<p><strong>ಮೈಸೂರು:</strong> ‘ಯಶಸ್ಸು ಎನ್ನುವುದು ಕಂಡ ಕಂಡಲ್ಲಿ ಬೆಳೆಯುವ ಕಣಗಿಲೆ ಹೂವಲ್ಲ, ಮಂದಾರ ಪುಷ್ಪ. ಅದು ಎಲ್ಲರಿಗೂ ಸುಲಭವಾಗಿ ದೊರೆಯುವುದಿಲ್ಲ’ ಎಂದು ನಿವೃತ್ತ ಮುಖ್ಯ ಸಂಚಾರ ವ್ಯವಸ್ಥಾಪಕ ಶರಣ ಸಾರಂಗಮಠ ಹಂಪಯ್ಯ ಹೇಳಿದರು.</p>.<p>ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಕಲಾಕೂಟ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಯಲ್ಲಪ್ಪ ಕೆಕೆ ಪುರ ಅವರ ಅಭಿನಂದನಾ ಗ್ರಂಥ ‘ಬಿಸಿಲ ಬೆರಗು’ (ಸಂಪಾದಕ– ಜಯಪ್ಪ ಹೊನ್ನಾಳಿ) ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಜೀವನದಲ್ಲಿ ಯಶಸ್ಸು ಪಡೆಯಲು ಸತತವಾದ ಕಠಿಣ ಶ್ರಮ ಹಾಗೂ ತಾಳ್ಮೆ ಅಗತ್ಯ’ ಎಂದರು.</p>.<p>‘ಯಲ್ಲಪ್ಪ ಅವರ ಬದುಕಿನ ದಾರಿ ಸುಗಮವಾಗಿರಲಿಲ್ಲ. ಬಹಳಷ್ಟು ಕಷ್ಟ, ಅವಮಾನ ಎದುರಿಸಿ ಈ ಹಂತಕ್ಕೆ ಬೆಳೆದಿದ್ದಾರೆ. ಸಾಧನೆಯ ಶಿಖರವೇರಿದ್ದಾರೆ. ಹಸಿವಿನ ಬೆಲೆ, ಕಷ್ಟ ಅನುಭವಿಸಿದವರಿಂದ ಮಾತ್ರ ಇಂತಹ ಸಾಹಿತ್ಯ ರಚಿಸಲು ಸಾಧ್ಯ. ಅವರ ಕೃತಿಗಳಲ್ಲಿ ಆಳವಾದ ಬರವಣಿಗೆ ಕಾಣಬಹುದು. ಕೇವಲ ಆತ್ಮ ಸಂತೃಪ್ತಿಗಲ್ಲದೆ, ಸಾಹಿತ್ಯದಿಂದ ಸಮಾಜ ಕಲ್ಯಾಣಕ್ಕೂ ಪ್ರಯತ್ನಿಸಿದ್ದಾರೆ. ಮೂರು ದಶಕಗಳ ವೃತ್ತಿ ಜೊತೆಗೆ ಹಲವು ಕೃತಿಗಳನ್ನು ರಚಿಸಿರುವುದು ಹೆಮ್ಮೆಯ ಸಂಗತಿ’ ಎಂದು ಶ್ಲಾಘಿಸಿದರು.</p>.<p>ಲೇಖಕ ಪ್ರೊ.ಸಿ.ನಾಗಣ್ಣ ಮಾತನಾಡಿ, ‘ಯಲ್ಲಪ್ಪ ಅವರು ವಿವಿಧ ಸಾಹಿತ್ಯ ಪ್ರಾಕಾರಗಳಿಗೆ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ತಾರತಮ್ಯ, ಶೋಷಣೆ ವಿರುದ್ಧ ಎಚ್ಚರಿಸಿದ್ದಾರೆ. ಬದಲಾವಣೆಗೆ ಶ್ರಮಿಸಿದ್ದಾರೆ’ ಎಂದರು.</p>.<p>ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಕವಿಗಳಾದ ಎಲ್.ಹನುಮಂತಯ್ಯ, ಜಯಪ್ಪ ಹೊನ್ನಾಳಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕ ಯಲ್ಲಪ್ಪ ಕೆಕೆ ಪುರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಯಶಸ್ಸು ಎನ್ನುವುದು ಕಂಡ ಕಂಡಲ್ಲಿ ಬೆಳೆಯುವ ಕಣಗಿಲೆ ಹೂವಲ್ಲ, ಮಂದಾರ ಪುಷ್ಪ. ಅದು ಎಲ್ಲರಿಗೂ ಸುಲಭವಾಗಿ ದೊರೆಯುವುದಿಲ್ಲ’ ಎಂದು ನಿವೃತ್ತ ಮುಖ್ಯ ಸಂಚಾರ ವ್ಯವಸ್ಥಾಪಕ ಶರಣ ಸಾರಂಗಮಠ ಹಂಪಯ್ಯ ಹೇಳಿದರು.</p>.<p>ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಕಲಾಕೂಟ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಯಲ್ಲಪ್ಪ ಕೆಕೆ ಪುರ ಅವರ ಅಭಿನಂದನಾ ಗ್ರಂಥ ‘ಬಿಸಿಲ ಬೆರಗು’ (ಸಂಪಾದಕ– ಜಯಪ್ಪ ಹೊನ್ನಾಳಿ) ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಜೀವನದಲ್ಲಿ ಯಶಸ್ಸು ಪಡೆಯಲು ಸತತವಾದ ಕಠಿಣ ಶ್ರಮ ಹಾಗೂ ತಾಳ್ಮೆ ಅಗತ್ಯ’ ಎಂದರು.</p>.<p>‘ಯಲ್ಲಪ್ಪ ಅವರ ಬದುಕಿನ ದಾರಿ ಸುಗಮವಾಗಿರಲಿಲ್ಲ. ಬಹಳಷ್ಟು ಕಷ್ಟ, ಅವಮಾನ ಎದುರಿಸಿ ಈ ಹಂತಕ್ಕೆ ಬೆಳೆದಿದ್ದಾರೆ. ಸಾಧನೆಯ ಶಿಖರವೇರಿದ್ದಾರೆ. ಹಸಿವಿನ ಬೆಲೆ, ಕಷ್ಟ ಅನುಭವಿಸಿದವರಿಂದ ಮಾತ್ರ ಇಂತಹ ಸಾಹಿತ್ಯ ರಚಿಸಲು ಸಾಧ್ಯ. ಅವರ ಕೃತಿಗಳಲ್ಲಿ ಆಳವಾದ ಬರವಣಿಗೆ ಕಾಣಬಹುದು. ಕೇವಲ ಆತ್ಮ ಸಂತೃಪ್ತಿಗಲ್ಲದೆ, ಸಾಹಿತ್ಯದಿಂದ ಸಮಾಜ ಕಲ್ಯಾಣಕ್ಕೂ ಪ್ರಯತ್ನಿಸಿದ್ದಾರೆ. ಮೂರು ದಶಕಗಳ ವೃತ್ತಿ ಜೊತೆಗೆ ಹಲವು ಕೃತಿಗಳನ್ನು ರಚಿಸಿರುವುದು ಹೆಮ್ಮೆಯ ಸಂಗತಿ’ ಎಂದು ಶ್ಲಾಘಿಸಿದರು.</p>.<p>ಲೇಖಕ ಪ್ರೊ.ಸಿ.ನಾಗಣ್ಣ ಮಾತನಾಡಿ, ‘ಯಲ್ಲಪ್ಪ ಅವರು ವಿವಿಧ ಸಾಹಿತ್ಯ ಪ್ರಾಕಾರಗಳಿಗೆ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ತಾರತಮ್ಯ, ಶೋಷಣೆ ವಿರುದ್ಧ ಎಚ್ಚರಿಸಿದ್ದಾರೆ. ಬದಲಾವಣೆಗೆ ಶ್ರಮಿಸಿದ್ದಾರೆ’ ಎಂದರು.</p>.<p>ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಕವಿಗಳಾದ ಎಲ್.ಹನುಮಂತಯ್ಯ, ಜಯಪ್ಪ ಹೊನ್ನಾಳಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕ ಯಲ್ಲಪ್ಪ ಕೆಕೆ ಪುರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>