ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲುಕೋಟೆ: ಹೆಸರಿಗಷ್ಟೇ ತೋಳಗಳ ಸಂರಕ್ಷಣಾ ವಲಯ!

‘ಸೈಕಾಸ್ ಅಭಯಾರಣ್ಯ’ ಎಂದು ಘೋಷಿಸಲು ಪರಿಸರ ಪ್ರೇಮಿಗಳ ಆಗ್ರಹ
ಶ್ರೀಕಾಂತ್ ಮೇಲುಕೋಟೆ
Published : 18 ಜುಲೈ 2024, 6:41 IST
Last Updated : 18 ಜುಲೈ 2024, 6:41 IST
ಫಾಲೋ ಮಾಡಿ
Comments
ಮೇಲುಕೋಟೆ ವನ್ಯಜೀವಿಗಳ ಅಭಯಾರಣ್ಯದ ದೃಶ್ಯ
ಮೇಲುಕೋಟೆ ವನ್ಯಜೀವಿಗಳ ಅಭಯಾರಣ್ಯದ ದೃಶ್ಯ
ಮೇಲುಕೋಟೆ ಅರಣ್ಯದಲ್ಲಿ ತೋಳಗಳಿಗೆ ಬೇಕಾದ ವಾತಾವರಣ ಇಲ್ಲದ ಕಾರಣ ತೋಳ ಸಂತತಿ ಕಣ್ಮರೆಯಾಗಿದೆ. ಧಾಮದ ಹೆಸರು ಬದಲಾವಣೆಯ ನಿರ್ಧಾರ ಸರ್ಕಾರದ ಮಟ್ಟದಲ್ಲೇ ನಡೆಯಬೇಕು
– ಜಗದೀಶ್ ವಲಯ ಅರಣ್ಯಾಧಿಕಾರಿ ಮೇಲುಕೋಟೆ
‘ಸೈಕಾಸ್’ ಸಸ್ಯಗಳ ತಾಣ
ಮೇಲುಕೋಟೆ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣ‌ವು ಇಡೀ ವಿಶ್ವದಲ್ಲೇ ಅತಿಹೆಚ್ಚು ಬೇಡಿಕೆ ಇರೋ ‘ಸೈಕಾಸ್’ ಸಸ್ಯದ ತಾಣವಾಗಿದೆ. ಡೈನೋಸಾರ್ ಪ್ರಾಣಿ ಜೀವಿಸಿದ್ದ ಕಾಲದಿಂದಲೂ ಇದ್ದ ಪ್ರಾಚೀನಕಾಲದ ಸಸ್ಯವಾಗಿದ್ದು ಸಾವಿರಾರು ವರ್ಷಗಳವರೆಗೂ ಜೀವಿಸುವ ಏಕೈಕ ಸಸ್ಯವಾಗಿದೆ.  ಈ ಅಪರೂಪದ ಸಸ್ಯದಿಂದಾಗಿ  ಬಹುದೊಡ್ಡ ಕಾಯಿಲೆಗಳಿಗೂ ಔಷಧಿ ಸಿಗುತ್ತದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ. ಆದ್ದರಿಂದ ವರ್ಷಕೊಮ್ಮೆ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಈ ಅರಣ್ಯಕ್ಕೆ ಆಗಮಿಸಿ ಮೂರು ನಾಲ್ಕು ದಿನ ಅರಣ್ಯದಲ್ಲಿ ಸಂಶೋಧನೆ ಮಾಡುತ್ತಾರೆ. ಮೂಲಗಳ ಪ್ರಕಾರ ಇಡೀ ರಾಜ್ಯದಲ್ಲೇ ಅತಿಹೆಚ್ಚು ಸೈಕಾಸ್ ಸಸ್ಯ ಬೆಳೆಯುವುದು ಮೇಲುಕೋಟೆ ಅರಣ್ಯದಲ್ಲಿ ಮಾತ್ರ. ಸೈಕಾಸ್ ಸಸ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಜತೆಗೆ ಸೈಕಾಸ್ ಅಭಯಾರಣ್ಯವೆಂದೇ ಘೋಷಣೆ ಮಾಡಬೇಕು ಎಂದು ಪರಿಸರ ಪ್ರೇಮಿಗಳಾದ ಹರವು ದೇಗೌಡ ರಾಮಾನುಜ ಪಾರ್ಥ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT