<p><strong>ಮೈಸೂರು</strong>: 50:50 ನಿವೇಶನಗಳ ಹಂಚಿಕೆಯಲ್ಲಷ್ಟೇ ಅಲ್ಲದೆ, ಮುಡಾ ತಾನೇ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲೂ ನಿಯಮ ಉಲ್ಲಂಘಿಸಿದ್ದು, ಖಾಸಗಿ ಬಡಾವಣೆಗಳ ಮಾಲೀಕರಿಗೂ ‘ಅನುಕೂಲ’ ಮಾಡಿಕೊಟ್ಟಿರುವ ಸಂಗತಿಯನ್ನು ಟಿ.ವಿ. ಮುರಳಿ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯು ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಬಯಲಿಗೆ ಎಳೆದಿದೆ.</p>.<p>ಎಸ್ಬಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಮೈಸೂರಿನ ಬೋಗಾದಿಯಲ್ಲಿ ನಿರ್ಮಿಸಿರುವ ಬಡಾವಣೆಗೆ ಸಂಬಂಧಿಸಿದ ನಕ್ಷೆಗಳನ್ನು ನಾಲ್ಕು ಬಾರಿ ಪರಿಷ್ಕರಿಸಿ, ಉದ್ಯಾನ, ರಸ್ತೆಗಳ ಉಲ್ಲೇಖ ಇಲ್ಲದಿದ್ದರೂ ಅನುಮೋದನೆ ನೀಡಿ ನಿವೇಶನಗಳ ಹೆಚ್ಚಳಕ್ಕೆ ಸಹಕರಿಸಿದ ಸಂಗತಿಯನ್ನು ಸಮಿತಿಯು ಬಹಿರಂಗಪಡಿಸಿದೆ. ಈ ಸಂಘವು ಮುಡಾಕ್ಕೆ ₹ 3.52 ಕೋಟಿಯಷ್ಟು ಶುಲ್ಕ ಬಾಕಿ ಉಳಿಸಿದ್ದನ್ನು ಉಲ್ಲೇಖಿಸಿದೆ.</p>.<p>ಬೋಗಾದಿ ಗ್ರಾಮದಲ್ಲಿ ಸಂಘ ನಿರ್ಮಿಸಿರುವ ಬಡಾವಣೆಗಾಗಿ ಸರ್ಕಾರ 1990ರಲ್ಲಿ ಒಟ್ಟು 135 ಎಕರೆ 8 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಟ್ಟಿತ್ತು. ನಂತರ, ಸಂಘವು ಆ ಜಮೀನಿನಲ್ಲಿ ಬಡಾವಣೆ ವಿನ್ಯಾಸಗೊಳಿಸಿದ್ದು, 1992ರಲ್ಲಿ ಮೊದಲ, 1994ರಲ್ಲಿ ಎರಡನೇ ಹಾಗೂ 1998ರಲ್ಲಿ ಮೂರನೇ ಬಾರಿಗೆ ವಿನ್ಯಾಸ ನಕ್ಷೆ ಸಲ್ಲಿಸಿತ್ತು. 1,378 ನಿವೇಶನಗಳುಳ್ಳ ವಿನ್ಯಾಸಕ್ಕೆ ಮುಡಾ ಅನುಮೋದನೆ ನೀಡಿತ್ತು.</p>.<p>2003ರಲ್ಲಿ ಸಂಘವು 135 ಎಕರೆ ಜೊತೆಗೆ ಇನ್ನೂ 6 ಎಕರೆ ಹೆಚ್ಚುವರಿ ಭೂಮಿಯನ್ನು ಬಡಾವಣೆಗೆ ಸೇರಿಸಿಕೊಂಡು ಪರಿಷ್ಕೃತ ನಕ್ಷೆಯನ್ನು ಮುಡಾಕ್ಕೆ ಸಲ್ಲಿಸಿತ್ತು. ಆದರೆ ಹೆಚ್ಚುವರಿ ಜಮೀನಿನ ಮಾಲೀಕತ್ವದ ದಾಖಲೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ. ಆ ನಕ್ಷೆ ಪ್ರಕಾರ ನಿವೇಶನಗಳ ಸಂಖ್ಯೆ 1,378ರಿಂದ 1,500ಕ್ಕೆ ಏರಿದ್ದು, ಒಟ್ಟು 141 ಎಕರೆ ಜಮೀನಿನಲ್ಲಿ ಉದ್ಯಾನಕ್ಕೆ, ರಸ್ತೆಗೆ ಎಷ್ಟು ಜಾಗ ಬಿಡಲಾಗುವುದು ಎಂಬ ಮಾಹಿತಿಯನ್ನೇ ನೀಡದಿದ್ದರೂ ಮುಡಾ ಅನುಮತಿ ನೀಡಿತ್ತು.</p>.<p>ಉದ್ಯಾನ ಹಾಗೂ ಸಿ.ಎ. ನಿವೇಶನಗಳ ಜಾಗವನ್ನು ಪದೇ ಪದೇ ಪರಿಷ್ಕರಿಸಿದ್ದು, ಉದ್ಯಾನದ ಒಟ್ಟು ಜಾಗವನ್ನು ಶೇ 15ರಿಂದ 13ಕ್ಕೆ ಕಡಿತಗೊಳಿಸಲಾಗಿದೆ. ಈ ಎಲ್ಲವನ್ನೂ ಅಧಿಕಾರಿಗಳು ಸಕ್ರಮಗೊಳಿಸಿದ್ದು, ಅವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬಹುದು ಎಂದು ಸಮಿತಿ ಹೇಳಿದೆ.</p>.<p>ಬಡಾವಣೆಗೆ ಅನುಮೋದನೆ ನೀಡುವ ಪೂರ್ವದಲ್ಲಿ ಎಸ್ಬಿಎಂ ನೌಕರರ ಸಂಘವು ಮುಡಾಕ್ಕೆ ಅಭಿವೃದ್ಧಿ ಶುಲ್ಕವಾಗಿ ₹ 10 ಲಕ್ಷ, ಕೊಳೆಗೇರಿ ಅಭಿವೃದ್ಧಿ ಶುಲ್ಕವಾಗಿ ₹ 6.83 ಲಕ್ಷ, ಒಳಚರಂಡಿ ಲೇನ್ ವೆಚ್ಚ ₹ 13.88 ಲಕ್ಷ, ಮೇಲ್ವಿಚಾರಣೆ ಶುಲ್ಕ ₹ 2.88 ಲಕ್ಷ ಹಾಗೂ ಬಡಾವಣೆಗೆ ನೀರು ಪೂರೈಕೆ ಹಾಗೂ ಒಳಚರಂಡಿ ವೆಚ್ಚವಾಗಿ ₹ 3.19 ಕೋಟಿ ಸೇರಿ ಒಟ್ಟು ₹ 3.52 ಕೋಟಿ ಪಾವತಿಸಬೇಕಿತ್ತು. ಅದ್ಯಾವುದನ್ನು ಕಟ್ಟದಿದ್ದರೂ ಬಡಾವಣೆ ವಿನ್ಯಾಸಕ್ಕೆ ಅನುಮೋದನೆ ನೀಡಲಾಗಿದೆ. ಅದರಿಂದ ಮುಡಾಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದೆ.</p>.<p><strong>ನಿಯಮ ಮೀರಿ ಭೂಮಿ ಮಂಜೂರು:</strong> ಜೆಎಸ್ಎಸ್ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮುಡಾ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬದಲಿ ಜಮೀನು ನೀಡಿರುವುದಾಗಿ ಸಮಿತಿ ಹೇಳಿದೆ.</p>.<p>ಕುಪ್ಪಲೂರು ಗ್ರಾಮದ ಸರ್ವೆ ಸಂಖ್ಯೆ 39/1 ರಲ್ಲಿ ಸಂಘದ ಒಟ್ಟು 5 ಎಕರೆ 8 ಗುಂಟೆ ಜಮೀನನ್ನು ಪ್ರಾಧಿಕಾರವು ವರ್ತುಲ ರಸ್ತೆ ನಿರ್ಮಾಣಕ್ಕಾಗಿ ವಶಕ್ಕೆ ಪಡೆದಿತ್ತು. ಆ ಜಮೀನಿಗೆ ಹಣದ ರೂಪದ ಪರಿಹಾರಕ್ಕೆ ಬದಲಾಗಿ ಪಕ್ಕದಲ್ಲೇ ಅಷ್ಟೇ ವಿಸ್ತೀರ್ಣದ ಜಮೀನನ್ನು ಬಿಟ್ಟುಕೊಡುವಂತೆ ಸಂಘವು 2002ರಲ್ಲಿ ಮುಡಾಕ್ಕೆ ಮನವಿ ಮಾಡಿತ್ತು. 2005ರಲ್ಲಿ ಮರು ಮನವಿ ಸಲ್ಲಿಸಿದ್ದ ಪದಾಧಿಕಾರಿಗಳು, ಕುಪ್ಪಲೂರಿನಲ್ಲಿ ಬದಲಿ ಜಮೀನು ಕೊಡಲು ಆಗದಿದ್ದರೆ ಲಲಿತಾದ್ರಿಪುರ/ ಯಾಂದಳ್ಳಿ ಸಮೀಪ ಸಂಘವು ನಿರ್ಮಿಸುತ್ತಿರುವ ಬಡಾವಣೆಯ ಪಕ್ಕದಲ್ಲೇ ಜಮೀನು ನೀಡುವಂತೆ ಕೋರಿದ್ದರು.</p>.<p>ಬದಲಿ ಜಮೀನು ಹಂಚಿಕೆ ಕೋರಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಸರ್ಕಾರವು, ‘ಸಂಘ–ಸಂಸ್ಥೆಗಳಿಗೆ ಸಗಟಾಗಿ ಜಮೀನು ಹಂಚಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶ ಇಲ್ಲ’ ಎಂದು ತಳ್ಳಿ ಹಾಕಿತ್ತು. ಅದಾದ ದಶಕಗಳ ಬಳಿಕ, 2021ರಲ್ಲಿ ಸಂಘವು ಮತ್ತೆ ಸಲ್ಲಿಸಿದ ಮನವಿ ಆಧರಿಸಿ ಶೇ 50:50 ಅನುಪಾತದ ಅಡಿ ನಿಯಮಬಾಹಿರವಾಗಿ 5,800 ಚದರ ಮೀಟರ್ ಜಾಗವನ್ನು ಮುಡಾ ಮಂಜೂರು ಮಾಡಿತ್ತು. ‘ಸರ್ಕಾರದ ವರದಿ ಹಾಗೂ ವಕೀಲರ ಸಲಹೆಯನ್ನೂ ಪರಿಗಣಿಸದೇ ನಿಯಮ ಉಲ್ಲಂಘಿಸಲಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.</p>.<h2><strong>ನಿವೇಶನಗಳ ಮಾಹಿತಿಯೇ ಇಲ್ಲ!</strong> </h2><p>ಪ್ರಾಧಿಕಾರವು ತಾನು ರಚಿಸಿದ ಬಡಾವಣೆಗಳ ನಿವೇಶನಗಳ ಮಾಹಿತಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ‘ಮಧ್ಯಂತರ ಬಡಾವಣೆಗಳ ಹಂಚಿಕೆಯ ಬಳಿಕ ಯಾವ ಬಡಾವಣೆಯಲ್ಲಿ ಎಷ್ಟು ನಿವೇಶನಗಳು ಉಳಿದಿವೆ? ಮೂಲೆ ನಿವೇಶನಗಳೆಷ್ಟು ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಯಾವುದೇ ರಿಜಿಸ್ಟರ್ಗಳಲ್ಲಿ ನಮೂದಿಸಿಲ್ಲ. ಕೇವಲ ಹರಾಜಾದ ನಿವೇಶನಗಳ ಮಾಹಿತಿಯನ್ನಷ್ಟೇ ನಮೂದಿಸಲಾಗಿದೆ. ಆದರೆ ಹರಾಜಿಗೆ ಇನ್ನೂ ಎಷ್ಟು ನಿವೇಶನಗಳು ಲಭ್ಯವಿವೆ ಎಂಬುದರ ಮಾಹಿತಿ ನೀಡಿಲ್ಲ’ ಎನ್ನುವ ಸಂಗತಿ ತನಿಖೆ ವೇಳೆ ಬಯಲಾಗಿದೆ.</p>.<h2><strong>‘ಜಿಲ್ಲಾಧಿಕಾರಿ ನಿವಾಸ ನವೀಕರಣ ನಿಯಮಬಾಹಿರ’</strong> </h2><p>ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಹಾಗೂ ಅಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ಕಾರಣವಾಗಿದ್ದ ಜಿಲ್ಲಾಧಿಕಾರಿ ಅಧಿಕೃತ ನಿವಾಸ ‘ಜಲಸನ್ನಿಧಿ’ ನವೀಕರಣ ಹಾಗೂ ಈಜುಕೊಳ ನಿರ್ಮಾಣ ಕಾಮಗಾರಿ ಬಗ್ಗೆಯೂ ತಾಂತ್ರಿಕ ಸಮಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಇಡೀ ಕಾಮಗಾರಿ ನಿಯಮಬಾಹಿರ ಎಂದು ಅಭಿಪ್ರಾಯಪಟ್ಟಿದೆ. ‘ನವೀಕರಣ ಹಾಗೂ ಈಜುಕೊಳ ಸಂಬಂಧ ಪ್ರಾಧಿಕಾರ ಇಲ್ಲವೇ ವಿಶೇಷ ಪಾರಂಪರಿಕ ಸಮಿತಿ ಅನುಮತಿ ಪಡೆಯದೆಯೇ ಕಾನೂನುಬಾಹಿರವಾಗಿ ಕಾಮಗಾರಿ ನಡೆದಿದೆ’ ಎಂದಿದೆ. ಈ ಬಗ್ಗೆ ಸಾ.ರಾ. ಮಹೇಶ್ ತಾಂತ್ರಿಕ ಸಮಿತಿಗೆ ದೂರು ನೀಡಿದ್ದರು. </p>.<h2><strong>ಮುಡಾ: ಮುಂದುವರಿದ ತನಿಖೆ</strong></h2><p>ಮುಡಾ ನಿವೇಶನಗಳ ಅಕ್ರಮ ಹಂಚಿಕೆಯ ತನಿಖೆಗೆ ಸರ್ಕಾರ ನೇಮಿಸಿರುವ ಸಮಿತಿಯು ಶನಿವಾರವೂ ವಿಚಾರಣೆ ಮುಂದುವರಿಸಿದ್ದು, ಮುಡಾದಲ್ಲಿನ ಕಡತಗಳ ‘ಮಿಸ್ಸಿಂಗ್ ಲಿಂಕ್’ಗಾಗಿ ಹುಡುಕಾಟ ನಡೆಸಿದೆ.</p><p>ಕೆ. ವೆಂಕಟಾಚಲಪತಿ ಅಧ್ಯಕ್ಷತೆಯ ಸಮಿತಿ ಸದಸ್ಯರು ಎರಡು ವಾರದಿಂದ ನಗರದಲ್ಲಿ ಬೀಡು ಬಿಟ್ಟಿದ್ದು, ನಿತ್ಯ ಮುಂಜಾನೆಯಿಂದ ರಾತ್ರಿವರೆಗೆ ಕಡತಗಳ ಶೋಧದಲ್ಲಿ ತೊಡಗಿದ್ದಾರೆ. ಆದರೆ, ಕೆಲವು ಮಹತ್ವದ ದಾಖಲೆಗಳ ಮಧ್ಯದ ಪುಟಗಳು, ವರದಿಗಳು ಕಾಣೆಯಾಗಿರುವುದು ತನಿಖಾಧಿಕಾರಿಗಳಿಗೆ ತಲೆಬಿಸಿಯಾಗಿದೆ. ಅಧಿಕಾರಿಗಳ ಪ್ರಶ್ನೆಗಳಿಗೆ ಮುಡಾ ಸಿಬ್ಬಂದಿ ನಿರುತ್ತರರಾಗಿ ನಿಲ್ಲುವುದು ಸಾಮಾನ್ಯವಾಗಿದೆ.</p><p>ತನಿಖಾ ತಂಡಕ್ಕೆ ಸರ್ಕಾರವು ನೀಡಿದ ಗಡುವು ಭಾನುವಾರಕ್ಕೆ ಮುಗಿಯಲಿದ್ದು, ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಬೇಕಿತ್ತು. ಆದರೆ ಇನ್ನು ತನಿಖೆ ಅಂತಿಮ ಹಂತ ತಲುಪಿಲ್ಲ. ಇನ್ನೂ ವಾರ ಕಾಲ ತನಿಖೆ ಮುಂದುವರಿಯುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: 50:50 ನಿವೇಶನಗಳ ಹಂಚಿಕೆಯಲ್ಲಷ್ಟೇ ಅಲ್ಲದೆ, ಮುಡಾ ತಾನೇ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲೂ ನಿಯಮ ಉಲ್ಲಂಘಿಸಿದ್ದು, ಖಾಸಗಿ ಬಡಾವಣೆಗಳ ಮಾಲೀಕರಿಗೂ ‘ಅನುಕೂಲ’ ಮಾಡಿಕೊಟ್ಟಿರುವ ಸಂಗತಿಯನ್ನು ಟಿ.ವಿ. ಮುರಳಿ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯು ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಬಯಲಿಗೆ ಎಳೆದಿದೆ.</p>.<p>ಎಸ್ಬಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಮೈಸೂರಿನ ಬೋಗಾದಿಯಲ್ಲಿ ನಿರ್ಮಿಸಿರುವ ಬಡಾವಣೆಗೆ ಸಂಬಂಧಿಸಿದ ನಕ್ಷೆಗಳನ್ನು ನಾಲ್ಕು ಬಾರಿ ಪರಿಷ್ಕರಿಸಿ, ಉದ್ಯಾನ, ರಸ್ತೆಗಳ ಉಲ್ಲೇಖ ಇಲ್ಲದಿದ್ದರೂ ಅನುಮೋದನೆ ನೀಡಿ ನಿವೇಶನಗಳ ಹೆಚ್ಚಳಕ್ಕೆ ಸಹಕರಿಸಿದ ಸಂಗತಿಯನ್ನು ಸಮಿತಿಯು ಬಹಿರಂಗಪಡಿಸಿದೆ. ಈ ಸಂಘವು ಮುಡಾಕ್ಕೆ ₹ 3.52 ಕೋಟಿಯಷ್ಟು ಶುಲ್ಕ ಬಾಕಿ ಉಳಿಸಿದ್ದನ್ನು ಉಲ್ಲೇಖಿಸಿದೆ.</p>.<p>ಬೋಗಾದಿ ಗ್ರಾಮದಲ್ಲಿ ಸಂಘ ನಿರ್ಮಿಸಿರುವ ಬಡಾವಣೆಗಾಗಿ ಸರ್ಕಾರ 1990ರಲ್ಲಿ ಒಟ್ಟು 135 ಎಕರೆ 8 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಟ್ಟಿತ್ತು. ನಂತರ, ಸಂಘವು ಆ ಜಮೀನಿನಲ್ಲಿ ಬಡಾವಣೆ ವಿನ್ಯಾಸಗೊಳಿಸಿದ್ದು, 1992ರಲ್ಲಿ ಮೊದಲ, 1994ರಲ್ಲಿ ಎರಡನೇ ಹಾಗೂ 1998ರಲ್ಲಿ ಮೂರನೇ ಬಾರಿಗೆ ವಿನ್ಯಾಸ ನಕ್ಷೆ ಸಲ್ಲಿಸಿತ್ತು. 1,378 ನಿವೇಶನಗಳುಳ್ಳ ವಿನ್ಯಾಸಕ್ಕೆ ಮುಡಾ ಅನುಮೋದನೆ ನೀಡಿತ್ತು.</p>.<p>2003ರಲ್ಲಿ ಸಂಘವು 135 ಎಕರೆ ಜೊತೆಗೆ ಇನ್ನೂ 6 ಎಕರೆ ಹೆಚ್ಚುವರಿ ಭೂಮಿಯನ್ನು ಬಡಾವಣೆಗೆ ಸೇರಿಸಿಕೊಂಡು ಪರಿಷ್ಕೃತ ನಕ್ಷೆಯನ್ನು ಮುಡಾಕ್ಕೆ ಸಲ್ಲಿಸಿತ್ತು. ಆದರೆ ಹೆಚ್ಚುವರಿ ಜಮೀನಿನ ಮಾಲೀಕತ್ವದ ದಾಖಲೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ. ಆ ನಕ್ಷೆ ಪ್ರಕಾರ ನಿವೇಶನಗಳ ಸಂಖ್ಯೆ 1,378ರಿಂದ 1,500ಕ್ಕೆ ಏರಿದ್ದು, ಒಟ್ಟು 141 ಎಕರೆ ಜಮೀನಿನಲ್ಲಿ ಉದ್ಯಾನಕ್ಕೆ, ರಸ್ತೆಗೆ ಎಷ್ಟು ಜಾಗ ಬಿಡಲಾಗುವುದು ಎಂಬ ಮಾಹಿತಿಯನ್ನೇ ನೀಡದಿದ್ದರೂ ಮುಡಾ ಅನುಮತಿ ನೀಡಿತ್ತು.</p>.<p>ಉದ್ಯಾನ ಹಾಗೂ ಸಿ.ಎ. ನಿವೇಶನಗಳ ಜಾಗವನ್ನು ಪದೇ ಪದೇ ಪರಿಷ್ಕರಿಸಿದ್ದು, ಉದ್ಯಾನದ ಒಟ್ಟು ಜಾಗವನ್ನು ಶೇ 15ರಿಂದ 13ಕ್ಕೆ ಕಡಿತಗೊಳಿಸಲಾಗಿದೆ. ಈ ಎಲ್ಲವನ್ನೂ ಅಧಿಕಾರಿಗಳು ಸಕ್ರಮಗೊಳಿಸಿದ್ದು, ಅವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬಹುದು ಎಂದು ಸಮಿತಿ ಹೇಳಿದೆ.</p>.<p>ಬಡಾವಣೆಗೆ ಅನುಮೋದನೆ ನೀಡುವ ಪೂರ್ವದಲ್ಲಿ ಎಸ್ಬಿಎಂ ನೌಕರರ ಸಂಘವು ಮುಡಾಕ್ಕೆ ಅಭಿವೃದ್ಧಿ ಶುಲ್ಕವಾಗಿ ₹ 10 ಲಕ್ಷ, ಕೊಳೆಗೇರಿ ಅಭಿವೃದ್ಧಿ ಶುಲ್ಕವಾಗಿ ₹ 6.83 ಲಕ್ಷ, ಒಳಚರಂಡಿ ಲೇನ್ ವೆಚ್ಚ ₹ 13.88 ಲಕ್ಷ, ಮೇಲ್ವಿಚಾರಣೆ ಶುಲ್ಕ ₹ 2.88 ಲಕ್ಷ ಹಾಗೂ ಬಡಾವಣೆಗೆ ನೀರು ಪೂರೈಕೆ ಹಾಗೂ ಒಳಚರಂಡಿ ವೆಚ್ಚವಾಗಿ ₹ 3.19 ಕೋಟಿ ಸೇರಿ ಒಟ್ಟು ₹ 3.52 ಕೋಟಿ ಪಾವತಿಸಬೇಕಿತ್ತು. ಅದ್ಯಾವುದನ್ನು ಕಟ್ಟದಿದ್ದರೂ ಬಡಾವಣೆ ವಿನ್ಯಾಸಕ್ಕೆ ಅನುಮೋದನೆ ನೀಡಲಾಗಿದೆ. ಅದರಿಂದ ಮುಡಾಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದೆ.</p>.<p><strong>ನಿಯಮ ಮೀರಿ ಭೂಮಿ ಮಂಜೂರು:</strong> ಜೆಎಸ್ಎಸ್ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮುಡಾ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬದಲಿ ಜಮೀನು ನೀಡಿರುವುದಾಗಿ ಸಮಿತಿ ಹೇಳಿದೆ.</p>.<p>ಕುಪ್ಪಲೂರು ಗ್ರಾಮದ ಸರ್ವೆ ಸಂಖ್ಯೆ 39/1 ರಲ್ಲಿ ಸಂಘದ ಒಟ್ಟು 5 ಎಕರೆ 8 ಗುಂಟೆ ಜಮೀನನ್ನು ಪ್ರಾಧಿಕಾರವು ವರ್ತುಲ ರಸ್ತೆ ನಿರ್ಮಾಣಕ್ಕಾಗಿ ವಶಕ್ಕೆ ಪಡೆದಿತ್ತು. ಆ ಜಮೀನಿಗೆ ಹಣದ ರೂಪದ ಪರಿಹಾರಕ್ಕೆ ಬದಲಾಗಿ ಪಕ್ಕದಲ್ಲೇ ಅಷ್ಟೇ ವಿಸ್ತೀರ್ಣದ ಜಮೀನನ್ನು ಬಿಟ್ಟುಕೊಡುವಂತೆ ಸಂಘವು 2002ರಲ್ಲಿ ಮುಡಾಕ್ಕೆ ಮನವಿ ಮಾಡಿತ್ತು. 2005ರಲ್ಲಿ ಮರು ಮನವಿ ಸಲ್ಲಿಸಿದ್ದ ಪದಾಧಿಕಾರಿಗಳು, ಕುಪ್ಪಲೂರಿನಲ್ಲಿ ಬದಲಿ ಜಮೀನು ಕೊಡಲು ಆಗದಿದ್ದರೆ ಲಲಿತಾದ್ರಿಪುರ/ ಯಾಂದಳ್ಳಿ ಸಮೀಪ ಸಂಘವು ನಿರ್ಮಿಸುತ್ತಿರುವ ಬಡಾವಣೆಯ ಪಕ್ಕದಲ್ಲೇ ಜಮೀನು ನೀಡುವಂತೆ ಕೋರಿದ್ದರು.</p>.<p>ಬದಲಿ ಜಮೀನು ಹಂಚಿಕೆ ಕೋರಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಸರ್ಕಾರವು, ‘ಸಂಘ–ಸಂಸ್ಥೆಗಳಿಗೆ ಸಗಟಾಗಿ ಜಮೀನು ಹಂಚಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶ ಇಲ್ಲ’ ಎಂದು ತಳ್ಳಿ ಹಾಕಿತ್ತು. ಅದಾದ ದಶಕಗಳ ಬಳಿಕ, 2021ರಲ್ಲಿ ಸಂಘವು ಮತ್ತೆ ಸಲ್ಲಿಸಿದ ಮನವಿ ಆಧರಿಸಿ ಶೇ 50:50 ಅನುಪಾತದ ಅಡಿ ನಿಯಮಬಾಹಿರವಾಗಿ 5,800 ಚದರ ಮೀಟರ್ ಜಾಗವನ್ನು ಮುಡಾ ಮಂಜೂರು ಮಾಡಿತ್ತು. ‘ಸರ್ಕಾರದ ವರದಿ ಹಾಗೂ ವಕೀಲರ ಸಲಹೆಯನ್ನೂ ಪರಿಗಣಿಸದೇ ನಿಯಮ ಉಲ್ಲಂಘಿಸಲಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.</p>.<h2><strong>ನಿವೇಶನಗಳ ಮಾಹಿತಿಯೇ ಇಲ್ಲ!</strong> </h2><p>ಪ್ರಾಧಿಕಾರವು ತಾನು ರಚಿಸಿದ ಬಡಾವಣೆಗಳ ನಿವೇಶನಗಳ ಮಾಹಿತಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ‘ಮಧ್ಯಂತರ ಬಡಾವಣೆಗಳ ಹಂಚಿಕೆಯ ಬಳಿಕ ಯಾವ ಬಡಾವಣೆಯಲ್ಲಿ ಎಷ್ಟು ನಿವೇಶನಗಳು ಉಳಿದಿವೆ? ಮೂಲೆ ನಿವೇಶನಗಳೆಷ್ಟು ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಯಾವುದೇ ರಿಜಿಸ್ಟರ್ಗಳಲ್ಲಿ ನಮೂದಿಸಿಲ್ಲ. ಕೇವಲ ಹರಾಜಾದ ನಿವೇಶನಗಳ ಮಾಹಿತಿಯನ್ನಷ್ಟೇ ನಮೂದಿಸಲಾಗಿದೆ. ಆದರೆ ಹರಾಜಿಗೆ ಇನ್ನೂ ಎಷ್ಟು ನಿವೇಶನಗಳು ಲಭ್ಯವಿವೆ ಎಂಬುದರ ಮಾಹಿತಿ ನೀಡಿಲ್ಲ’ ಎನ್ನುವ ಸಂಗತಿ ತನಿಖೆ ವೇಳೆ ಬಯಲಾಗಿದೆ.</p>.<h2><strong>‘ಜಿಲ್ಲಾಧಿಕಾರಿ ನಿವಾಸ ನವೀಕರಣ ನಿಯಮಬಾಹಿರ’</strong> </h2><p>ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಹಾಗೂ ಅಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ಕಾರಣವಾಗಿದ್ದ ಜಿಲ್ಲಾಧಿಕಾರಿ ಅಧಿಕೃತ ನಿವಾಸ ‘ಜಲಸನ್ನಿಧಿ’ ನವೀಕರಣ ಹಾಗೂ ಈಜುಕೊಳ ನಿರ್ಮಾಣ ಕಾಮಗಾರಿ ಬಗ್ಗೆಯೂ ತಾಂತ್ರಿಕ ಸಮಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಇಡೀ ಕಾಮಗಾರಿ ನಿಯಮಬಾಹಿರ ಎಂದು ಅಭಿಪ್ರಾಯಪಟ್ಟಿದೆ. ‘ನವೀಕರಣ ಹಾಗೂ ಈಜುಕೊಳ ಸಂಬಂಧ ಪ್ರಾಧಿಕಾರ ಇಲ್ಲವೇ ವಿಶೇಷ ಪಾರಂಪರಿಕ ಸಮಿತಿ ಅನುಮತಿ ಪಡೆಯದೆಯೇ ಕಾನೂನುಬಾಹಿರವಾಗಿ ಕಾಮಗಾರಿ ನಡೆದಿದೆ’ ಎಂದಿದೆ. ಈ ಬಗ್ಗೆ ಸಾ.ರಾ. ಮಹೇಶ್ ತಾಂತ್ರಿಕ ಸಮಿತಿಗೆ ದೂರು ನೀಡಿದ್ದರು. </p>.<h2><strong>ಮುಡಾ: ಮುಂದುವರಿದ ತನಿಖೆ</strong></h2><p>ಮುಡಾ ನಿವೇಶನಗಳ ಅಕ್ರಮ ಹಂಚಿಕೆಯ ತನಿಖೆಗೆ ಸರ್ಕಾರ ನೇಮಿಸಿರುವ ಸಮಿತಿಯು ಶನಿವಾರವೂ ವಿಚಾರಣೆ ಮುಂದುವರಿಸಿದ್ದು, ಮುಡಾದಲ್ಲಿನ ಕಡತಗಳ ‘ಮಿಸ್ಸಿಂಗ್ ಲಿಂಕ್’ಗಾಗಿ ಹುಡುಕಾಟ ನಡೆಸಿದೆ.</p><p>ಕೆ. ವೆಂಕಟಾಚಲಪತಿ ಅಧ್ಯಕ್ಷತೆಯ ಸಮಿತಿ ಸದಸ್ಯರು ಎರಡು ವಾರದಿಂದ ನಗರದಲ್ಲಿ ಬೀಡು ಬಿಟ್ಟಿದ್ದು, ನಿತ್ಯ ಮುಂಜಾನೆಯಿಂದ ರಾತ್ರಿವರೆಗೆ ಕಡತಗಳ ಶೋಧದಲ್ಲಿ ತೊಡಗಿದ್ದಾರೆ. ಆದರೆ, ಕೆಲವು ಮಹತ್ವದ ದಾಖಲೆಗಳ ಮಧ್ಯದ ಪುಟಗಳು, ವರದಿಗಳು ಕಾಣೆಯಾಗಿರುವುದು ತನಿಖಾಧಿಕಾರಿಗಳಿಗೆ ತಲೆಬಿಸಿಯಾಗಿದೆ. ಅಧಿಕಾರಿಗಳ ಪ್ರಶ್ನೆಗಳಿಗೆ ಮುಡಾ ಸಿಬ್ಬಂದಿ ನಿರುತ್ತರರಾಗಿ ನಿಲ್ಲುವುದು ಸಾಮಾನ್ಯವಾಗಿದೆ.</p><p>ತನಿಖಾ ತಂಡಕ್ಕೆ ಸರ್ಕಾರವು ನೀಡಿದ ಗಡುವು ಭಾನುವಾರಕ್ಕೆ ಮುಗಿಯಲಿದ್ದು, ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಬೇಕಿತ್ತು. ಆದರೆ ಇನ್ನು ತನಿಖೆ ಅಂತಿಮ ಹಂತ ತಲುಪಿಲ್ಲ. ಇನ್ನೂ ವಾರ ಕಾಲ ತನಿಖೆ ಮುಂದುವರಿಯುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>