‘ಶಿಕ್ಷಕರಿಗೆ ಹೆಚ್ಚು ಒತ್ತಡ’
‘ಲೋಕಸಭಾ ಚುನಾವಣೆಯಲ್ಲಿ ಶಿಕ್ಷಕರು ಕೆಲಸ ಮಾಡಿದ್ದಾರೆ. ಈಗಷ್ಟೇ ಶಾಲೆಗಳು ಆರಂಭವಾಗಿವೆ. ಜೊತೆಯಲ್ಲಿಯೇ 3ರಂದು ಪರಿಷತ್ ಚುನಾವಣೆ ನಡೆಸಲಾಗುತ್ತಿದೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶವಿದೆ. ಶಿಕ್ಷಕರಿಗೆ ಒತ್ತಡ ಉಂಟಾಗಿದೆ’ ಎಂದು ಲಕ್ಷ್ಮಣ ಕಳವಳ ವ್ಯಕ್ತಪಡಿಸಿದರು. ‘ಪರಿಷತ್ ಚುನಾವಣೆ ಮತದಾನ ಕಾರ್ಯ ಮುಗಿಸಿ ಲೋಕಸಭಾ ಫಲಿತಾಂಶದ ಕೆಲಸದಲ್ಲಿ ಪಾಲ್ಗೊಳ್ಳಬೇಕಿದೆ. ಪರಿಷತ್ ಸದಸ್ಯರ ಜೂನ್ 21ರವರೆಗೂ ಇತ್ತು. ಲೋಕಸಭಾ ಚುನಾವಣೆ ಫಲಿತಾಂಶ ಮುಗಿದ ನಂತರವೇ ಚುನಾವಣೆ ನಡೆಸಬಹುದಿತ್ತು. ಶಿಕ್ಷಕರಿಗೆ ಹೆಚ್ಚು ಒತ್ತಡ ಉಂಟಾಗಿದೆ’ ಎಂದರು.