<p><strong>ಕುಷ್ಟಗಿ</strong>: ತಾಲ್ಲೂಕಿನ ನಿಡಶೇಸಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕಿ ಸಹಿ ಫೋರ್ಜರಿ ಮಾಡಿದ ವಿಷಯ ವಿವಾದಕ್ಕೀಡಾಗಿದ್ದು, ಸಹಿಯ ಸತ್ಯಾಸತ್ಯೆಯನ್ನು ಕಂಡು ಹಿಡಿಯಲು ಸಹಿಗಳ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯ(ಫೊರೆನ್ಸಿಕ್ ಸೈನ್ ಲ್ಯಾಬ್)ಗೆ ಕಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು, ‘ಶಿಶುಪಾಲನಾ ರಜೆ ಪಡೆಯುವ ಸಲುವಾಗಿ ಸಹ ಶಿಕ್ಷಕಿ ನೇರವಾಗಿ ತಂದು ನೀಡಿದ್ದ ಅರ್ಜಿಯಲ್ಲಿ ಮುಖ್ಯಶಿಕ್ಷಕಿ ಮೀನಾಕ್ಷಮ್ಮಾ ಅವರ ಸಹಿಯಿತ್ತು. ಆದರೆ ಸಹಿ ತಮ್ಮದಲ್ಲದ ಕಾರಣ ಶಿಕ್ಷಕಿ ಶಿವಲೀಲಾ ಹಂದಿಗನೂರು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮುಖ್ಯಶಿಕ್ಷಕಿ ದೂರು ನೀಡಿದ್ದರು. ಈ ಬಗ್ಗೆ ಇಬ್ಬರ ಸಮ್ಮುಖದಲ್ಲೇ ಮಂಗಳವಾರ ಚರ್ಚಿಸಲಾಯಿತು. ಆದರೆ ಸಹಿ ತಮ್ಮದಲ್ಲ ಎಂದು ಮುಖ್ಯಶಿಕ್ಷಕಿ, ಅವರದ್ದೇ ಸಹಿ ಎಂದು ಸಹ ಶಿಕ್ಷಕಿ ವಾದಿಸಿ ತಪ್ಪು ಒಪ್ಪಿಕೊಳ್ಳಲು ಸಿದ್ಧರಾಗಲಿಲ್ಲ. ಅನಿವಾರ್ಯವಾಗಿ ಇಬ್ಬರ ಸಹಿಗಳ ಮಾದರಿಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.</p>.<p>ದಿಢೀರ್ ಹಾಜರು: ಈ ಮಧ್ಯೆ ಒಂದು ತಿಂಗಳವರೆಗೆ ಶಿಶುಪಾಲನಾ ರಜೆಯ ಮೇಲೆ ತೆರಳಿದ್ದ ಶಿವಲೀಲಾ ಹಂದಿಗನೂರು ಮಂಗಳವಾರ ಶಾಲೆಗೆ ದಿಢೀರ್ ಹಾಜರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಿಇಒ ಕಾಂಬಳೆ ಅವರು, ‘ರಜೆ ರದ್ದುಪಡಿಸಿ ಶಾಲೆಗೆ ಹಾಜರಾಗುವುದಾಗಿ ಶಿಕ್ಷಕಿ ಶಿವಲೀಲಾ ಸೋಮವಾರ ಕಚೇರಿಗೆ ಬಂದು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು. ಅಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶಿಕ್ಷಕರು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಸ್ಡಿಎಂಸಿಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು.</p>.<p>ಶಿಕ್ಷಕಿ ವರ್ಗಾವಣೆಗೆ ಒತ್ತಾಯ ಈ ಮಧ್ಯೆ ನಿಡಶೇಸಿ ಶಾಲೆಯಲ್ಲಿನ ಭೌತಿಕ ಮತ್ತು ಆಡಳಿತಾತ್ಮಕ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬಿಇಒ ಸುರೇಂದ್ರ ಕಾಂಬಳೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕರು ಮತ್ತು ಎಸ್ಡಿಎಂಸಿ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ವಾತಾವರಣ ಹಾಳಾಗಿದೆ. ಕೆಲ ಶಿಕ್ಷಕರು ಪಾಠ ಮಾಡದೆ ಹರಟೆ ಹೊಡೆದು ಕಾಲಕಳೆಯುತ್ತಿದ್ದು ಮಕ್ಕಳು ದೂರುತ್ತಿದ್ದಾರೆ. ಅದರಲ್ಲೂ 14 ವರ್ಷಗಳಿಂದಲೂ ಇಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕಿ ಶಿವಲೀಲಾ ಹಂದಿಗನೂರು ಅವರಂತೂ ಪಾಠ ಮಾಡುವುದಿಲ್ಲ. ಹೀಗಾಗಿ ಅವರನ್ನು ಈ ಶಾಲೆಯಿಂದ ಬಿಡುಗಡೆ ಮಾಡಿ ಬೇರೆಡೆ ನಿಯೋಜನೆ ಮಾಡುವಂತೆ ಒತ್ತಾಯಿಸಿರುವುದಾಗಿ ಸಭೆಯಲ್ಲಿದ್ದವರು ನಂತರ ಮಾಹಿತಿ ನೀಡಿದರು. ಅಲ್ಲದೆ ಶಿಕ್ಷಕಿಯೊಬ್ಬರು ತಮ್ಮ ವಿರುದ್ಧ ದನಿ ಎತ್ತಿದವರ ವಿರುದ್ಧವೇ ಮಕ್ಕಳು ಮತ್ತು ಪಾಲಕರನ್ನು ಎತ್ತಿ ಕಟ್ಟುವುದು. ಹಳೆಯ ವಿದ್ಯಾರ್ಥಿಗಳ ಮೂಲಕ ಪರೋಕ್ಷವಾಗಿ ಬೆದರಿಕೆಯೊಡ್ಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲದೆ ತಾವು ವರ್ಗಾವಣೆಯಿಂದ ಬಚಾವ್ ಆಗಲು ಕಸರತ್ತು ನಡೆಸಿರುವ ಶಿಕ್ಷಕಿ ತಮ್ಮ ಮೊಬೈಲ್ಗೆ ಪಾಲಕರಿಂದ ಕರೆ ಮಾಡಿಸಿ ಇಲ್ಲಿಯೇ ಉಳಿಯುವಂತೆ ಫೋನ್ ಮೂಲಕ ಒತ್ತಾಯಿಸಬೇಕು ಎಂದೆ ಮಕ್ಕಳಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಪಾಲಕರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ</strong>: ತಾಲ್ಲೂಕಿನ ನಿಡಶೇಸಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕಿ ಸಹಿ ಫೋರ್ಜರಿ ಮಾಡಿದ ವಿಷಯ ವಿವಾದಕ್ಕೀಡಾಗಿದ್ದು, ಸಹಿಯ ಸತ್ಯಾಸತ್ಯೆಯನ್ನು ಕಂಡು ಹಿಡಿಯಲು ಸಹಿಗಳ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯ(ಫೊರೆನ್ಸಿಕ್ ಸೈನ್ ಲ್ಯಾಬ್)ಗೆ ಕಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು, ‘ಶಿಶುಪಾಲನಾ ರಜೆ ಪಡೆಯುವ ಸಲುವಾಗಿ ಸಹ ಶಿಕ್ಷಕಿ ನೇರವಾಗಿ ತಂದು ನೀಡಿದ್ದ ಅರ್ಜಿಯಲ್ಲಿ ಮುಖ್ಯಶಿಕ್ಷಕಿ ಮೀನಾಕ್ಷಮ್ಮಾ ಅವರ ಸಹಿಯಿತ್ತು. ಆದರೆ ಸಹಿ ತಮ್ಮದಲ್ಲದ ಕಾರಣ ಶಿಕ್ಷಕಿ ಶಿವಲೀಲಾ ಹಂದಿಗನೂರು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮುಖ್ಯಶಿಕ್ಷಕಿ ದೂರು ನೀಡಿದ್ದರು. ಈ ಬಗ್ಗೆ ಇಬ್ಬರ ಸಮ್ಮುಖದಲ್ಲೇ ಮಂಗಳವಾರ ಚರ್ಚಿಸಲಾಯಿತು. ಆದರೆ ಸಹಿ ತಮ್ಮದಲ್ಲ ಎಂದು ಮುಖ್ಯಶಿಕ್ಷಕಿ, ಅವರದ್ದೇ ಸಹಿ ಎಂದು ಸಹ ಶಿಕ್ಷಕಿ ವಾದಿಸಿ ತಪ್ಪು ಒಪ್ಪಿಕೊಳ್ಳಲು ಸಿದ್ಧರಾಗಲಿಲ್ಲ. ಅನಿವಾರ್ಯವಾಗಿ ಇಬ್ಬರ ಸಹಿಗಳ ಮಾದರಿಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.</p>.<p>ದಿಢೀರ್ ಹಾಜರು: ಈ ಮಧ್ಯೆ ಒಂದು ತಿಂಗಳವರೆಗೆ ಶಿಶುಪಾಲನಾ ರಜೆಯ ಮೇಲೆ ತೆರಳಿದ್ದ ಶಿವಲೀಲಾ ಹಂದಿಗನೂರು ಮಂಗಳವಾರ ಶಾಲೆಗೆ ದಿಢೀರ್ ಹಾಜರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಿಇಒ ಕಾಂಬಳೆ ಅವರು, ‘ರಜೆ ರದ್ದುಪಡಿಸಿ ಶಾಲೆಗೆ ಹಾಜರಾಗುವುದಾಗಿ ಶಿಕ್ಷಕಿ ಶಿವಲೀಲಾ ಸೋಮವಾರ ಕಚೇರಿಗೆ ಬಂದು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು. ಅಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶಿಕ್ಷಕರು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಸ್ಡಿಎಂಸಿಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು.</p>.<p>ಶಿಕ್ಷಕಿ ವರ್ಗಾವಣೆಗೆ ಒತ್ತಾಯ ಈ ಮಧ್ಯೆ ನಿಡಶೇಸಿ ಶಾಲೆಯಲ್ಲಿನ ಭೌತಿಕ ಮತ್ತು ಆಡಳಿತಾತ್ಮಕ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬಿಇಒ ಸುರೇಂದ್ರ ಕಾಂಬಳೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕರು ಮತ್ತು ಎಸ್ಡಿಎಂಸಿ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ವಾತಾವರಣ ಹಾಳಾಗಿದೆ. ಕೆಲ ಶಿಕ್ಷಕರು ಪಾಠ ಮಾಡದೆ ಹರಟೆ ಹೊಡೆದು ಕಾಲಕಳೆಯುತ್ತಿದ್ದು ಮಕ್ಕಳು ದೂರುತ್ತಿದ್ದಾರೆ. ಅದರಲ್ಲೂ 14 ವರ್ಷಗಳಿಂದಲೂ ಇಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕಿ ಶಿವಲೀಲಾ ಹಂದಿಗನೂರು ಅವರಂತೂ ಪಾಠ ಮಾಡುವುದಿಲ್ಲ. ಹೀಗಾಗಿ ಅವರನ್ನು ಈ ಶಾಲೆಯಿಂದ ಬಿಡುಗಡೆ ಮಾಡಿ ಬೇರೆಡೆ ನಿಯೋಜನೆ ಮಾಡುವಂತೆ ಒತ್ತಾಯಿಸಿರುವುದಾಗಿ ಸಭೆಯಲ್ಲಿದ್ದವರು ನಂತರ ಮಾಹಿತಿ ನೀಡಿದರು. ಅಲ್ಲದೆ ಶಿಕ್ಷಕಿಯೊಬ್ಬರು ತಮ್ಮ ವಿರುದ್ಧ ದನಿ ಎತ್ತಿದವರ ವಿರುದ್ಧವೇ ಮಕ್ಕಳು ಮತ್ತು ಪಾಲಕರನ್ನು ಎತ್ತಿ ಕಟ್ಟುವುದು. ಹಳೆಯ ವಿದ್ಯಾರ್ಥಿಗಳ ಮೂಲಕ ಪರೋಕ್ಷವಾಗಿ ಬೆದರಿಕೆಯೊಡ್ಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲದೆ ತಾವು ವರ್ಗಾವಣೆಯಿಂದ ಬಚಾವ್ ಆಗಲು ಕಸರತ್ತು ನಡೆಸಿರುವ ಶಿಕ್ಷಕಿ ತಮ್ಮ ಮೊಬೈಲ್ಗೆ ಪಾಲಕರಿಂದ ಕರೆ ಮಾಡಿಸಿ ಇಲ್ಲಿಯೇ ಉಳಿಯುವಂತೆ ಫೋನ್ ಮೂಲಕ ಒತ್ತಾಯಿಸಬೇಕು ಎಂದೆ ಮಕ್ಕಳಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಪಾಲಕರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>