<p><strong>ಮಂಡ್ಯ</strong>: ತಾಲ್ಲೂಕಿನ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಗುರುವಾರ ತಡರಾತ್ರಿ ಮರಿಲಿಂಗನದೊಡ್ಡಿ ಗ್ರಾಮದ ಶ್ರೀರಾಮ ಮಂದಿರ ಮತ್ತು ಚಿಕ್ಕಮ್ಮ ದೇವಸ್ಥಾನದಲ್ಲಿ ಬಾಗಿಲು ಮುರಿದು ಹುಂಡಿ ಹಣ ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.</p>.<p>ಚಿಕ್ಕಮ್ಮ ದೇವಾಲಯದಲ್ಲಿ ದೇವರ ಸೀರೆಗಳನ್ನು ಕದ್ದೋಯ್ದಿರುವ ಕಳ್ಳರು, ಶ್ರೀರಾಮ ಮಂದಿರದ ಒಂದರಲ್ಲಿಯೇ ಹುಂಡಿ ಹಣವು ಸುಮಾರು ₹60 ಸಾವಿರ ಕಳ್ಳತನವಾಗಿದೆ ಎಂದು ಶ್ರೀರಾಮ ಮಂದಿರ ಟ್ರಸ್ಟ್ ಚೇತನ್ ಮತ್ತು ಮುಖಂಡ ಶಿವಪ್ರಸಾದ್ ಅವರು ಮಾಹಿತಿ ನೀಡಿದರು.</p>.<p>ಕಳೆದ ಆರು ತಿಂಗಳಲ್ಲಿ ಒಂದೇ ಗ್ರಾಮದ ಪಂಪ್ಸೆಟ್ಗಳಲ್ಲಿನ ತಾಮ್ರದ ವೈರ್ ಕಳವು, ಕಬ್ಬಿಣದ ಅಂಗಡಿಗಳು, ಪೇಯಿಂಟ್ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿರುವುದರಿಂದ ಗ್ರಾಮಸ್ಥರಾದ ಶಿವು, ಚೇತನ್, ಆನಂದ್ ಅವರು ಆತಂಕ ವ್ಯಕ್ತಡಿಸಿದರು.</p>.<p>ಮರಲಿಂಗನದೊಡ್ಡಿ ಗ್ರಾಮವು ಕೆರಗೋಡು ಪೊಲೀಸ್ ಠಾಣೆಯಿಂದ ಕೇವಲ 3 ಕಿ.ಮೀ. ದೂರದಲ್ಲಿದ್ದು, ಗ್ರಾಮದಲ್ಲಿ ಸರಣಿ ಕಳ್ಳತನವಾಗುತ್ತಿರುವುದರಿಂದ ಅಕ್ಕಪಕ್ಕದ ಗ್ರಾಮಸ್ಥರಲ್ಲಿಯೂ ಭಯ ಆವರಿಸಿದೆ. ತಕ್ಷಣ ಪೊಲೀಸರು ಕಾರ್ಯೋನ್ಮುಖರಾಗಿ ಕಳ್ಳತನ ತಪ್ಪಿಸಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.</p>.<p>ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>..........</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ತಾಲ್ಲೂಕಿನ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಗುರುವಾರ ತಡರಾತ್ರಿ ಮರಿಲಿಂಗನದೊಡ್ಡಿ ಗ್ರಾಮದ ಶ್ರೀರಾಮ ಮಂದಿರ ಮತ್ತು ಚಿಕ್ಕಮ್ಮ ದೇವಸ್ಥಾನದಲ್ಲಿ ಬಾಗಿಲು ಮುರಿದು ಹುಂಡಿ ಹಣ ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.</p>.<p>ಚಿಕ್ಕಮ್ಮ ದೇವಾಲಯದಲ್ಲಿ ದೇವರ ಸೀರೆಗಳನ್ನು ಕದ್ದೋಯ್ದಿರುವ ಕಳ್ಳರು, ಶ್ರೀರಾಮ ಮಂದಿರದ ಒಂದರಲ್ಲಿಯೇ ಹುಂಡಿ ಹಣವು ಸುಮಾರು ₹60 ಸಾವಿರ ಕಳ್ಳತನವಾಗಿದೆ ಎಂದು ಶ್ರೀರಾಮ ಮಂದಿರ ಟ್ರಸ್ಟ್ ಚೇತನ್ ಮತ್ತು ಮುಖಂಡ ಶಿವಪ್ರಸಾದ್ ಅವರು ಮಾಹಿತಿ ನೀಡಿದರು.</p>.<p>ಕಳೆದ ಆರು ತಿಂಗಳಲ್ಲಿ ಒಂದೇ ಗ್ರಾಮದ ಪಂಪ್ಸೆಟ್ಗಳಲ್ಲಿನ ತಾಮ್ರದ ವೈರ್ ಕಳವು, ಕಬ್ಬಿಣದ ಅಂಗಡಿಗಳು, ಪೇಯಿಂಟ್ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿರುವುದರಿಂದ ಗ್ರಾಮಸ್ಥರಾದ ಶಿವು, ಚೇತನ್, ಆನಂದ್ ಅವರು ಆತಂಕ ವ್ಯಕ್ತಡಿಸಿದರು.</p>.<p>ಮರಲಿಂಗನದೊಡ್ಡಿ ಗ್ರಾಮವು ಕೆರಗೋಡು ಪೊಲೀಸ್ ಠಾಣೆಯಿಂದ ಕೇವಲ 3 ಕಿ.ಮೀ. ದೂರದಲ್ಲಿದ್ದು, ಗ್ರಾಮದಲ್ಲಿ ಸರಣಿ ಕಳ್ಳತನವಾಗುತ್ತಿರುವುದರಿಂದ ಅಕ್ಕಪಕ್ಕದ ಗ್ರಾಮಸ್ಥರಲ್ಲಿಯೂ ಭಯ ಆವರಿಸಿದೆ. ತಕ್ಷಣ ಪೊಲೀಸರು ಕಾರ್ಯೋನ್ಮುಖರಾಗಿ ಕಳ್ಳತನ ತಪ್ಪಿಸಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.</p>.<p>ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>..........</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>