<p>ಮೈಸೂರು: ಹೊರವಲಯದ ಬೋಗಾದಿ ಪಟ್ಟಣ ಪಂಚಾಯಿತಿಯ 2024–25ನೇ ಸಾಲಿನ ₹7.69 ಲಕ್ಷ ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಮಂಡಿಸಿದರು.</p>.<p>ಪಟ್ಟಣ ಪಂಚಾಯಿತಿ ನಿರೀಕ್ಷಿತ ಅನುದಾನ ₹12.27 ಕೋಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿತ ₹12.27 ಕೋಟಿ ಹೀಗೆ ಒಟ್ಟು ₹19.43 ಕೋಟಿಯನ್ನು ವಿವಿಧ ಕಾರ್ಯಕ್ರಮಗಳಿಗೆ ಹಂಚಲಾಗಿದೆ. ನಾಗರಿಕ ಸೌಕರ್ಯ, ಒಳಚರಂಡಿ ವ್ಯವಸ್ಥೆ, ಕಚೇರಿ ವೆಚ್ಚ, ಹೊರಗುತ್ತಿಗೆ ಕಾರ್ಯಾಚರಣೆ, ರಾಷ್ಟ್ರೀಯ ಹಬ್ಬ ಮತ್ತು ಕಾರ್ಯಕ್ರಮ, ಯುಜಿಡಿ ದುರಸ್ತಿ, ವೇತನ ಭತ್ಯೆ, ಜನಗಣತಿ ಹಾಗೂ ಸಾಮಾನ್ಯ ವೆಚ್ಚಕ್ಕಾಗಿ ₹5.51 ಕೋಟಿ ಮೀಸಲಿಡಲಾಗಿದೆ.</p>.<p>ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ನಿಧಿ, ಅಂಗವಿಕಲರ ಕಲ್ಯಾಣ ನಿಧಿಗಾಗಿ ₹42 ಲಕ್ಷ, ವೇತನ ಭತ್ಯೆಗೆ ₹1.48 ಕೋಟಿ, ಬೀದಿ ದೀಪ ಮತ್ತು ನೀರು ಸರಬರಾಜು, ವಿದ್ಯುತ್ ಸ್ಥಾವರಗಳ ಬಿಲ್ ಪಾವತಿಗೆ ₹6.50 ಕೋಟಿ, ರಸ್ತೆ, ಚರಂಡಿ, ಯುಜಿಡಿ ನೀರು ಸರಬರಾಜು, ಪಾರ್ಕ್ ಅಭಿವೃದ್ಧಿ ಕಾಮಗಾರಿ, ಸ್ಮಶಾನ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ಪಾರ್ಕ್ ಮತ್ತು ಇತರ ಕಾಮಗಾರಿಗಳಿಗೆ ₹5.43 ಕೋಟಿ ಪಾವತಿಸಲು ಅಂದಾಜಿಸಲಾಗಿದೆ.</p>.<p>ಮುಖ್ಯಾಧಿಕಾರಿ ಬಸವರಾಜು, ಆರ್ಐ ಡಿ.ಎನ್.ವಿಜಯ್ ಕುಮಾರ್, ಸಹಾಯಕ ಎಂಜಿನಿಯರ್ ಹರ್ಷ, ಆರೋಗ್ಯ ಇನ್ಸ್ಪೆಕ್ಟರ್ ಪುನೀತ್ ಕುಮಾರ್, ಅಕೌಂಟೆಂಟ್ ಕೆ.ಎನ್.ಪ್ರಕಾಶ್ ಮತ್ತು ಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಹೊರವಲಯದ ಬೋಗಾದಿ ಪಟ್ಟಣ ಪಂಚಾಯಿತಿಯ 2024–25ನೇ ಸಾಲಿನ ₹7.69 ಲಕ್ಷ ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಮಂಡಿಸಿದರು.</p>.<p>ಪಟ್ಟಣ ಪಂಚಾಯಿತಿ ನಿರೀಕ್ಷಿತ ಅನುದಾನ ₹12.27 ಕೋಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿತ ₹12.27 ಕೋಟಿ ಹೀಗೆ ಒಟ್ಟು ₹19.43 ಕೋಟಿಯನ್ನು ವಿವಿಧ ಕಾರ್ಯಕ್ರಮಗಳಿಗೆ ಹಂಚಲಾಗಿದೆ. ನಾಗರಿಕ ಸೌಕರ್ಯ, ಒಳಚರಂಡಿ ವ್ಯವಸ್ಥೆ, ಕಚೇರಿ ವೆಚ್ಚ, ಹೊರಗುತ್ತಿಗೆ ಕಾರ್ಯಾಚರಣೆ, ರಾಷ್ಟ್ರೀಯ ಹಬ್ಬ ಮತ್ತು ಕಾರ್ಯಕ್ರಮ, ಯುಜಿಡಿ ದುರಸ್ತಿ, ವೇತನ ಭತ್ಯೆ, ಜನಗಣತಿ ಹಾಗೂ ಸಾಮಾನ್ಯ ವೆಚ್ಚಕ್ಕಾಗಿ ₹5.51 ಕೋಟಿ ಮೀಸಲಿಡಲಾಗಿದೆ.</p>.<p>ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ನಿಧಿ, ಅಂಗವಿಕಲರ ಕಲ್ಯಾಣ ನಿಧಿಗಾಗಿ ₹42 ಲಕ್ಷ, ವೇತನ ಭತ್ಯೆಗೆ ₹1.48 ಕೋಟಿ, ಬೀದಿ ದೀಪ ಮತ್ತು ನೀರು ಸರಬರಾಜು, ವಿದ್ಯುತ್ ಸ್ಥಾವರಗಳ ಬಿಲ್ ಪಾವತಿಗೆ ₹6.50 ಕೋಟಿ, ರಸ್ತೆ, ಚರಂಡಿ, ಯುಜಿಡಿ ನೀರು ಸರಬರಾಜು, ಪಾರ್ಕ್ ಅಭಿವೃದ್ಧಿ ಕಾಮಗಾರಿ, ಸ್ಮಶಾನ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ಪಾರ್ಕ್ ಮತ್ತು ಇತರ ಕಾಮಗಾರಿಗಳಿಗೆ ₹5.43 ಕೋಟಿ ಪಾವತಿಸಲು ಅಂದಾಜಿಸಲಾಗಿದೆ.</p>.<p>ಮುಖ್ಯಾಧಿಕಾರಿ ಬಸವರಾಜು, ಆರ್ಐ ಡಿ.ಎನ್.ವಿಜಯ್ ಕುಮಾರ್, ಸಹಾಯಕ ಎಂಜಿನಿಯರ್ ಹರ್ಷ, ಆರೋಗ್ಯ ಇನ್ಸ್ಪೆಕ್ಟರ್ ಪುನೀತ್ ಕುಮಾರ್, ಅಕೌಂಟೆಂಟ್ ಕೆ.ಎನ್.ಪ್ರಕಾಶ್ ಮತ್ತು ಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>