<p><strong>ಗಂಗಾವತಿ:</strong> ‘ಸಮಾಜದಲ್ಲಿನ ನೋವು-ನಲಿವನ್ನು ಅಭಿವ್ಯಕ್ತಿಸುವ, ಲೋಪದೋಷ ತಿದ್ದುವ ಬರಹಕ್ಕೆ ಆಯುಷ್ಯ ಜಾಸ್ತಿ. ಯಾವ ಬರಹಗಳು ಮಾನವನ ಕಳಕಳಿ, ಜೀವನಾನುಭವ ಹೊಂದಿರುತ್ತವೋ ಅಂತವು ಓದುಗನ ಸ್ಪೃತಿಪಟಲದಲ್ಲಿ ನೆಲೆಯೂರುತ್ತವೆ. ಇಂದು ಬರಹಕ್ಕೆ ವಿಪುಲ ಅವಕಾಶಗಳಿವೆ’ ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಅಭಿಪ್ರಾಯಟ್ಟರು.</p>.<p>ನಗರದ ಸುಶಮೀಂದ್ರ ಗುರುಕುಲದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಈಚೆಗೆ ನಡೆದ ರಾಘವೇಂದ್ರ ಮಂಗಳೂರು ಅವರ ‘ಭೂಮಿ ದುಂಡಗಿದೆ’, ‘ನ್ಯಾನೋ ಕತೆಗಳು’ ಎಂಬ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ಬರಹದ ಮೂಲಕ ಪ್ರತಿಯೊಬ್ಬರು ವಿಭಿನ್ನ ರೀತಿಯ ಸಂವೇದನೆಗಳನ್ನು ಅಭಿವ್ಯಕ್ತಿಸಲು ಮುಕ್ತ ಅವಕಾಶವಿದೆ. ಸದ್ಯ ಸಾಹಿತ್ಯ ಲೋಕಕ್ಕೆ ವಿಭಿನ್ನ ಪ್ರಕಾರದ ಬರಹಗಳು ಕಾಲಿಡುತ್ತಿದ್ದು, ಮೂರ್ನಾಲ್ಕು ಸಾಲಿನ ನ್ಯಾನೋ ಕತೆಗಳು ಓದುಗರನ್ನು ಹೆಚ್ಚಾಗಿ ಗಮನ ಸೆಳೆಯುತ್ತಿವೆ’ ಎಂದರು.</p>.<p>ಹಿರಿಯ ಕವಿ ರಾಘವೇಂದ್ರ ದಂಡಿನ್ ಅವರು ಭೂಮಿ ದುಂಡಗಿದೆ ಎಂಬ ವಿಡಂಬನಾ ಕೃತಿ ಪರಿಚಯಿಸಿ ಮಾತನಾಡಿ, ಲೋಕದ ಡೊಂಕು ತಿದ್ದುವ ಆಶಯವುಳ್ಳ ಬರಹ ಯಾವಾಗಲೂ ಚರ್ಚೆಗೆ ನಾಂದಿ ಹಾಡುತ್ತದೆ. ಈ ಕೃತಿ ಮನುಷ್ಯನ ವ್ಯಕ್ತಿತ್ವದ ಸಣ್ಣತನ, ದೌರ್ಬಲ್ಯಗಳನ್ನು ಹೇಳುತ್ತಾ ಆದರ್ಶ ಮೌಲ್ಯಗಳ ಕುರಿತು ಬೆಳಕು ಚೆಲ್ಲುತ್ತದೆ. ಎಂದರು.</p>.<p>ಲೇಖಕ ರಾಘವೇಂದ್ರ ಮಂಗಳೂರು ಮಾತನಾಡಿದರು.</p>.<p>ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ನ್ಯಾನೋ ಕಥೆಗಳನ್ನು ವಾಚಿಸಿದರು.</p>.<p>ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ, ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡರ, ನಾರಾಯಣರಾವ ವೈದ್ಯ, ಜನಾರ್ದನ ರಾವ ಅಲಬನೂರು, ಪ್ರಗತಿ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಚೇರ್ಮನ್ ಜಿ.ಆರ್. ದಿಲ್ಲಿಬಾಬು, ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ಚೀಫ್ ಮ್ಯಾನೇಜರ್ ಕೆ.ವಿ.ರಾಜಾರಾವ್ ಭಾಗವಹಿಸಿದ್ಧರು.</p>.<p>ಶ್ವೇತಾ ರಂಗನಾಥ ಕುಲಕರ್ಣಿ ಪ್ರಾರ್ಥಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ ಸ್ವಾಗತಿಸಿದರು. ಗುಂಡೂರು ಪವನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರೇಶ ಮಡಿವಾಳ ಅವರು ವಂದಿಸಿದರು. ಉಮಾ ದೇವಿ ನೆರವೇರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ‘ಸಮಾಜದಲ್ಲಿನ ನೋವು-ನಲಿವನ್ನು ಅಭಿವ್ಯಕ್ತಿಸುವ, ಲೋಪದೋಷ ತಿದ್ದುವ ಬರಹಕ್ಕೆ ಆಯುಷ್ಯ ಜಾಸ್ತಿ. ಯಾವ ಬರಹಗಳು ಮಾನವನ ಕಳಕಳಿ, ಜೀವನಾನುಭವ ಹೊಂದಿರುತ್ತವೋ ಅಂತವು ಓದುಗನ ಸ್ಪೃತಿಪಟಲದಲ್ಲಿ ನೆಲೆಯೂರುತ್ತವೆ. ಇಂದು ಬರಹಕ್ಕೆ ವಿಪುಲ ಅವಕಾಶಗಳಿವೆ’ ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಅಭಿಪ್ರಾಯಟ್ಟರು.</p>.<p>ನಗರದ ಸುಶಮೀಂದ್ರ ಗುರುಕುಲದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಈಚೆಗೆ ನಡೆದ ರಾಘವೇಂದ್ರ ಮಂಗಳೂರು ಅವರ ‘ಭೂಮಿ ದುಂಡಗಿದೆ’, ‘ನ್ಯಾನೋ ಕತೆಗಳು’ ಎಂಬ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ಬರಹದ ಮೂಲಕ ಪ್ರತಿಯೊಬ್ಬರು ವಿಭಿನ್ನ ರೀತಿಯ ಸಂವೇದನೆಗಳನ್ನು ಅಭಿವ್ಯಕ್ತಿಸಲು ಮುಕ್ತ ಅವಕಾಶವಿದೆ. ಸದ್ಯ ಸಾಹಿತ್ಯ ಲೋಕಕ್ಕೆ ವಿಭಿನ್ನ ಪ್ರಕಾರದ ಬರಹಗಳು ಕಾಲಿಡುತ್ತಿದ್ದು, ಮೂರ್ನಾಲ್ಕು ಸಾಲಿನ ನ್ಯಾನೋ ಕತೆಗಳು ಓದುಗರನ್ನು ಹೆಚ್ಚಾಗಿ ಗಮನ ಸೆಳೆಯುತ್ತಿವೆ’ ಎಂದರು.</p>.<p>ಹಿರಿಯ ಕವಿ ರಾಘವೇಂದ್ರ ದಂಡಿನ್ ಅವರು ಭೂಮಿ ದುಂಡಗಿದೆ ಎಂಬ ವಿಡಂಬನಾ ಕೃತಿ ಪರಿಚಯಿಸಿ ಮಾತನಾಡಿ, ಲೋಕದ ಡೊಂಕು ತಿದ್ದುವ ಆಶಯವುಳ್ಳ ಬರಹ ಯಾವಾಗಲೂ ಚರ್ಚೆಗೆ ನಾಂದಿ ಹಾಡುತ್ತದೆ. ಈ ಕೃತಿ ಮನುಷ್ಯನ ವ್ಯಕ್ತಿತ್ವದ ಸಣ್ಣತನ, ದೌರ್ಬಲ್ಯಗಳನ್ನು ಹೇಳುತ್ತಾ ಆದರ್ಶ ಮೌಲ್ಯಗಳ ಕುರಿತು ಬೆಳಕು ಚೆಲ್ಲುತ್ತದೆ. ಎಂದರು.</p>.<p>ಲೇಖಕ ರಾಘವೇಂದ್ರ ಮಂಗಳೂರು ಮಾತನಾಡಿದರು.</p>.<p>ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ನ್ಯಾನೋ ಕಥೆಗಳನ್ನು ವಾಚಿಸಿದರು.</p>.<p>ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ, ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡರ, ನಾರಾಯಣರಾವ ವೈದ್ಯ, ಜನಾರ್ದನ ರಾವ ಅಲಬನೂರು, ಪ್ರಗತಿ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಚೇರ್ಮನ್ ಜಿ.ಆರ್. ದಿಲ್ಲಿಬಾಬು, ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ಚೀಫ್ ಮ್ಯಾನೇಜರ್ ಕೆ.ವಿ.ರಾಜಾರಾವ್ ಭಾಗವಹಿಸಿದ್ಧರು.</p>.<p>ಶ್ವೇತಾ ರಂಗನಾಥ ಕುಲಕರ್ಣಿ ಪ್ರಾರ್ಥಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ ಸ್ವಾಗತಿಸಿದರು. ಗುಂಡೂರು ಪವನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರೇಶ ಮಡಿವಾಳ ಅವರು ವಂದಿಸಿದರು. ಉಮಾ ದೇವಿ ನೆರವೇರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>