<p><strong>ಮೈಸೂರು:</strong> ‘ನಾಲ್ಕು ತಿಂಗಳ ವೇತನ ನೀಡಬೇಕು’ ಎಂದು ಒತ್ತಾಯಿಸಿ ಸಿಎಸ್ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಹಾಸ್ಪಿಟಲ್ (ಮಿಷನ್ ಆಸ್ಪತ್ರೆ) ನೌಕರರ ಸಂಘಟನೆ ಸದಸ್ಯರು ಸೋಮವಾರ ಕರ್ತವ್ಯಕ್ಕೆ ಹಾಜರಾಗದೆ ಆಸ್ಪತ್ರೆ ಮುಂಭಾಗ ಪ್ರತಿಭಟಿಸಿದರು.</p>.<p>‘ಆಸ್ಪತ್ರೆಯ ಅಧ್ಯಕ್ಷ ಬಿಷಪ್ ಮೋಹನ್ ಮನೋರಾಜ್ ಹಾಗೂ ನಿರ್ದೇಶಕ ವಿನ್ಸೆಂಟ್ ಪಾಲಣ್ಣ ಕೋಟ್ಯಂತರ ಅವ್ಯವಹಾರ ಮಾಡಿ ಆಸ್ಪತ್ರೆಯನ್ನು ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನ್ಯಾಯ ಕೇಳಿದರೆ ತಮ್ಮ ಅಂಗರಕ್ಷಕರ ಮೂಲಕ ಬೆದರಿಸುತ್ತಿದ್ದು, 4 ತಿಂಗಳಿನಿಂದ ವೇತನ ನೀಡುತ್ತಿಲ್ಲ. ಕಾರ್ಮಿಕರಿಂದ ಹಣ ಕಡಿತ ಮಾಡಿಕೊಂಡರೂ ಇಪಿಎಫ್ ಪಾವತಿ ಮಾಡುತ್ತಿಲ್ಲ’ ಎಂದು ದೂರಿದರು.</p>.<p>‘2016ರಲ್ಲಿ ಡಾ.ಕರಾಟ್ ಪ್ರಸಾದ್ ಆಸ್ಪತ್ರೆಯ ನಿರ್ದೇಶಕರಾಗಿದ್ದಾಗ ಮಿಷನ್ ಆಸ್ಪತ್ರೆಯ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲೆಯಾಗಿದ್ದ ಶೈಲಜಾ ಕೃಪನಿಧಿಯ ಅವ್ಯವಹಾರ ಬಯಲಿಗೆಳೆದು ಅವರನ್ನು ವಜಾಗೊಳಿಸಿದ್ದರು. ನಂತರ ಶೈಲಜಾ ಅಣ್ಣ ಮೋಹನ್ ಮನೋರಾಜ್ ಬಿಷಪ್ ಆಗಿ ಬಂದಿದ್ದು, ದ್ವೇಷದಿಂದ ಕರಾಟ್ ಅವರು ನಿರ್ದೇಶಕ ಸ್ಥಾನದಿಂದ ತೆರವುಗೊಳಿಸಿ, ಡಾ.ಜೆ.ಗುಣಶಾಂತಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿದ್ದರು. ವಿನ್ಸೆಂಟ್ ಪಾಲಣ್ಣ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಕರಾಟ್ ಅವರ ಅವಧಿಯಲ್ಲಿ ಎಲ್ಲಾ ಲೆಕ್ಕಾಚಾರ ಸರಿಯಾಗಿತ್ತು’ ಎಂದರು.</p>.<p>‘ನಂತರದ ದಿನಗಳಲ್ಲಿ ಗುಣಶಾಂತಿ ಅವರನ್ನೂ ಕೆಳಗಿಳಿಸಿ ಆಸ್ಪತ್ರೆಯ ಬೈಲಾ ಉಲ್ಲಂಘಿಸಿ ವಿನ್ಸೆಂಟ್ ಪಾಲಣ್ಣ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಬೋರ್ಡ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೂ ವಜಾ ಮಾಡಿ ತಮ್ಮ ಆಪ್ತರನ್ನು ಸದಸ್ಯರನ್ನಾಗಿಸಿದರು. ಆಸ್ಪತ್ರೆಗೆ ಆದಾಯ ತಂದುಕೊಡುತ್ತಿದ್ದ ಕ್ಯಾಂಟೀನ್, ಡೆಂಟಲ್, ಮೆಡಿಕಲ್ಗಳನ್ನು ಹೊರಗುತ್ತಿಗೆಗೆ ನೀಡಿ ಅಲ್ಲೂ ಅವ್ಯವಹಾರ ಮಾಡಿದ್ದಾರೆ. ನೌಕರರಿಗೆ ವೇತನ ಪಾವತಿಸಿ ನ್ಯಾಯ ದೊರಕಿಸಬೇಕು’ ಎಂದು ಒತ್ತಾಯಿಸಿದರು.</p>.<p>ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸಾಮಾನ್ಯ ರೋಗಿಗಳು ಹಾಗೂ ತುರ್ತು ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತಾಯಿತು.</p>.<p>ಪದಾಧಿಕಾರಿಗಳಾದ ವಿಲ್ಸನ್ ಪ್ರಭಾಕರ್, ಜೋಸೆಫ್ ಮ್ಯಾನುವೇಲ್, ದಯಾಪ್ರಕಾಶ, ಪಾಪಯ್ಯ, ಸಿದ್ದರಾಜು, ಶಂಕರ್, ಶಿವಣ್ಣ, ಸಿದ್ದರಾಜು, ಕುಮಾರ್, ಸಲ್ಲತ್ ಮೇರಿ, ರಾಜಮ್ಮ ಉಮಾ, ಕೃಪಾ, ಮೀನಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ನಾಲ್ಕು ತಿಂಗಳ ವೇತನ ನೀಡಬೇಕು’ ಎಂದು ಒತ್ತಾಯಿಸಿ ಸಿಎಸ್ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಹಾಸ್ಪಿಟಲ್ (ಮಿಷನ್ ಆಸ್ಪತ್ರೆ) ನೌಕರರ ಸಂಘಟನೆ ಸದಸ್ಯರು ಸೋಮವಾರ ಕರ್ತವ್ಯಕ್ಕೆ ಹಾಜರಾಗದೆ ಆಸ್ಪತ್ರೆ ಮುಂಭಾಗ ಪ್ರತಿಭಟಿಸಿದರು.</p>.<p>‘ಆಸ್ಪತ್ರೆಯ ಅಧ್ಯಕ್ಷ ಬಿಷಪ್ ಮೋಹನ್ ಮನೋರಾಜ್ ಹಾಗೂ ನಿರ್ದೇಶಕ ವಿನ್ಸೆಂಟ್ ಪಾಲಣ್ಣ ಕೋಟ್ಯಂತರ ಅವ್ಯವಹಾರ ಮಾಡಿ ಆಸ್ಪತ್ರೆಯನ್ನು ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನ್ಯಾಯ ಕೇಳಿದರೆ ತಮ್ಮ ಅಂಗರಕ್ಷಕರ ಮೂಲಕ ಬೆದರಿಸುತ್ತಿದ್ದು, 4 ತಿಂಗಳಿನಿಂದ ವೇತನ ನೀಡುತ್ತಿಲ್ಲ. ಕಾರ್ಮಿಕರಿಂದ ಹಣ ಕಡಿತ ಮಾಡಿಕೊಂಡರೂ ಇಪಿಎಫ್ ಪಾವತಿ ಮಾಡುತ್ತಿಲ್ಲ’ ಎಂದು ದೂರಿದರು.</p>.<p>‘2016ರಲ್ಲಿ ಡಾ.ಕರಾಟ್ ಪ್ರಸಾದ್ ಆಸ್ಪತ್ರೆಯ ನಿರ್ದೇಶಕರಾಗಿದ್ದಾಗ ಮಿಷನ್ ಆಸ್ಪತ್ರೆಯ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲೆಯಾಗಿದ್ದ ಶೈಲಜಾ ಕೃಪನಿಧಿಯ ಅವ್ಯವಹಾರ ಬಯಲಿಗೆಳೆದು ಅವರನ್ನು ವಜಾಗೊಳಿಸಿದ್ದರು. ನಂತರ ಶೈಲಜಾ ಅಣ್ಣ ಮೋಹನ್ ಮನೋರಾಜ್ ಬಿಷಪ್ ಆಗಿ ಬಂದಿದ್ದು, ದ್ವೇಷದಿಂದ ಕರಾಟ್ ಅವರು ನಿರ್ದೇಶಕ ಸ್ಥಾನದಿಂದ ತೆರವುಗೊಳಿಸಿ, ಡಾ.ಜೆ.ಗುಣಶಾಂತಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿದ್ದರು. ವಿನ್ಸೆಂಟ್ ಪಾಲಣ್ಣ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಕರಾಟ್ ಅವರ ಅವಧಿಯಲ್ಲಿ ಎಲ್ಲಾ ಲೆಕ್ಕಾಚಾರ ಸರಿಯಾಗಿತ್ತು’ ಎಂದರು.</p>.<p>‘ನಂತರದ ದಿನಗಳಲ್ಲಿ ಗುಣಶಾಂತಿ ಅವರನ್ನೂ ಕೆಳಗಿಳಿಸಿ ಆಸ್ಪತ್ರೆಯ ಬೈಲಾ ಉಲ್ಲಂಘಿಸಿ ವಿನ್ಸೆಂಟ್ ಪಾಲಣ್ಣ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಬೋರ್ಡ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೂ ವಜಾ ಮಾಡಿ ತಮ್ಮ ಆಪ್ತರನ್ನು ಸದಸ್ಯರನ್ನಾಗಿಸಿದರು. ಆಸ್ಪತ್ರೆಗೆ ಆದಾಯ ತಂದುಕೊಡುತ್ತಿದ್ದ ಕ್ಯಾಂಟೀನ್, ಡೆಂಟಲ್, ಮೆಡಿಕಲ್ಗಳನ್ನು ಹೊರಗುತ್ತಿಗೆಗೆ ನೀಡಿ ಅಲ್ಲೂ ಅವ್ಯವಹಾರ ಮಾಡಿದ್ದಾರೆ. ನೌಕರರಿಗೆ ವೇತನ ಪಾವತಿಸಿ ನ್ಯಾಯ ದೊರಕಿಸಬೇಕು’ ಎಂದು ಒತ್ತಾಯಿಸಿದರು.</p>.<p>ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸಾಮಾನ್ಯ ರೋಗಿಗಳು ಹಾಗೂ ತುರ್ತು ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತಾಯಿತು.</p>.<p>ಪದಾಧಿಕಾರಿಗಳಾದ ವಿಲ್ಸನ್ ಪ್ರಭಾಕರ್, ಜೋಸೆಫ್ ಮ್ಯಾನುವೇಲ್, ದಯಾಪ್ರಕಾಶ, ಪಾಪಯ್ಯ, ಸಿದ್ದರಾಜು, ಶಂಕರ್, ಶಿವಣ್ಣ, ಸಿದ್ದರಾಜು, ಕುಮಾರ್, ಸಲ್ಲತ್ ಮೇರಿ, ರಾಜಮ್ಮ ಉಮಾ, ಕೃಪಾ, ಮೀನಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>