ಸಿದ್ದರಾಮಯ್ಯ ಕೆಳಗಿಳಿಸಲು ಬಿಜೆಪಿ ಹುನ್ನಾರ ಮುಡಾ ಸ್ವಚ್ಛಗೊಳಿಸಲು ‘ದೊಣ್ಣೆ ಚಳವಳಿ’ ಶಾಸಕರು ಪಡೆದ ಸೌಲಭ್ಯ ವಾಪಸ್ ಮಾಡಲಿ
ಸಭೆಯ ನಿರ್ಣಯಗಳು
l ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಶಾಶ್ವತವಾಗಿ ಮುಂದುವರಿಯಬೇಕು. ಗಾಂಧಿ ಪ್ರತಿಮೆ ಬಳಿ ದಾಖಲೆ ಸಮೇತ ಬಹಿರಂಗ ಚರ್ಚೆ ಆಯೋಜಿಸಿ ಬಿಜೆಪಿ ಮುಖಂಡರನ್ನು ಆಹ್ವಾನಿಸಬೇಕು. ಆರೋಪಿಸಿರುವ ದಾಖಲೆಗಳನ್ನು ಬಿಡುಗಡೆ ಮಾಡಬೇಕು. l 40 ವರ್ಷಗಳ ಈಚೆಗೆ ಆಗಿರುವ ಮುಖ್ಯಮಂತ್ರಿಗಳ ಆಸ್ತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಎಚ್.ಡಿ.ದೇವೇಗೌಡ ಎಚ್.ಡಿ.ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ಅವರ ಕುಟುಂಬದ ಆಸ್ತಿಗಳನ್ನು ಬಿಡುಗಡೆ ಮಾಡಬೇಕು. l ಆ.15ರಂದು ಅಂಬೇಡ್ಕರ್ ಪ್ರತಿಮೆ ಎದುರು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಎಲ್ಲ ಚಳವಳಿಗಾರರು ಮೌನ ಸತ್ಯಾಗ್ರಹ ನಡೆಸಬೇಕು. l ಮುಡಾ ಆಡಳಿತವು ವ್ಯವಸ್ಥಿತವಾಗಿ ನಡೆಯಲು ನುರಿತ ತಜ್ಞರ ಸಮಿತಿಯನ್ನು ರಚಿಸಬೇಕು. ಅಲ್ಲಿ ಹಳೆಯ ಪದ್ಧತಿಯನ್ನು ತೆಗೆದು ಹೊಸ ಪದ್ಧತಿ ಜಾರಿಗೊಳಿಸಬೇಕು. l ಮುಡಾ ಸಿಬ್ಬಂದಿ ವರ್ಗಾವಣೆ ಮಾಡಬೇಕು. l ಮುಡಾ ಆಸ್ತಿ ದೋಚಲು ‘50:50’ ಅನುಪಾತದಡಿ ನಿವೇಶನ ಹಂಚಿಕೆ ಮಾಡಲಾಗಿದ್ದು ಅದನ್ನು ವಾಪಸ್ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಮೀನು ನಿವೇಶನಗಳನ್ನು ವಾಪಸ್ ಕೊಡಬೇಕು. l ಎಲ್ಲ ಪ್ರಗತಿಪರರು ವಾರದಲ್ಲಿಯೇ ಮುಡಾ ಸ್ವಚ್ಛಗೊಳಿಸಲು ‘ದೊಣ್ಣೆ ಚಳವಳಿ’ ಮಾಡಬೇಕು.