‘ಪಾರ್ವತಿ ಅವರ ಪ್ರಕರಣವೂ ಅದೇ ರೀತಿಯದ್ದಾಗಿದ್ದು, ಇಡೀ ಜಮೀನನ್ನೇ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬರಬಹುದು. ಅದರಿಂದ ಇನ್ನಷ್ಟು ಜನ ನ್ಯಾಯಾಲಯದ ಮೆಟ್ಟಿಲು ಏರಬಹುದು ಎಂಬ ಕಾರಣಕ್ಕೆ ಅಧಿಕಾರಿಗಳ ತಂಡವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬದಲಿ ನಿವೇಶನಕ್ಕೆ ಒಪ್ಪಿಸಿತು’ ಎಂದು ಅಧಿಕಾರಿ ಸಮಜಾಯಿಷಿ ನೀಡಿದ್ದಾರೆ.