚೇಂಬರ್ಗೆ ಇಳಕಲ್ ತಾಲ್ಲೂಕಿನಲ್ಲಿರುವ ಜಾಕ್ವೆಲ್ದಿಂದ ಕುಷ್ಟಗಿ ತಾಲ್ಲೂಕಿನ ಮುದುಟಗಿ ಕಲಾಲಬಂಡಿ ಡೆಲೆವರಿ ಚೇಂಬರ್ವಾರ್ಗೆ ನೀರು ತಲುಪುತ್ತದೆ. ಮುಂದೆ ಯಲಬುರ್ಗಾ ಮತ್ತು ಕನಕಗಿರಿ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ ಮುದುಟಗಿ ಕಲಾಲಬಂಡಿ ನಡುವಿನ ಮುಖ್ಯ ಕೊಳವೆಯಲ್ಲಿ 7-8 ಬಾರಿ ಸೋರಿಕೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ರೈತರ ಜಮೀನಿನ ಮೇಲ್ಮಣ್ಣು ಸಂಪೂರ್ಣ ಕೊಚ್ಚಿಹೋಗಿತ್ತು. ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರೇ ಈ ತಾಂತ್ರಿಕ ದೋಷಕ್ಕೆ ಜವಾಬ್ದಾರರಾಗಿದ್ದು ಅವರೇ ರೈತರಿಗೆ ಪರಿಹಾರ ನೀಡಬೇಕಿದೆ. ಆದರೆ ಪರಿಹಾರ ನೀಡುವವರೆಗೂ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದೆ ರೈತರು ಪಟ್ಟು ಹಿಡಿದಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ. ಅದೇ ರೀತಿ ಯೋಜನೆಯ ಕೊಳವೆ ಜೋಡಣೆಗೆ ಜಮೀನು ನೀಡಿದ ರೈತರಿಗೂ ಇನ್ನೂ ಪರಿಹಾರ ದೊರಕದ ಕಾರಣ ಮುದುಟಗಿ ಡೆಲೆವರಿ ಚೇಂಬರ್ನ ಪಂಪ್ಹೌಸ್ಗೆ ರೈತರು ಕೀಲಿ ಹಾಕಿದ್ದಾರೆ.