<p><strong>ಮೈಸೂರು</strong>: ಗೋಕುಲಂ ಯೋಗ ವಿತ್ ಶ್ರೀನಾಥ ಕೇಂದ್ರದಲ್ಲಿ ಪಟ್ಟಾಭಿ ಜೋಯಿಸ್ ಜಯಂತ್ಯುತ್ಸವವನ್ನು ಬಿ.ಆರ್. ನಟರಾಜ್ ಜೋಯ್ಸ್ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿ, ‘ಕಡು ಬಡತನದಿಂದ ಬಂದ ಪಟ್ಟಾಭಿ ಜೋಯಿಸ್ ತಮ್ಮ ಸಂಕಲ್ಪ ಶಕ್ತಿಯಿಂದ ಯೋಗವನ್ನು ವಿಶ್ವ ಮಾನ್ಯವನ್ನಾಗಿ ಮಾಡಿದರು’ ಎಂದರು.</p>.<p>‘ಕೌಶಿಕ ಗ್ರಾಮದಿಂದ ಬಂದ ಪಟ್ಟಾಭಿ ಜೋಯಿಸ್ ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತದೊಂದಿಗೆ ಕೃಷ್ಣಮಾಚಾರ್ಯರ ಬಳಿ ಯೋಗವನ್ನು ಅಭ್ಯಸಿಸಿದರು. ಗುರುಗಳು ಮೈಸೂರು ಬಿಟ್ಟು ಚೆನ್ನೈಗೆ ತೆರಳಿದ ನಂತರ ಜೋಯಿಸ್ ಮೈಸೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು’ ಎಂದರು.</p>.<p>ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜ್ ಮಾತನಾಡಿ, ‘ಗೋಕುಲಂ ಯೋಗದ ಕೇಂದ್ರವಾಗಿ ಬೆಳೆಯಲು ಪಟ್ಟಾಭಿ ಜೋಯಿಸರೇ ನೇರ ಕಾರಣ’ ಎಂದು ಹೇಳಿದರು.</p>.<p>ಕೆ. ರಘುರಾಮ್ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಶ್ರೀನಾಥ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಹರ್ಷವರ್ಧನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಗೋಕುಲಂ ಯೋಗ ವಿತ್ ಶ್ರೀನಾಥ ಕೇಂದ್ರದಲ್ಲಿ ಪಟ್ಟಾಭಿ ಜೋಯಿಸ್ ಜಯಂತ್ಯುತ್ಸವವನ್ನು ಬಿ.ಆರ್. ನಟರಾಜ್ ಜೋಯ್ಸ್ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿ, ‘ಕಡು ಬಡತನದಿಂದ ಬಂದ ಪಟ್ಟಾಭಿ ಜೋಯಿಸ್ ತಮ್ಮ ಸಂಕಲ್ಪ ಶಕ್ತಿಯಿಂದ ಯೋಗವನ್ನು ವಿಶ್ವ ಮಾನ್ಯವನ್ನಾಗಿ ಮಾಡಿದರು’ ಎಂದರು.</p>.<p>‘ಕೌಶಿಕ ಗ್ರಾಮದಿಂದ ಬಂದ ಪಟ್ಟಾಭಿ ಜೋಯಿಸ್ ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತದೊಂದಿಗೆ ಕೃಷ್ಣಮಾಚಾರ್ಯರ ಬಳಿ ಯೋಗವನ್ನು ಅಭ್ಯಸಿಸಿದರು. ಗುರುಗಳು ಮೈಸೂರು ಬಿಟ್ಟು ಚೆನ್ನೈಗೆ ತೆರಳಿದ ನಂತರ ಜೋಯಿಸ್ ಮೈಸೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು’ ಎಂದರು.</p>.<p>ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜ್ ಮಾತನಾಡಿ, ‘ಗೋಕುಲಂ ಯೋಗದ ಕೇಂದ್ರವಾಗಿ ಬೆಳೆಯಲು ಪಟ್ಟಾಭಿ ಜೋಯಿಸರೇ ನೇರ ಕಾರಣ’ ಎಂದು ಹೇಳಿದರು.</p>.<p>ಕೆ. ರಘುರಾಮ್ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಶ್ರೀನಾಥ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಹರ್ಷವರ್ಧನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>