‘ದಾಖಲೆ ಕೊಟ್ಟರೆ ಕಣದಿಂದ ಹಿಂದೆ ಸರಿಯುವರೇ?’
ಬಿಎಸ್ಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆರ್.ಮಹೇಶ್ ಮಾತನಾಡಿ ‘ನಾನು ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವುದರಿಂದ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಅರಿವಿದೆ’ ಎಂದರು. ‘ಪ್ರಮುಖ ಕೆಲಸ ಮಾಡುವಲ್ಲಿ ಈವರೆಗಿನ ಆಯ್ಕೆಯಾದ ಪ್ರತಿನಿಧಿಗಳು ಸೋತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಸಂಖ್ಯೆ ಕಡಿಮೆ ಇದೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಗುರುತರ ಬದಲಾವಣೆಗಾಗಿ ಕ್ಷೇತ್ರದಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಹೀಗಾಗಿ ಮತದಾರರು ನನ್ನನ್ನು ಬೆಂಬಲಿಸಬೇಕು’ ಎಂದು ಕೋರಿದರು. ‘ಪ್ರಮುಖ ರಾಜಕೀಯ ಪಕ್ಷದವರು ಒಡ್ಡುತ್ತಿರುವ ಆಮಿಷ ಪಾರ್ಟಿ ಆಯೋಜನೆ ಬಗ್ಗೆ ಮಾಹಿತಿ ಇದೆ. ಇನ್ನೆರಡು ದಿನಗಳಲ್ಲಿ ಇದು ಜಾಸ್ತಿಯೇ ನಡೆಯಲಿದೆ. ದಾಖಲೆ ಕೊಟ್ಟರೆ ಅವರು ಕಣದಿಂದ ಹಿಂದೆ ಸರಿಯುತ್ತಾರೆಯೇ?’ ಎಂದು ಸವಾಲು ಹಾಕಿದರು.