‘ಕನ್ನಡ ಬರಬೇಕೆಂಬ ಕಾನೂನಿದೆಯಾ ಎಂದು ಕೇಳಿದರೆ ಕಷ್ಟ’
‘ಶಿಕ್ಷಣ ಸಚಿವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಅವರಿಗೆ ಕನ್ನಡ ಬರುವುದಿಲ್ಲವೆಂದು ನಾವೇನಾದರೂ ಹೇಳಿದರೆ ಸಚಿವರಿಗೆ ಕನ್ನಡ ಬರಬೇಕೆಂಬ ಕಾನೂನಿದೆಯಾ ಎಂದು ಸಿದ್ದರಾಮಯ್ಯ ಅವರು ಕೇಳಿದರೆ ಕಷ್ಟ’ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು. ‘ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ. ಪಕ್ಷದ ವರಿಷ್ಠರೇ ನಿರ್ಧರಿಸಿದ್ದರು. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲಿದ್ದೇವೆ. ಯದುವೀರ್ ಸರಳತೆಯನ್ನು ಜನರು ಗಮನಿಸಿದ್ದಾರೆ’ ಎಂದರು. ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಗೈರು ಹಾಜರಿ ಎದ್ದು ಕಂಡಿತು.