‘ಪತನಗೊಳ್ಳುತ್ತಿರುವ ಕಲಿಕಾ ರಂಗಭೂಮಿ’
ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ ‘ಕಲಿಕಾ ರಂಗಭೂಮಿಯು ಪತನವಾಗಿದೆ. ಬದ್ಧತೆಯಿಂದ ದುಡಿಯುವವರ ಸಂಖ್ಯೆಯೀಗ ವಿರಳವಾಗಿದೆ. ಹೀಗಾಗಿ ಕನ್ನಡ ರಂಗಭೂಮಿ ಕಟ್ಟುವವರಿಗೆ ಪ್ರೋತ್ಸಾಹ ಬೇಕಿದೆ’ ಎಂದು ಹೇಳಿದರು. ‘ರಂಗಭೂಮಿಗೆ ಪ್ರಾಯೋಜಕತ್ವ ಸಿಕ್ಕಿದ್ದರೂ ಅದು ಜಾತ್ರೆಯಂತಾಗುತ್ತಿದೆ. ರಂಗ ಚಟುವಟಿಕೆಗಳು ಸಾಮಾಜಿಕ ಚಳವಳಿಯ ಪ್ರಮುಖ ಅಭಿವ್ಯಕ್ತಿಯಾಗಿದ್ದು ಬಹುಮಾಧ್ಯಮ ಸಜ್ಜುಗೊಳಿಸಲು ನೆರವಾದ ಅದನ್ನು ಬಲಪಡಿಸಬೇಕಿದೆ’ ಎಂದರು.