<p><strong>ಗಂಗಾವತಿ:</strong> ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಅವರ ಪತಿ ಸಂದೀಪ್ ಅವರು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಅವರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಹಾಗೂ ಪೌರಕಾರ್ಮಿಕರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ನಗರಸಭೆ ಸದಸ್ಯ ಮನೋಹರಸ್ವಾಮಿ ಮಾತನಾಡಿ,‘ನಗರಸಭೆ ಮಾಜಿ ಅಧ್ಯಕ್ಷರ ಪತಿ ಸಂದೀಪ್ ಅವರು ಪೌರಾಯುಕ್ತರು ಹಾಗೂ ಅವರ ಕುಟುಂಬಸ್ಥರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ತಿಳಿ ಹೇಳಲಾಗಿದೆ. ಆದರೂ ಸಂದೀಪ ಅವರು ನಿಂದಿಸಿದ ಆಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿದರು.</p>.<p>ಮಾಲಾಶ್ರೀ ಅವರು ನಗರಸಭೆ ಸದಸ್ಯರಾಗಿದ್ದಾರೆ. ಅವರ ಪತಿ ಸಂದೀಪ್ ಅವರು ನಗರಸಭೆ ಕಾರ್ಯದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಾರೆ. ಕರ್ತವ್ಯನಿರತ ಪೌರಾಯುಕ್ತರಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿರುವ ಕುರಿತು ಹಲವು ಮೌಖಿಕ ದೂರುಗಳು ಬಂದಿವೆ. ಸರ್ಕಾರಿ ಸೇವೆಯಲ್ಲಿ ಪೌರಾಯುಕ್ತರ ಕೆಲಸಕ್ಕೆ ಅಡ್ಡಿಪಡಿಸುವುದು ಅಪರಾಧ ಎಂದರು.</p>.<p>ಪೌರಾಯುಕ್ತರನ್ನ ಅವಾಚ್ಯ ಪದಗಳಿಂದ ನಿಂದಿಸಿದ ಮಾಜಿ ಅಧ್ಯಕ್ಷರ ಪತಿ ಸಂದೀಪ್ ವಿರುದ್ಧ ನಗರಸಭೆ ಸದಸ್ಯರು, ಪೌರಕಾರ್ಮಿಕರು ಪ್ರಕರಣ ದಾಖಲಿಸಲು ನಗರ ಠಾಣೆಗೆ ತೆರಳಿ ಫಿರ್ಯಾದಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.</p>.<p>ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಹಾಜರು: ನಗರಸಭೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡಿದರು.</p>.<p>ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ತ್ಯಾಜ್ಯ ಸಂಗ್ರಹಣೆ, ರಸ್ತೆ ಕಸಗುಡಿಸುವ ಕೆಲಸಗಳು ಸ್ಥಗಿತಗೊಳಿಸಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆಯಲ್ಲಿ ನಿರತರಾದರು.</p>.<p>ನಗರಸಭೆ ಸದಸ್ಯ ಶಾಮೀದ್ ಮನಿಯಾರ, ನವೀನ್ ಮಾಲಿಪಾಟೀಲ, ಉಮೇಶ ಸಿಂಗನಾಳ, ಖಾಸಿಂಸಾಬ್ ಗದ್ವಾಲ್, ಅಜಯಕುಮಾರ ಬಿಚ್ಚಾಲಿ, ರಾಚಪ್ಪ ಸಿದ್ದಾಪುರ, ಉಸ್ಮಾನ್ ಪಾಷಾ, ವಾಸುದೇವ ನವಲಿ, ಶರಬೋಜಿ ಗಾಯಕವಾಡ್ ಸೇರಿ ನಗರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಅವರ ಪತಿ ಸಂದೀಪ್ ಅವರು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಅವರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಹಾಗೂ ಪೌರಕಾರ್ಮಿಕರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ನಗರಸಭೆ ಸದಸ್ಯ ಮನೋಹರಸ್ವಾಮಿ ಮಾತನಾಡಿ,‘ನಗರಸಭೆ ಮಾಜಿ ಅಧ್ಯಕ್ಷರ ಪತಿ ಸಂದೀಪ್ ಅವರು ಪೌರಾಯುಕ್ತರು ಹಾಗೂ ಅವರ ಕುಟುಂಬಸ್ಥರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ತಿಳಿ ಹೇಳಲಾಗಿದೆ. ಆದರೂ ಸಂದೀಪ ಅವರು ನಿಂದಿಸಿದ ಆಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿದರು.</p>.<p>ಮಾಲಾಶ್ರೀ ಅವರು ನಗರಸಭೆ ಸದಸ್ಯರಾಗಿದ್ದಾರೆ. ಅವರ ಪತಿ ಸಂದೀಪ್ ಅವರು ನಗರಸಭೆ ಕಾರ್ಯದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಾರೆ. ಕರ್ತವ್ಯನಿರತ ಪೌರಾಯುಕ್ತರಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿರುವ ಕುರಿತು ಹಲವು ಮೌಖಿಕ ದೂರುಗಳು ಬಂದಿವೆ. ಸರ್ಕಾರಿ ಸೇವೆಯಲ್ಲಿ ಪೌರಾಯುಕ್ತರ ಕೆಲಸಕ್ಕೆ ಅಡ್ಡಿಪಡಿಸುವುದು ಅಪರಾಧ ಎಂದರು.</p>.<p>ಪೌರಾಯುಕ್ತರನ್ನ ಅವಾಚ್ಯ ಪದಗಳಿಂದ ನಿಂದಿಸಿದ ಮಾಜಿ ಅಧ್ಯಕ್ಷರ ಪತಿ ಸಂದೀಪ್ ವಿರುದ್ಧ ನಗರಸಭೆ ಸದಸ್ಯರು, ಪೌರಕಾರ್ಮಿಕರು ಪ್ರಕರಣ ದಾಖಲಿಸಲು ನಗರ ಠಾಣೆಗೆ ತೆರಳಿ ಫಿರ್ಯಾದಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.</p>.<p>ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಹಾಜರು: ನಗರಸಭೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡಿದರು.</p>.<p>ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ತ್ಯಾಜ್ಯ ಸಂಗ್ರಹಣೆ, ರಸ್ತೆ ಕಸಗುಡಿಸುವ ಕೆಲಸಗಳು ಸ್ಥಗಿತಗೊಳಿಸಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆಯಲ್ಲಿ ನಿರತರಾದರು.</p>.<p>ನಗರಸಭೆ ಸದಸ್ಯ ಶಾಮೀದ್ ಮನಿಯಾರ, ನವೀನ್ ಮಾಲಿಪಾಟೀಲ, ಉಮೇಶ ಸಿಂಗನಾಳ, ಖಾಸಿಂಸಾಬ್ ಗದ್ವಾಲ್, ಅಜಯಕುಮಾರ ಬಿಚ್ಚಾಲಿ, ರಾಚಪ್ಪ ಸಿದ್ದಾಪುರ, ಉಸ್ಮಾನ್ ಪಾಷಾ, ವಾಸುದೇವ ನವಲಿ, ಶರಬೋಜಿ ಗಾಯಕವಾಡ್ ಸೇರಿ ನಗರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>