<p><strong>ಕುಷ್ಟಗಿ</strong>: ದ್ವಿದಳಧಾನ್ಯದ ಬೆಳೆಗಳಲ್ಲಿ ಹೆಸರು ಮತ್ತು ತೊಗರಿ ಪ್ರಮುಖ ಬೆಳೆಗಳು. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಹೆಸರುಕಾಯಿ ಕಟಾವಿಗೆ ಬಂದಿದ್ದರೂ ಕೂಲಿಕಾರ್ಮಿಕರ ಕೊರತೆಯಿಂದ ಫಸಲು ಕೈಗೆಟಕದಿರುವುದು ಕಂಡುಬಂದಿದೆ.</p>.<p>ಅಲ್ಪಾವಧಿಯಲ್ಲಿ ಬೆಳೆಯುವ ಹೆಸರು ಬೆಳೆ ಆಗಾಗ್ಗೆ ಸುರಿದ ಅಲ್ಪಸ್ವಲ್ಪ ಮಳೆಗೆ ಬಳ್ಳಿಯ ಬೆಳವಣಿಗೆ ಉತ್ತಮವಾಗಿತ್ತು. ಬೆಳೆಗೆ ರೋಗಬಾಧೆ ಇರಲಿಲ್ಲ. ಆದರೆ ಕೀಟದ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಿನ ಸಂಗತಿಯಾಗಿತ್ತು. ಆದರೆ ಈಗ ಒಣಗಿದ ಕಾಯಿಗಳನ್ನು ಬಿಡಿಸಿಕೊಳ್ಳುವುದಕ್ಕೂ ಪರದಾಡುವಂತಾಗಿದೆ.</p>.<p>ಸಮಸ್ಯೆ ಏನು: ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ 2,240 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆಗೆ ಪ್ರಾರಂಭದಿಂದಲೇ ಅನೇಕ ರೀತಿಯ ವಿಘ್ನಗಳು ಎದುರಾಗಿವೆ. ಕಾಯಿ, ಮೊಗ್ಗು ಕೊರೆಯುವ ಹುಳು ಬಾಧೆ ನಿವಾರಣೆಗೆ ರೈತರು ದುಬಾರಿ ರಾಸಾಯನಿಕಗಳನ್ನು ಖರೀದಿಸಿ ಮೂರು ನಾಲ್ಕು ಬಾರಿ ಸಿಂಪಡಣೆ ಮಾಡಿದ್ದಾರೆ. ಆದರೂ ಬಹಳಷ್ಟು ಕಾಯಿಗಳು ಹಾಳಾಗಿವೆ. ಒಣಗಿದ ಕಾಯಿಗಳಲ್ಲಿನ(ಬುಡ್ಡಿ) ರಂಧ್ರಗಳು ಎಷ್ಟರಮಟ್ಟಿಗೆ ಹುಳು ಬಾಧೆ ಇತ್ತು ಎಂಬುದನ್ನು ವಿವರಿಸುತ್ತಿವೆ. ಈಗ ಅವುಗಳನ್ನು ಬಿಡಿಸಬೇಕೆಂದರೆ ಕೂಲಿಕಾರ್ಮಿಕರ ಕೊರತೆ ಎದುರಾಗಿದೆ. ಇನ್ನೊಂದೆಡೆ ಜಿಟಿಜಿಟಿ ಮಳೆಯೂ ಅಡ್ಡಿಯಾಗಿದ್ದು, ಬಿಸಿಲು ಬಿದ್ದರೆ ಕಾಯಿಗಳು ಸಿಡಿಯುತ್ತವೆ ಎಂಬ ಕೊರಗು ನೆರೆಬೆಂಚಿ ಗ್ರಾಮದ ರೈತ ಮಾನಪ್ಪ ಗದ್ದಿ ಇತರೆ ರೈತರದ್ದು.</p>.<p>ಬಂದಷ್ಟು ಫಸಲು ಕೈಗೆಟುಕಿದರೆ ಶ್ರಾವಣಮಾಸದಲ್ಲಿ ಬರುವ ನಾಗರಪಂಚಮಿ ಹಬ್ಬದ ಖರ್ಚುವೆಚ್ಚಗಳಿಗೆ ಒಂದಷ್ಟು ಆರ್ಥಿಕ ಅನುಕೂಲವಾಗುತ್ತದೆ, ಆದರೆ ಕೈಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೂಲಿಕಾರರಿಗೆ ನೀಡುತ್ತಿರುವ ₹ 300-350 ಕೂಲಿ ಹಣವೂ ರೈತರಿಗೆ ಹೊರೆಯಾಗಿದೆ. ಅಷ್ಟೇ ಅಲ್ಲ ಕೂಲಿ ಕೆಲಸದ ಪದ್ಧತಿಯಲ್ಲೂ ಬಹಳಷ್ಟು ಬದಲಾವಣೆಯಾಗಿದ್ದು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ಮೂರು ಹಂತದಲ್ಲಿ ಕೂಲಿಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ರೈತರಿಗಿಂತ ಕೂಲಿಕಾರರೇ ಈಗಿನ ಕಾಲದಲ್ಲಿ ನಿಶ್ಚಿಂತೆಯಿಂದ ಇದ್ದಾರೆ ಎಂದು ಟೆಂಗುಂಟಿ ಗ್ರಾಮದ ರೈತ ಹನುಮಗೌಡ ಸಮಸ್ಯೆ ವಿವರಿಸಿದರು.</p>.<p>ಬೀಜೋತ್ಪಾದನೆ ಹೆಚ್ಚು: ಇನ್ನೊಂದೆಡೆ ಕುಷ್ಟಗಿ ಮತ್ತು ಸುತ್ತಲಿನ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮೆಣಸಿನಕಾಯಿ, ಹತ್ತಿ ಮತ್ತಿತರೆ ವಾಣಿಜ್ಯ ಬೆಳೆಗಳ ಬೀಜೋತ್ಪಾದನೆ ತಾಕುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಹುತೇಕ ಕೂಲಿಕಾರ್ಮಿಕರು ಆ ಕೆಲಸಕ್ಕೆ ಹೋಗುತ್ತಿರುವುದೂ ಇತರೆ ಕೃಷಿ ಕೆಲಸಕಾರ್ಯಗಳಿಗೆ ಬಹಳಷ್ಟು ಕೊರೆಯಾಗಿದೆ ಎಂದು ರೈತ ಬಸಪ್ಪ ಟಕ್ಕಳಕಿ ಹೇಳಿದರು.</p>.<p><strong>ಬಹಳಷ್ಟು ಜನ ಕಾಂಕ್ರೀಟ್ ಕಟ್ಟಡ ಕಾಮಗಾರಿಗಳಿಗೆ ಮತ್ತು ಬೀಜೋತ್ಪಾದನೆ ತಾಕುಗಳ ಕೆಲಸಕ್ಕೆ ಹೋಗುತ್ತಿರುವುದು ಕೃಷಿ ಕೆಲಸಗಳಿಗೆ ಬರುವವರೇ ಇಲ್ಲದಂತಾಗಿದೆ. </strong></p><p><strong>-ಹನುಮನಗೌಡ ಪಾಟೀಲ ಟೆಂಗುಂಟಿ ರೈತ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ</strong>: ದ್ವಿದಳಧಾನ್ಯದ ಬೆಳೆಗಳಲ್ಲಿ ಹೆಸರು ಮತ್ತು ತೊಗರಿ ಪ್ರಮುಖ ಬೆಳೆಗಳು. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಹೆಸರುಕಾಯಿ ಕಟಾವಿಗೆ ಬಂದಿದ್ದರೂ ಕೂಲಿಕಾರ್ಮಿಕರ ಕೊರತೆಯಿಂದ ಫಸಲು ಕೈಗೆಟಕದಿರುವುದು ಕಂಡುಬಂದಿದೆ.</p>.<p>ಅಲ್ಪಾವಧಿಯಲ್ಲಿ ಬೆಳೆಯುವ ಹೆಸರು ಬೆಳೆ ಆಗಾಗ್ಗೆ ಸುರಿದ ಅಲ್ಪಸ್ವಲ್ಪ ಮಳೆಗೆ ಬಳ್ಳಿಯ ಬೆಳವಣಿಗೆ ಉತ್ತಮವಾಗಿತ್ತು. ಬೆಳೆಗೆ ರೋಗಬಾಧೆ ಇರಲಿಲ್ಲ. ಆದರೆ ಕೀಟದ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಿನ ಸಂಗತಿಯಾಗಿತ್ತು. ಆದರೆ ಈಗ ಒಣಗಿದ ಕಾಯಿಗಳನ್ನು ಬಿಡಿಸಿಕೊಳ್ಳುವುದಕ್ಕೂ ಪರದಾಡುವಂತಾಗಿದೆ.</p>.<p>ಸಮಸ್ಯೆ ಏನು: ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ 2,240 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆಗೆ ಪ್ರಾರಂಭದಿಂದಲೇ ಅನೇಕ ರೀತಿಯ ವಿಘ್ನಗಳು ಎದುರಾಗಿವೆ. ಕಾಯಿ, ಮೊಗ್ಗು ಕೊರೆಯುವ ಹುಳು ಬಾಧೆ ನಿವಾರಣೆಗೆ ರೈತರು ದುಬಾರಿ ರಾಸಾಯನಿಕಗಳನ್ನು ಖರೀದಿಸಿ ಮೂರು ನಾಲ್ಕು ಬಾರಿ ಸಿಂಪಡಣೆ ಮಾಡಿದ್ದಾರೆ. ಆದರೂ ಬಹಳಷ್ಟು ಕಾಯಿಗಳು ಹಾಳಾಗಿವೆ. ಒಣಗಿದ ಕಾಯಿಗಳಲ್ಲಿನ(ಬುಡ್ಡಿ) ರಂಧ್ರಗಳು ಎಷ್ಟರಮಟ್ಟಿಗೆ ಹುಳು ಬಾಧೆ ಇತ್ತು ಎಂಬುದನ್ನು ವಿವರಿಸುತ್ತಿವೆ. ಈಗ ಅವುಗಳನ್ನು ಬಿಡಿಸಬೇಕೆಂದರೆ ಕೂಲಿಕಾರ್ಮಿಕರ ಕೊರತೆ ಎದುರಾಗಿದೆ. ಇನ್ನೊಂದೆಡೆ ಜಿಟಿಜಿಟಿ ಮಳೆಯೂ ಅಡ್ಡಿಯಾಗಿದ್ದು, ಬಿಸಿಲು ಬಿದ್ದರೆ ಕಾಯಿಗಳು ಸಿಡಿಯುತ್ತವೆ ಎಂಬ ಕೊರಗು ನೆರೆಬೆಂಚಿ ಗ್ರಾಮದ ರೈತ ಮಾನಪ್ಪ ಗದ್ದಿ ಇತರೆ ರೈತರದ್ದು.</p>.<p>ಬಂದಷ್ಟು ಫಸಲು ಕೈಗೆಟುಕಿದರೆ ಶ್ರಾವಣಮಾಸದಲ್ಲಿ ಬರುವ ನಾಗರಪಂಚಮಿ ಹಬ್ಬದ ಖರ್ಚುವೆಚ್ಚಗಳಿಗೆ ಒಂದಷ್ಟು ಆರ್ಥಿಕ ಅನುಕೂಲವಾಗುತ್ತದೆ, ಆದರೆ ಕೈಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೂಲಿಕಾರರಿಗೆ ನೀಡುತ್ತಿರುವ ₹ 300-350 ಕೂಲಿ ಹಣವೂ ರೈತರಿಗೆ ಹೊರೆಯಾಗಿದೆ. ಅಷ್ಟೇ ಅಲ್ಲ ಕೂಲಿ ಕೆಲಸದ ಪದ್ಧತಿಯಲ್ಲೂ ಬಹಳಷ್ಟು ಬದಲಾವಣೆಯಾಗಿದ್ದು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ಮೂರು ಹಂತದಲ್ಲಿ ಕೂಲಿಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ರೈತರಿಗಿಂತ ಕೂಲಿಕಾರರೇ ಈಗಿನ ಕಾಲದಲ್ಲಿ ನಿಶ್ಚಿಂತೆಯಿಂದ ಇದ್ದಾರೆ ಎಂದು ಟೆಂಗುಂಟಿ ಗ್ರಾಮದ ರೈತ ಹನುಮಗೌಡ ಸಮಸ್ಯೆ ವಿವರಿಸಿದರು.</p>.<p>ಬೀಜೋತ್ಪಾದನೆ ಹೆಚ್ಚು: ಇನ್ನೊಂದೆಡೆ ಕುಷ್ಟಗಿ ಮತ್ತು ಸುತ್ತಲಿನ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮೆಣಸಿನಕಾಯಿ, ಹತ್ತಿ ಮತ್ತಿತರೆ ವಾಣಿಜ್ಯ ಬೆಳೆಗಳ ಬೀಜೋತ್ಪಾದನೆ ತಾಕುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಹುತೇಕ ಕೂಲಿಕಾರ್ಮಿಕರು ಆ ಕೆಲಸಕ್ಕೆ ಹೋಗುತ್ತಿರುವುದೂ ಇತರೆ ಕೃಷಿ ಕೆಲಸಕಾರ್ಯಗಳಿಗೆ ಬಹಳಷ್ಟು ಕೊರೆಯಾಗಿದೆ ಎಂದು ರೈತ ಬಸಪ್ಪ ಟಕ್ಕಳಕಿ ಹೇಳಿದರು.</p>.<p><strong>ಬಹಳಷ್ಟು ಜನ ಕಾಂಕ್ರೀಟ್ ಕಟ್ಟಡ ಕಾಮಗಾರಿಗಳಿಗೆ ಮತ್ತು ಬೀಜೋತ್ಪಾದನೆ ತಾಕುಗಳ ಕೆಲಸಕ್ಕೆ ಹೋಗುತ್ತಿರುವುದು ಕೃಷಿ ಕೆಲಸಗಳಿಗೆ ಬರುವವರೇ ಇಲ್ಲದಂತಾಗಿದೆ. </strong></p><p><strong>-ಹನುಮನಗೌಡ ಪಾಟೀಲ ಟೆಂಗುಂಟಿ ರೈತ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>