<p><strong>ತಲಕಾಡು</strong>: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಅಣೆಕಟ್ಟೆಯಿಂದ 1.5 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಹೋಬಳಿಯ ನದಿ ತೀರದ ಗ್ರಾಮಗಳಿಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.</p>.<p> ಹೆಮ್ಮಿಗೆ ಸೇತುವೆ ಮುಳುಗಡೆ ಸೇರಿದಂತೆ ಪ್ರವಾಹದ ಪರಿಸ್ಥಿತಿ ವೀಕ್ಷಿಸಿದರು. ಮಾಲಂಗಿ, ಕಲಿಯೂರು ಹಾಗೂ ಮುಡುಕು ತೊರೆ, ತಲಕಾಡು ಗ್ರಾಮದ ನದಿ ಪಾತ್ರದ ಕಾವೇರಿ ನಿಸರ್ಗ ಧಾಮ, ಸೇತುವೆ, ಕೃಷಿ ಜಮೀನುಗಳಿಗೆ ನೀರು ನುಗ್ಗು ವುದ ರಿಂದ ಆಗಬಹುದಾದ ಅನಾಹುತದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.</p>.<p>ತಾಲೂಕು ತಂಡಾಧಿಕಾರಿ ಸುರೇಶ್ ಆಚಾರ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅನಂದ್ ಕುಮಾರ್, ಲೋಕೋಪಯೋಗಿ ಎಇಇ ಸತೀಶ್ ಚಂದ್ರ, ಉಪ ತಹಶೀಲ್ದಾರ್ ಈ ಕುಮಾರ್, ತಲಕಾಡು ಪಿಡಿಒ ಮಹೇಶ್, ಹೆಮ್ಮಿಗೆ ಪಿಡಿಒ ಚಿದಾನಂದ್, ಕಾರ್ಯದರ್ಶಿಗಳಾದ ರಾಜಶೇಖರ ಶೆಟ್ಟಿ, ಮಾದಯ್ಯ, ಗ್ರಾಮ ಲೆಕ್ಕಿಗೆ ಸತೀಶ್, ಸಂತೋಷ್ ಭಾಗವಹಿಸಿದ್ದರು.</p>.<p><strong>ಎರಡು ಕಾಳಜಿ ಕೇಂದ್ರ ಸಿದ್ಧ</strong></p><p> ‘ಅಗತ್ಯ ಇರುವ ಕಡೆ ಕಾಳಜಿ ಕೇಂದ್ರಗ ತೆರೆಯುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು. ಸೇತುವೆ ಇನ್ನಿತರ ಮುಳುಗಡೆ ಪ್ರದೇಶಗಳಲ್ಲಿ ಜನರು ನೀರಿಗಿಳಿಯದಂತೆ ಬಿಗಿ ಪೊಲೀಸ್ ಕಾವಲು ವ್ಯವಸ್ಥೆ ಏರ್ಪಡಿಸಬೆಕು. ಜನರು ಮತ್ತು ಜಾನುವಾರುಗಳಿಗೆ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳನ್ನು ಎಚ್ಚರಿಸಿದರು. ಜಿಲ್ಲಾಧಿಕಾರಿ ಆದೇಶದಂತೆ ಪ್ರವಾಹ ತುರ್ತುಸ್ಥಿತಿ ಎದುರಿಸಲು ಮಾಲಂಗಿ ಗ್ರಾಮದ ಸರ್ಕಾರಿ ಶಾಲೆಯ ಎರಡು ಕೊಠಡಿಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿರುವ ತಾಲ್ಲೂಕು ಆಡಳಿತ ಸೌಕರ್ಯ ಒದಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಲಕಾಡು</strong>: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಅಣೆಕಟ್ಟೆಯಿಂದ 1.5 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಹೋಬಳಿಯ ನದಿ ತೀರದ ಗ್ರಾಮಗಳಿಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.</p>.<p> ಹೆಮ್ಮಿಗೆ ಸೇತುವೆ ಮುಳುಗಡೆ ಸೇರಿದಂತೆ ಪ್ರವಾಹದ ಪರಿಸ್ಥಿತಿ ವೀಕ್ಷಿಸಿದರು. ಮಾಲಂಗಿ, ಕಲಿಯೂರು ಹಾಗೂ ಮುಡುಕು ತೊರೆ, ತಲಕಾಡು ಗ್ರಾಮದ ನದಿ ಪಾತ್ರದ ಕಾವೇರಿ ನಿಸರ್ಗ ಧಾಮ, ಸೇತುವೆ, ಕೃಷಿ ಜಮೀನುಗಳಿಗೆ ನೀರು ನುಗ್ಗು ವುದ ರಿಂದ ಆಗಬಹುದಾದ ಅನಾಹುತದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.</p>.<p>ತಾಲೂಕು ತಂಡಾಧಿಕಾರಿ ಸುರೇಶ್ ಆಚಾರ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅನಂದ್ ಕುಮಾರ್, ಲೋಕೋಪಯೋಗಿ ಎಇಇ ಸತೀಶ್ ಚಂದ್ರ, ಉಪ ತಹಶೀಲ್ದಾರ್ ಈ ಕುಮಾರ್, ತಲಕಾಡು ಪಿಡಿಒ ಮಹೇಶ್, ಹೆಮ್ಮಿಗೆ ಪಿಡಿಒ ಚಿದಾನಂದ್, ಕಾರ್ಯದರ್ಶಿಗಳಾದ ರಾಜಶೇಖರ ಶೆಟ್ಟಿ, ಮಾದಯ್ಯ, ಗ್ರಾಮ ಲೆಕ್ಕಿಗೆ ಸತೀಶ್, ಸಂತೋಷ್ ಭಾಗವಹಿಸಿದ್ದರು.</p>.<p><strong>ಎರಡು ಕಾಳಜಿ ಕೇಂದ್ರ ಸಿದ್ಧ</strong></p><p> ‘ಅಗತ್ಯ ಇರುವ ಕಡೆ ಕಾಳಜಿ ಕೇಂದ್ರಗ ತೆರೆಯುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು. ಸೇತುವೆ ಇನ್ನಿತರ ಮುಳುಗಡೆ ಪ್ರದೇಶಗಳಲ್ಲಿ ಜನರು ನೀರಿಗಿಳಿಯದಂತೆ ಬಿಗಿ ಪೊಲೀಸ್ ಕಾವಲು ವ್ಯವಸ್ಥೆ ಏರ್ಪಡಿಸಬೆಕು. ಜನರು ಮತ್ತು ಜಾನುವಾರುಗಳಿಗೆ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳನ್ನು ಎಚ್ಚರಿಸಿದರು. ಜಿಲ್ಲಾಧಿಕಾರಿ ಆದೇಶದಂತೆ ಪ್ರವಾಹ ತುರ್ತುಸ್ಥಿತಿ ಎದುರಿಸಲು ಮಾಲಂಗಿ ಗ್ರಾಮದ ಸರ್ಕಾರಿ ಶಾಲೆಯ ಎರಡು ಕೊಠಡಿಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿರುವ ತಾಲ್ಲೂಕು ಆಡಳಿತ ಸೌಕರ್ಯ ಒದಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>