<p>ಹುಣಸೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸರಬರಾಜಾಗುತ್ತಿರುವ ಕುಡಿಯುವ ಕಾವೇರಿ ನೀರು ಇಲ್ಲಿನ ನಗರಸಭೆ ನೀರು ಸಂಗ್ರಹ ಘಟಕದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿ ಚರಂಡಿ ಸೇರುತ್ತಿದೆ.</p>.<p>ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ವಾರದಲ್ಲಿ ಎರಡು ಮೂರು ದಿನ ಬಿಡುವ ವ್ಯವಸ್ಥೆ ಇದ್ದು, ನಿವಾಸಿಗರು ಪರದಾಡುತ್ತಿದ್ದಾರೆ. ಆದರೆ ಇದೀಗ ಶುದ್ಧ ನೀರು ಸಮರ್ಪಕವಾಗಿ ಸಂಗ್ರಹಿಸುವಲ್ಲಿ ನಗರಸಭೆ ವಿಫಲವಾಗಿದ್ದು, ಚರಂಡಿಗೆ ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.</p>.<p>ನಗರಸಭೆ ಸದಸ್ಯ ವಿವೇಕ್ ಮಾತನಾಡಿ, ‘ನಗರಸಭೆ ವ್ಯಾಪ್ತಿಯ 60 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಹರಸಾಹಸ ಪಡಬೇಕಾಗಿದೆ. ನೀರು ನಿರ್ವಹಣೆ ಎಂಜಿನಿಯರಿಂಗ್ ವಿಭಾಗ ಸಮರ್ಪಕವಾಗಿ ನಿರ್ವಹಣೆ ಮಾಡದೆ, ನೀರು ಸಂಗ್ರಹ ಘಟಕದ ವಾಲ್ಗಳು ಶಿಥಿಲವಾಗಿ 5 ಲಕ್ಷ ಲೀಟರ್ ನೀರು ಸಂಗ್ರಹ ಟ್ಯಾಂಕ್ನಿಂದ ವ್ಯರ್ಥವಾಗಿ ಚರಂಡಿ ಸೇರುವ ಬಗ್ಗೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸದೆ ನಿತ್ಯ ನೀರು ಹರಿದು ಚರಂಡಿ ಸೇರುತಿದೆ’ ಎಂದು ದೂರಿದರು.</p>.<p>ನಗರಸಭೆ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಶರ್ಮಿಳಾ ಮಾತನಾಡಿ, ‘ನೀರು ಸಂಗ್ರಹ ಘಟಕದಲ್ಲಿ 2010ರಲ್ಲಿ ವಾಲ್ ಅಳವಡಿಸಲಾಗಿದೆ. ಘಟಕದಲ್ಲಿರುವ 5 ಲಕ್ಷ ಸಾಮರ್ಥ್ಯದ ಟ್ಯಾಂಕ್ಗೆ ನೀರು ಸೇರಿದಾಗ ಒತ್ತಡಕ್ಕೆ ವಾಲ್ ಒಡೆದು ನೀರು ಸೋರುತ್ತಿದೆ. ಈ ಸಂಬಂಧ ಮೈಸೂರಿನ ವಾಟರ್ ಬೋರ್ಡ್ ವಿಭಾಗಕ್ಕೆ ಈಗಾಗಲೇ ಮಾಹಿತಿ ನೀಡಿದ್ದು, ಮುಂದಿನ ಎರಡು ದಿನದೊಳಗೆ ಪರ್ಯಾಯ ವಾಲ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<p>ಕುಡಿಯುವ ನೀರಿನ ತತ್ವಾರ ಎದುರಿಸುತ್ತಿದ್ದು ಈ ಸಮಯದಲ್ಲೂ ನಗರಸಭೆ ನೀರು ನಿರ್ವಹಣೆ ಸಮರ್ಪಕವಾಗಿ ಮಾಡದೆ ಶುದ್ಧ ಕುಡಿಯುವ ನೀರು ಚರಂಡಿಗೆ ಹರಿದು ಹೋಗುತ್ತಿರುವುದು ನಗರಸಭೆ ಆಡಳಿತಕ್ಕೆ ಕೈಗನ್ನಡಿಯಾಗಿದೆ. ಸುನಿಲ್ ಮಾರುತಿ ಬಡಾವಣೆ ನಿವಾಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸರಬರಾಜಾಗುತ್ತಿರುವ ಕುಡಿಯುವ ಕಾವೇರಿ ನೀರು ಇಲ್ಲಿನ ನಗರಸಭೆ ನೀರು ಸಂಗ್ರಹ ಘಟಕದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿ ಚರಂಡಿ ಸೇರುತ್ತಿದೆ.</p>.<p>ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ವಾರದಲ್ಲಿ ಎರಡು ಮೂರು ದಿನ ಬಿಡುವ ವ್ಯವಸ್ಥೆ ಇದ್ದು, ನಿವಾಸಿಗರು ಪರದಾಡುತ್ತಿದ್ದಾರೆ. ಆದರೆ ಇದೀಗ ಶುದ್ಧ ನೀರು ಸಮರ್ಪಕವಾಗಿ ಸಂಗ್ರಹಿಸುವಲ್ಲಿ ನಗರಸಭೆ ವಿಫಲವಾಗಿದ್ದು, ಚರಂಡಿಗೆ ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.</p>.<p>ನಗರಸಭೆ ಸದಸ್ಯ ವಿವೇಕ್ ಮಾತನಾಡಿ, ‘ನಗರಸಭೆ ವ್ಯಾಪ್ತಿಯ 60 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಹರಸಾಹಸ ಪಡಬೇಕಾಗಿದೆ. ನೀರು ನಿರ್ವಹಣೆ ಎಂಜಿನಿಯರಿಂಗ್ ವಿಭಾಗ ಸಮರ್ಪಕವಾಗಿ ನಿರ್ವಹಣೆ ಮಾಡದೆ, ನೀರು ಸಂಗ್ರಹ ಘಟಕದ ವಾಲ್ಗಳು ಶಿಥಿಲವಾಗಿ 5 ಲಕ್ಷ ಲೀಟರ್ ನೀರು ಸಂಗ್ರಹ ಟ್ಯಾಂಕ್ನಿಂದ ವ್ಯರ್ಥವಾಗಿ ಚರಂಡಿ ಸೇರುವ ಬಗ್ಗೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸದೆ ನಿತ್ಯ ನೀರು ಹರಿದು ಚರಂಡಿ ಸೇರುತಿದೆ’ ಎಂದು ದೂರಿದರು.</p>.<p>ನಗರಸಭೆ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಶರ್ಮಿಳಾ ಮಾತನಾಡಿ, ‘ನೀರು ಸಂಗ್ರಹ ಘಟಕದಲ್ಲಿ 2010ರಲ್ಲಿ ವಾಲ್ ಅಳವಡಿಸಲಾಗಿದೆ. ಘಟಕದಲ್ಲಿರುವ 5 ಲಕ್ಷ ಸಾಮರ್ಥ್ಯದ ಟ್ಯಾಂಕ್ಗೆ ನೀರು ಸೇರಿದಾಗ ಒತ್ತಡಕ್ಕೆ ವಾಲ್ ಒಡೆದು ನೀರು ಸೋರುತ್ತಿದೆ. ಈ ಸಂಬಂಧ ಮೈಸೂರಿನ ವಾಟರ್ ಬೋರ್ಡ್ ವಿಭಾಗಕ್ಕೆ ಈಗಾಗಲೇ ಮಾಹಿತಿ ನೀಡಿದ್ದು, ಮುಂದಿನ ಎರಡು ದಿನದೊಳಗೆ ಪರ್ಯಾಯ ವಾಲ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<p>ಕುಡಿಯುವ ನೀರಿನ ತತ್ವಾರ ಎದುರಿಸುತ್ತಿದ್ದು ಈ ಸಮಯದಲ್ಲೂ ನಗರಸಭೆ ನೀರು ನಿರ್ವಹಣೆ ಸಮರ್ಪಕವಾಗಿ ಮಾಡದೆ ಶುದ್ಧ ಕುಡಿಯುವ ನೀರು ಚರಂಡಿಗೆ ಹರಿದು ಹೋಗುತ್ತಿರುವುದು ನಗರಸಭೆ ಆಡಳಿತಕ್ಕೆ ಕೈಗನ್ನಡಿಯಾಗಿದೆ. ಸುನಿಲ್ ಮಾರುತಿ ಬಡಾವಣೆ ನಿವಾಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>