‘ನಗರದ 43ನೇ ವಾರ್ಡ್ನ ರಸ್ತೆಯ ಇಕ್ಕೆಲಗಳಲ್ಲಿ ಒಳಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು ಮಳೆ ಬಂದಾಗ ಸಾರ್ವಜನಿಕರಿಗೆ ಅನನುಕೂಲವಾಗಲಿದ್ದು ಕೂಡಲೇ ಸರಿಪಡಿಸಬೇಕು’ ಎಂದು ಟಿ.ಎಸ್.ಶ್ರೀವತ್ಸ ಅಧಿಕಾರಿಗಳಿಗೆ ಸೂಚಿಸಿದರು. ಶಾರದಾದೇವಿ ನಗರ ಜನತಾ ನಗರ ಟಿ.ಕೆ.ಲೇಔಟ್ ಸುತ್ತಮುತ್ತ ಪಾದಯಾತ್ರೆ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ‘ಇಲ್ಲಿನ ಪಾರ್ಕ್ಗಳಲ್ಲಿ ರಾತ್ರಿ ಸಮಯ ಪುಂಡರ ಹಾವಳಿ ಹೆಚ್ಚಾಗಿದ್ದು ಪೋಲಿಸರು ಗಸ್ತು ಹೆಚ್ಚಿಸಬೇಕು. ಖಾಲಿ ನಿವೇಶನಗಳಲ್ಲಿ ಕಸ ಹಾಕಬಾರದು. ಕೃಷ್ಣಮೂರ್ತಿ ಬಡಾವಣೆಯಲ್ಲಿರುವ ಮರಗಳ ಅಪಾಯಕಾರಿ ರೆಂಬೆಗಳನ್ನು ಕತ್ತರಿಸಬೇಕು’ ಎಂದು ಹೇಳಿದರು.