<p><strong>ಮೈಸೂರು</strong>: ಮೈಸೂರು ಮತ್ತು ಮಂಡ್ಯದ ಗಡಿಯಲ್ಲಿರುವ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ವಿವೇಕಾನಂದ ನಗರದ ರಾಮಕೃಷ್ಣ ಸೇವಾ ಕೇಂದ್ರದ ಎದುರು ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ‘ವಿಶ್ವಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಶನಿವಾರ ಶಂಕುಸ್ಥಾಪನೆ ಮಾಡಿದರು.</p>.<p>ಸೇವಾ ಕೇಂದ್ರದ ನಾದಾನಂದನಾಥ ಸ್ವಾಮೀಜಿ ಆಶಯದಂತೆ, ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಭವನದಲ್ಲಿ ಕುವೆಂಪು ಚಿಂತನೆ ಪಸರಿಸುವ ಕಾರ್ಯ ನಡೆಯಲಿದೆ. ಸಂಶೋಧಕರಿಗೆ ವಸತಿ ವ್ಯವಸ್ಥೆ, ಗ್ರಂಥಾಲಯ, ಸಭಾಭವನ, ಅತಿಥಿಗಳ ಕೊಠಡಿಗಳನ್ನು ನಿರ್ಮಿಸಲಾಗುವುದು. ಇಲಾಖೆಯು ₹ 1.50 ಅನುದಾನ ಒದಗಿಸಿದೆ. ನಿರ್ಮಿತಿ ಕೇಂದ್ರವು 10 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳಿಸುವ ಗುರಿ ಇದೆ.</p>.<p>ನಾದತರಂಗ ಬಿಡುಗಡೆ: ನಾದಾನಂದನಾಥ ಸ್ವಾಮೀಜಿ ಕುರಿತ ‘ನಾದತರಂಗ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಪ್ರೊ.ಕೆ.ಎಸ್. ಭಗವಾನ್, ‘ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಕೆಲಸ ಮಾಡಿ, ಅದ್ಭುತ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ 20ನೇ ಶತಮಾನ ಕುವೆಂಪು ಯುಗ’ ಎಂದರು.</p>.<p>‘ಮನುಷ್ಯರೆಲ್ಲ ಒಂದು ಎಂದು ಮೊದಲು ಹೇಳಿದ್ದೇ ಭಗವಾನ್ ಬುದ್ಧ. ಆತ ರೈತನ ಮಗ. ನಾವೆಲ್ಲರೂ ಅವರನ್ನು ಅನುಸರಿಸಬೇಕು. ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯವನ್ನು ಮೊದಲು ನೀಡಿದ್ದು ಬುದ್ಧ. ಅವರ ತತ್ವಗಳನ್ನೆ ನಾನೂ ಅಳವಡಿಸಿಕೊಂಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು’ ಎಂದು ಸ್ಮರಿಸಿದರು.</p>.<p>ಮೂರು ದಶಕಗಳ ಕನಸು ನನಸು: ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ‘ಕುವೆಂಪು ಚಿಂತನೆಗಳನ್ನು ಜೀವಂತವಾಗಿಡಲು ನಾದಾನಂದನಾಥ ಸ್ವಾಮೀಜಿಯವರ ಮೂರು ದಶಕಗಳ ಕನಸು ನನಸಾಗುತ್ತಿದೆ. ಭವನಕ್ಕಾಗಿ ಶಂಕರೇಗೌಡರು ಜಾಗವನ್ನು ಉಚಿತವಾಗಿ ನೀಡಿದ್ದಾರೆ. ಜಾತ್ಯತೀತ ಚಿಂತನೆಗಳನ್ನು ಬಿತ್ತುವ ಭವನ ಕಾರ್ಯನಿರ್ವಹಿಸಲಿದೆ’ ಎಂದರು.</p>.<p>ಮಂಡ್ಯದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್ ಮಾತನಾಡಿ, ‘ವೈಚಾರಿಕ ಪ್ರಜ್ಞೆಯ ಕೊರತೆಯಿಂದಾಗಿ ನಾವು ಜೀವನದಲ್ಲಿ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಮೌಢ್ಯದ ಗುಡ್ಡದ ಹಿಂದೆ ಬಚ್ಚಿಟ್ಟುಕೊಳ್ಳಬಾರದು. ಈ ನಿಟ್ಟಿನಲ್ಲಿ, ಪ್ರೊ.ಕೆ.ಎಸ್. ಭಗವಾನ್ ಅವರು ಸಾಮಾಜಿಕ ಪ್ರಜ್ಞೆ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತುತ್ತಿದ್ದಾರೆ’ ಎಂದರು.</p>.<p>ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜವನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು.</p>.<p>ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಶೇಖರ್, ಸರೋಜಮ್ಮ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮೈಮುಲ್ ನಿರ್ದೇಶಕ ಚಲುವರಾಜು, ಸಹಕಾರಿ ಧುರೀಣ ವೈ.ಎನ್.ಶಂಕರೇಗೌಡ, ಮುಖಂಡರಾದ ವಜ್ರೇಗೌಡ, ಮುನಾವರ್ ಪಾಷ, ವೀಣಾ ಶಿವಕುಮಾರ್, ಚನ್ನಕೇಶವ, ಚಲುವರಾಜ್, ಮಹೇಶ್ ಪಾಲ್ಗೊಂಡಿದ್ದರು.</p>.<p>ನಾದಾನಂದನಾಥ ಸ್ವಾಮೀಜಿಯವರ ಯೋಜನೆ ಮೈಸೂರು–ಮಂಡ್ಯದ ಗಡಿಯಲ್ಲಿ ನಿರ್ಮಾಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ</p>.<p><strong>ವೈಚಾರಿಕತೆ ನೆಲೆಗಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಕುವೆಂಪು ಚಿತಾಭಸ್ಮ ಸ್ಮಾರಕ ಭವನದಲ್ಲಿ ಉತ್ಕೃಷ್ಟ ಚಿಂತನೆಯ ಕಾರ್ಯಕ್ರಮಗಳು ನಡೆಯಲಿ. ರಾಜ್ಯದ ಉದ್ದಗಲಕ್ಕೂ ಪಸರಿಸಲಿ </strong></p><p><strong>-ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ</strong> </p>.<p>‘ವಿವೇಕಾನಂದ ಜಯಂತಿ ನಿಲ್ಲಿಸಿದ ಆರ್ಎಸ್ಎಸ್’ ‘ಪಂಚಾಂಗ ಜ್ಯೋತಿಷ ಹಾಗೂ ಮೌಢ್ಯಗಳನ್ನು ನಾವೆಲ್ಲರೂ ತಿರಸ್ಕರಿಸಬೇಕು. ನಾನು ಸ್ವಾಮಿ ವಿವೇಕಾನಂದರ ಬಗ್ಗೆ ನಿಜ ಹೇಳಲು ಶುರು ಮಾಡಿದ ಮೇಲೆ ಆರ್ಎಸ್ಎಸ್ನವರು ವಿವೇಕಾನಂದ ಜಯಂತಿ ಆಚರಿಸುವುದನ್ನು ನಿಲ್ಲಿಸಿದ್ದಾರೆ. ಪುರೋಹಿತರನ್ನು ಒದ್ದೋಡಿಸಿ ಎಂದು ವಿವೇಕಾನಂದ ಹೇಳಿದ್ದಾರೆ. ಅವರು ನಮಗೆ ಆದರ್ಶವಾಗಬೇಕೆ ಹೊರತು ಶಂಕರಾಚಾರ್ಯರಲ್ಲ’ ಎಂದು ಕೆ.ಎಸ್. ಭಗವಾನ್ ಪ್ರತಿಪಾದಿಸಿದರು.</p>.<p>ಕುವೆಂಪು ಚಿಂತನೆ ಅಳವಡಿಸಿಕೊಳ್ಳಬೇಕು: ಎಚ್ಸಿಎಂ ‘ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವುದು ಕುವೆಂಪು ಅವರ ಆಶಯವಾಗಿತ್ತು. ಮನುಜಮತ–ವಿಶ್ವಪಥ ಎಂಬ ಅವರ ಚಿಂತನೆಯನ್ನು ಯುವಸಮೂಹ ತುರ್ತಾಗಿ ಅಳವಡಿಸಿಕೊಳ್ಳಬೇಕು’ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಲಹೆ ನೀಡಿದರು. ‘ಮೇರು ವ್ಯಕ್ತಿತ್ವವುಳ್ಳ ಕುವೆಂಪು ಅವರನ್ನು ಬುದ್ಧ ಬಸವ ಅಂಬೇಡ್ಕರ್ ಸಾಲಿನಲ್ಲಿ ನೋಡಬೇಕು. ಧರ್ಮ ದೇಶ ಜಾತಿ ಹೆಸರಿನಲ್ಲಿ ದೇಶ ಒಡೆಯಲು ಹೊರಟಿರುವ ಈ ಸಂದರ್ಭದಲ್ಲಿ ಕುವೆಂಪು ಅವರ ಚಿಂತನೆ ಎಲ್ಲರಿಗೂ ಅಗತ್ಯ’ ಎಂದು ಪ್ರತಿಪಾದಿಸಿದರು. ‘ಭೌದ್ಧಿಕವಾಗಿ ನಾವು ಎಚ್ಚರವಾಗದಿದ್ದರೆ ಶ್ರೇಣೀಕೃತ ವ್ಯವಸ್ಥೆಯಲ್ಲಿ ಪಾತಾಳಕ್ಕೆ ತಳ್ಳಲಿದ್ದಾರೆ. ಕುವೆಂಪು ಅವರ ವಿಚಾರಧಾರೆಗಳನ್ನು ಜೀವಂತವಾಗಿ ಉಳಿಸಿ ಶೂದ್ರ ಸಮಾಜವನ್ನು ಕತ್ತಲಿನಿಂದ ಬೆಳಕಿಗೆ ಕರೆ ತಂದು ವಿಶ್ವಮಾನವರನ್ನಾಗಿಸುವ ನಿಟ್ಟಿನಲ್ಲಿ ಈ ಭವನ ಪ್ರೇರಣೆಯಾಗಲಿ’ ಎಂದು ಆಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಮೈಸೂರು ಮತ್ತು ಮಂಡ್ಯದ ಗಡಿಯಲ್ಲಿರುವ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ವಿವೇಕಾನಂದ ನಗರದ ರಾಮಕೃಷ್ಣ ಸೇವಾ ಕೇಂದ್ರದ ಎದುರು ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ‘ವಿಶ್ವಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಶನಿವಾರ ಶಂಕುಸ್ಥಾಪನೆ ಮಾಡಿದರು.</p>.<p>ಸೇವಾ ಕೇಂದ್ರದ ನಾದಾನಂದನಾಥ ಸ್ವಾಮೀಜಿ ಆಶಯದಂತೆ, ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಭವನದಲ್ಲಿ ಕುವೆಂಪು ಚಿಂತನೆ ಪಸರಿಸುವ ಕಾರ್ಯ ನಡೆಯಲಿದೆ. ಸಂಶೋಧಕರಿಗೆ ವಸತಿ ವ್ಯವಸ್ಥೆ, ಗ್ರಂಥಾಲಯ, ಸಭಾಭವನ, ಅತಿಥಿಗಳ ಕೊಠಡಿಗಳನ್ನು ನಿರ್ಮಿಸಲಾಗುವುದು. ಇಲಾಖೆಯು ₹ 1.50 ಅನುದಾನ ಒದಗಿಸಿದೆ. ನಿರ್ಮಿತಿ ಕೇಂದ್ರವು 10 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳಿಸುವ ಗುರಿ ಇದೆ.</p>.<p>ನಾದತರಂಗ ಬಿಡುಗಡೆ: ನಾದಾನಂದನಾಥ ಸ್ವಾಮೀಜಿ ಕುರಿತ ‘ನಾದತರಂಗ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಪ್ರೊ.ಕೆ.ಎಸ್. ಭಗವಾನ್, ‘ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಕೆಲಸ ಮಾಡಿ, ಅದ್ಭುತ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ 20ನೇ ಶತಮಾನ ಕುವೆಂಪು ಯುಗ’ ಎಂದರು.</p>.<p>‘ಮನುಷ್ಯರೆಲ್ಲ ಒಂದು ಎಂದು ಮೊದಲು ಹೇಳಿದ್ದೇ ಭಗವಾನ್ ಬುದ್ಧ. ಆತ ರೈತನ ಮಗ. ನಾವೆಲ್ಲರೂ ಅವರನ್ನು ಅನುಸರಿಸಬೇಕು. ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯವನ್ನು ಮೊದಲು ನೀಡಿದ್ದು ಬುದ್ಧ. ಅವರ ತತ್ವಗಳನ್ನೆ ನಾನೂ ಅಳವಡಿಸಿಕೊಂಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು’ ಎಂದು ಸ್ಮರಿಸಿದರು.</p>.<p>ಮೂರು ದಶಕಗಳ ಕನಸು ನನಸು: ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ‘ಕುವೆಂಪು ಚಿಂತನೆಗಳನ್ನು ಜೀವಂತವಾಗಿಡಲು ನಾದಾನಂದನಾಥ ಸ್ವಾಮೀಜಿಯವರ ಮೂರು ದಶಕಗಳ ಕನಸು ನನಸಾಗುತ್ತಿದೆ. ಭವನಕ್ಕಾಗಿ ಶಂಕರೇಗೌಡರು ಜಾಗವನ್ನು ಉಚಿತವಾಗಿ ನೀಡಿದ್ದಾರೆ. ಜಾತ್ಯತೀತ ಚಿಂತನೆಗಳನ್ನು ಬಿತ್ತುವ ಭವನ ಕಾರ್ಯನಿರ್ವಹಿಸಲಿದೆ’ ಎಂದರು.</p>.<p>ಮಂಡ್ಯದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್ ಮಾತನಾಡಿ, ‘ವೈಚಾರಿಕ ಪ್ರಜ್ಞೆಯ ಕೊರತೆಯಿಂದಾಗಿ ನಾವು ಜೀವನದಲ್ಲಿ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಮೌಢ್ಯದ ಗುಡ್ಡದ ಹಿಂದೆ ಬಚ್ಚಿಟ್ಟುಕೊಳ್ಳಬಾರದು. ಈ ನಿಟ್ಟಿನಲ್ಲಿ, ಪ್ರೊ.ಕೆ.ಎಸ್. ಭಗವಾನ್ ಅವರು ಸಾಮಾಜಿಕ ಪ್ರಜ್ಞೆ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತುತ್ತಿದ್ದಾರೆ’ ಎಂದರು.</p>.<p>ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜವನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು.</p>.<p>ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಶೇಖರ್, ಸರೋಜಮ್ಮ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮೈಮುಲ್ ನಿರ್ದೇಶಕ ಚಲುವರಾಜು, ಸಹಕಾರಿ ಧುರೀಣ ವೈ.ಎನ್.ಶಂಕರೇಗೌಡ, ಮುಖಂಡರಾದ ವಜ್ರೇಗೌಡ, ಮುನಾವರ್ ಪಾಷ, ವೀಣಾ ಶಿವಕುಮಾರ್, ಚನ್ನಕೇಶವ, ಚಲುವರಾಜ್, ಮಹೇಶ್ ಪಾಲ್ಗೊಂಡಿದ್ದರು.</p>.<p>ನಾದಾನಂದನಾಥ ಸ್ವಾಮೀಜಿಯವರ ಯೋಜನೆ ಮೈಸೂರು–ಮಂಡ್ಯದ ಗಡಿಯಲ್ಲಿ ನಿರ್ಮಾಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ</p>.<p><strong>ವೈಚಾರಿಕತೆ ನೆಲೆಗಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಕುವೆಂಪು ಚಿತಾಭಸ್ಮ ಸ್ಮಾರಕ ಭವನದಲ್ಲಿ ಉತ್ಕೃಷ್ಟ ಚಿಂತನೆಯ ಕಾರ್ಯಕ್ರಮಗಳು ನಡೆಯಲಿ. ರಾಜ್ಯದ ಉದ್ದಗಲಕ್ಕೂ ಪಸರಿಸಲಿ </strong></p><p><strong>-ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ</strong> </p>.<p>‘ವಿವೇಕಾನಂದ ಜಯಂತಿ ನಿಲ್ಲಿಸಿದ ಆರ್ಎಸ್ಎಸ್’ ‘ಪಂಚಾಂಗ ಜ್ಯೋತಿಷ ಹಾಗೂ ಮೌಢ್ಯಗಳನ್ನು ನಾವೆಲ್ಲರೂ ತಿರಸ್ಕರಿಸಬೇಕು. ನಾನು ಸ್ವಾಮಿ ವಿವೇಕಾನಂದರ ಬಗ್ಗೆ ನಿಜ ಹೇಳಲು ಶುರು ಮಾಡಿದ ಮೇಲೆ ಆರ್ಎಸ್ಎಸ್ನವರು ವಿವೇಕಾನಂದ ಜಯಂತಿ ಆಚರಿಸುವುದನ್ನು ನಿಲ್ಲಿಸಿದ್ದಾರೆ. ಪುರೋಹಿತರನ್ನು ಒದ್ದೋಡಿಸಿ ಎಂದು ವಿವೇಕಾನಂದ ಹೇಳಿದ್ದಾರೆ. ಅವರು ನಮಗೆ ಆದರ್ಶವಾಗಬೇಕೆ ಹೊರತು ಶಂಕರಾಚಾರ್ಯರಲ್ಲ’ ಎಂದು ಕೆ.ಎಸ್. ಭಗವಾನ್ ಪ್ರತಿಪಾದಿಸಿದರು.</p>.<p>ಕುವೆಂಪು ಚಿಂತನೆ ಅಳವಡಿಸಿಕೊಳ್ಳಬೇಕು: ಎಚ್ಸಿಎಂ ‘ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವುದು ಕುವೆಂಪು ಅವರ ಆಶಯವಾಗಿತ್ತು. ಮನುಜಮತ–ವಿಶ್ವಪಥ ಎಂಬ ಅವರ ಚಿಂತನೆಯನ್ನು ಯುವಸಮೂಹ ತುರ್ತಾಗಿ ಅಳವಡಿಸಿಕೊಳ್ಳಬೇಕು’ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಲಹೆ ನೀಡಿದರು. ‘ಮೇರು ವ್ಯಕ್ತಿತ್ವವುಳ್ಳ ಕುವೆಂಪು ಅವರನ್ನು ಬುದ್ಧ ಬಸವ ಅಂಬೇಡ್ಕರ್ ಸಾಲಿನಲ್ಲಿ ನೋಡಬೇಕು. ಧರ್ಮ ದೇಶ ಜಾತಿ ಹೆಸರಿನಲ್ಲಿ ದೇಶ ಒಡೆಯಲು ಹೊರಟಿರುವ ಈ ಸಂದರ್ಭದಲ್ಲಿ ಕುವೆಂಪು ಅವರ ಚಿಂತನೆ ಎಲ್ಲರಿಗೂ ಅಗತ್ಯ’ ಎಂದು ಪ್ರತಿಪಾದಿಸಿದರು. ‘ಭೌದ್ಧಿಕವಾಗಿ ನಾವು ಎಚ್ಚರವಾಗದಿದ್ದರೆ ಶ್ರೇಣೀಕೃತ ವ್ಯವಸ್ಥೆಯಲ್ಲಿ ಪಾತಾಳಕ್ಕೆ ತಳ್ಳಲಿದ್ದಾರೆ. ಕುವೆಂಪು ಅವರ ವಿಚಾರಧಾರೆಗಳನ್ನು ಜೀವಂತವಾಗಿ ಉಳಿಸಿ ಶೂದ್ರ ಸಮಾಜವನ್ನು ಕತ್ತಲಿನಿಂದ ಬೆಳಕಿಗೆ ಕರೆ ತಂದು ವಿಶ್ವಮಾನವರನ್ನಾಗಿಸುವ ನಿಟ್ಟಿನಲ್ಲಿ ಈ ಭವನ ಪ್ರೇರಣೆಯಾಗಲಿ’ ಎಂದು ಆಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>