ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಪಾರ್ಕ್‌ಗೆ ದುಬಾರಿ ವೆಚ್ಚ; ನಿರ್ವಹಣೆ ನಗಣ್ಯ

Published : 15 ಜುಲೈ 2024, 8:01 IST
Last Updated : 15 ಜುಲೈ 2024, 8:01 IST
ಫಾಲೋ ಮಾಡಿ
Comments
ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಕಸ ಕಲ್ಲುಗಳ ರಾಶಿ ಹಾಕಿರುವುದು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಕಸ ಕಲ್ಲುಗಳ ರಾಶಿ ಹಾಕಿರುವುದು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಕುವೆಂಪುನಗರದ 4ನೇ ಮುಖ್ಯ ರಸ್ತೆಯಲ್ಲಿ (ವಾರ್ಡ್ 47) ಉದ್ಯಾನದಲ್ಲಿ ಅಭಿವೃದ್ಧಿಪಡಿಸಲು ಸಲಕರಣೆಗಳನ್ನು ತಂದಿಡಲಾಗಿದೆ –ಪ್ರಜಾವಾಣಿ ಚಿತ್ರ
ಮೈಸೂರಿನ ಕುವೆಂಪುನಗರದ 4ನೇ ಮುಖ್ಯ ರಸ್ತೆಯಲ್ಲಿ (ವಾರ್ಡ್ 47) ಉದ್ಯಾನದಲ್ಲಿ ಅಭಿವೃದ್ಧಿಪಡಿಸಲು ಸಲಕರಣೆಗಳನ್ನು ತಂದಿಡಲಾಗಿದೆ –ಪ್ರಜಾವಾಣಿ ಚಿತ್ರ
ನಗರ ವ್ಯಾಪ್ತಿಯಲ್ಲಿ ಅಧಿಕೃತವಾಗಿ 35 ಉದ್ಯಾನಗಳಿದ್ದು ಖಾಸಗಿ ಬಡಾವಣೆಗಳ ಉದ್ಯಾನ ನಗರಸಭೆಗೆ ಹಸ್ತಾಂತರವಾಗಿಲ್ಲ. ನಿರ್ವಹಣೆಗೆ ಆಗಸ್ಟ್‌ನಲ್ಲಿ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಅನುದಾನ ಕಾಯ್ದಿರಿಸಲಾಗುವುದು.
ಮಾನಸಾ ಆಯುಕ್ತೆ ಹುಣಸೂರು ನಗರಸಭೆ
ಕೆ.ಆರ್‌.ನಗರ ಪಾರ್ಕ್ ಅಭಿವೃದ್ಧಿಗೆ ಪುರಸಭೆಯಲ್ಲಿ ಅನುದಾನ ಇದೆ. ಒಂದು ಹಂತದ ಕಾಮಗಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಉದ್ಯಾನ ಅಭಿವೃದ್ಧಿಗೊಳಿಸಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಜಯಣ್ಣ ಪುರಸಭೆ ಮುಖ್ಯಾಧಿಕಾರಿ ಕೆ.ಆರ್.ನಗರ
ಅಭಿವೃದ್ಧಿ ಕಾಣದ ಉದ್ಯಾನ
ಕೆ.ಆರ್.ನಗರದ ವಿದ್ಯಾನಗರ ಬಡಾವಣೆಯಲ್ಲಿನ ಉದ್ಯಾನದ ಸುತ್ತ ಈಚೆಗಷ್ಟೇ ಗ್ರಿಲ್ ಉದ್ಯಾನದ ಒಳಗೆ ಕುಳಿತುಕೊಳ್ಳಲು ಬೆಂಚ್ ಹಾಕಲಾಗಿದೆ. ಆದರೆ ಒಳಗೆ ಮಣ್ಣು ಹಾಕಿ ಅಭಿವೃದ್ಧಿಗೊಳಿಸಿಲ್ಲ. ಒಂದು ಕಡೆ ಎತ್ತರ ಮತ್ತೊಂದು ಕಡೆ ಇಳಿಜಾರು ಇದೆ. ಅಲ್ಲದೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಹುಲ್ಲು ಕಸಕಡ್ಡಿ ಬೆಳೆದು ನಿಂತಿದೆ. ಇದರಿಂದ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗಿದೆ. ಕೂಡಲೇ ಅಭಿವೃದ್ಧಿ ಪಡಿಸಬೇಕು. ಪಿ.ಮಹಾದೇವ ಕೆ.ಆರ್.ನಗರ ಬೆಳೆದ ಪೊದೆ ಹುಣಸೂರು ಹೌಸಿಂಗ್ ಬೋರ್ಡ್ ಕಾಲೊನಿ ಉದ್ಯಾನವನ್ನು ರೋಟರಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಇತ್ತೀಚೆಗೆ ಸಂಸ್ಥೆಯಿಂದ ನಗರಸಭೆ ಹಿಂಪಡೆದಿದ್ದು ಉದ್ಯಾನದೊಳಗಿನ ಸೌಂದರ್ಯಕ್ಕೆ ಹಾಕಿದ್ದ ಗಿಡಗಳು ಪೊದೆಯಾಗಿವೆ. ಉದ್ಯಾನದಲ್ಲಿನ ಸಸಿಗಳಿಗೆ ಆರಂಭದಲ್ಲಿ ಮಂಜುನಾಥ ಆಟೊರಿಕ್ಷಾ ನಿಲ್ದಾಣದ ಚಾಲಕರು ನೀರು ಹಾಕಿ ಬೆಳೆಸಿ ಪೋಷಿಸಿದ್ದೇವೆ. ಶ್ರೀಕುಮಾರ್ ಆಟೊ ಚಾಲಕ ಹುಣಸೂರು ನಿರ್ವಹಣೆಗೆ ಚಿಂತನೆ ತಿ.ನರಸೀಪುರ ಪಟ್ಟಣದ ನದಿ ದಂಡೆಯಲ್ಲಿರುವ ದುಃಸ್ಥಿತಿಯನ್ನು ಕಂಡು‌ ನಮ್ಮ‌ ಬೆಳಕು‌ ಸೇವಾ ಟ್ರಸ್ಟ್ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿರ್ವಹಣೆಗೆ ಅವಕಾಶ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ‌ ಮಾಡಿದ್ದೆವು. ಕಳೆದ ಡಿಸೆಂಬರ್‌ನಲ್ಲಿ ತಾಲ್ಲೂಕು ಆಡಳಿತ ನಮಗೆ ಅನುಮತಿ‌ ನೀಡಿದೆ. ಈಗ ಒಂದಷ್ಟು ನಿರ್ವಹಣೆ ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ ಉದ್ಯಾನ ನಿರ್ವಹಣೆ ಆಗುತ್ತದೆ. ಉಳಿದಂತೆ ಕೆಳ ಭಾಗದಲ್ಲಿರುವ ಉದ್ಯಾನ ನಿರ್ವಹಣೆಗೆ ಚಿಂತನೆ ಮಾಡಿದ್ದೇವೆ. ಅರವಿಂದ್ ಬೆಳಕು ಸೇವಾ ಸಂಸ್ಥೆ ತಿ.ನರಸೀಪುರ ಕೊಳಚೆ ಪ್ರದೇಶಗಳಾಗಿವೆ ಎಚ್‌.ಡಿ.ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನಗಳು ನಿರ್ವಹಣೆ ಇಲ್ಲದೆ ಕೊಳಚೆ ಪ್ರದೇಶಗಳಾಗಿವೆ. ಇವುಗಳಿಂದಾಗಿ ಸೊಳ್ಳೆ ಹಾಗೂ ಹಾವು ಚೇಳುಗಳು ಮನೆಗಳಿಗೆ ಬರುತ್ತಿವೆ. ರವಿಸುಬ್ರಹ್ಮಣ್ಯ ಎಚ್.ಡಿ.ಕೋಟೆ
ಉದ್ಯಾನದ ನಿರ್ವಹಣೆಗೆ ಅನುದಾನವಿಲ್ಲ!
ಹುಣಸೂರು: ನಗರ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿದ್ದು ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನಗಳ ನಿರ್ವಹಣೆಗೆ ಕೊರತೆ ಎದುರಾಗಿದೆ. ನಗರ ವ್ಯಾಪ್ತಿಯಲ್ಲಿ 35 ಉದ್ಯಾನಗಳಿದ್ದು ಮಕ್ಕಳ ಆಟಿಕೆಗಳ ಅಳವಡಿಕೆ ನಡಿಗೆ ಪಥ ನಿರ್ಮಿಸಿ ಅಲ್ಲಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ತೆರಿಗೆ ಬಳಸಿ ಉದ್ಯಾನ ನಿರ್ಮಿಸಿರುವ ನಗರಸಭೆ ನಿರ್ವಹಣೆಗೆ ಅನುದಾನ ಕಾದಿಡುವಲ್ಲಿ ಹಲವು ಸಮಸ್ಯೆ ಎದುರಿಸುತ್ತಿದೆ. ನಗರದ ಮಧ್ಯ ಭಾಗದ ಮುನೇಶ್ವರ ಕಾವಲ್ ಮೈದಾನ 4 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದು ಮೈದಾನದ ಸುತ್ತಲು ನಡಿಗೆ ನಿರ್ಮಿಸಿ ಸುತ್ತಲು ಬೆಂಗಳೂರಿನ ಲಾಲ್ ಬಾಗ್‌ನಿಂದ ವಿವಿಧ ಪ್ರಭೇದಗಳ ಸಸಿಗಳು ನೆಟ್ಟು ಬೆಳೆಸಿ ಅದರ ನಡುವೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಸ್ತೆಬದಿ ವ್ಯಾಪಾರಿಗಳು ದಾಂಗುಡಿ ಇಟ್ಟಿರುವುದರಿಂದ ವಾಯುವಿಹಾರಿಗಳಿಗೆ ತೊಂದರೆ ಉಂಟಾಗಿದೆ. ‘ನಗರಸಭೆ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕೆಲಸ ಮಾಡಬೇಕು. ಪೊದೆ ಬೆಳೆದಿದ್ದು ಸೊಳ್ಳೆ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ತಿಂಡಿ ಪೊಟ್ಟಣ ಅಲ್ಲಲ್ಲಿ ಎಸೆದು ದುರ್ವಾಸನೆ ಬೀರುತ್ತಿದೆ’ ಎನ್ನುವರು ಹೌಸಿಂಗ್ ಬೋರ್ಡ್ ಉದ್ಯಾನಕ್ಕೆ ಬರುವ ನಿವಾಸಿ ದಿನೇಶ್.
ಖಾಸಗಿ ಸಂಸ್ಥೆಯಿಂದ ಪಾರ್ಕ್ ನಿರ್ವಹಣೆ
ತಿ.ನರಸೀಪುರದ ತ್ರಿವೇಣಿ ಸಂಗಮದ ಕಪಿಲಾ ದಂಡೆಯಲ್ಲಿರುವ ಉದ್ಯಾನ ಕಳೆದ ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದೇ ಹಾಳಾಗಿತ್ತು. ಬೆಳಕು ಸೇವಾ ಫೌಂಡೇಷನ್‌ ಸರ್ಕಾರೇತರ ಸಂಸ್ಥೆ ಇದರ ನಿರ್ವಹಣೆಯನ್ನು ಉಚಿತವಾಗಿ ಮಾಡಿಕೊಡಲು ತಾಲ್ಲೂಕು ಆಡಳಿತದಿಂದ ಅನುಮತಿ‌ ಪಡೆದು ಮೊದಲ‌ ಹಂತದ ಉದ್ಯಾನವನ್ನು ನಿರ್ವಹಣೆ ಮಾಡುತ್ತಿದೆ. ಈ ಉದ್ಯಾನದ ಕೆಳಗಿನ‌ ಎರಡು ನಡಿಗೆ ಪಥಗಳನ್ನು ಸೂಕ್ತ ನಿರ್ವಹಣೆ ಮಾಡಬೇಕು. ಬೆಂಚು ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು.
12ರಲ್ಲಿ ನಾಲ್ಕು ಮಾತ್ರ ನಿರ್ವಹಣೆ
ಎಚ್.ಡಿ.ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ 12 ಉದ್ಯಾನಗಳಿದ್ದು ಅವುಗಳಲ್ಲಿ ನಾಲ್ಕನ್ನು ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿರುವ ಪ್ರಮುಖ ಉದ್ಯಾನಗಳ ನಿರ್ವಹಣೆ ಚೆನ್ನಾಗಿದ್ದು ಇತರೆ ಉದ್ಯಾನಗಳ ನಿರ್ವಹಣೆ ಸರಿ ಇಲ್ಲ. ಗಿಡಗಳು ಬೆಳೆದಿದ್ದು ಮರದ ಕೊಂಬೆಗಳು ಬಿದ್ದಿವೆ. ಜನರು ಇಲ್ಲಿಗೆ ತಂದು ಕಸ ಸುರಿಯುತ್ತಿದ್ದು ಸ್ವಚ್ಛಗೊಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಂಡಿದ್ದು ಅಕ್ಕಪಕ್ಕದ ಮನೆಗಳಿಗೆ ನುಗ್ಗಿವೆ. ಸಾರ್ವಜನಿಕರು ಸಂಚರಿಸಲು ತೀವ್ರ ಸಮಸ್ಯೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT