<p><strong>ಸಾಲಿಗ್ರಾಮ</strong>: ಪಟ್ಟಣದ ಹೊರ ವಲಯದಲ್ಲಿ ಇರುವ ಪುರಾಣ ಪ್ರಸಿದ್ದ ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಮಂದಿ ಭಕ್ತರ ಜಯಘೋಷಣೆಯೊಂದಿಗೆ ಭಾನುವಾರ ಬಹಳ ಅದ್ದೂರಿಯಾಗಿ ನಡೆಯಿತು.</p>.<p>ದೇವಾಲಯದ ಪ್ರಾಂಗಣದಲ್ಲಿ ಮಧ್ಯಾಹ್ನದ ವೇಳೆ, ಹೂವಿನಿಂದ ಅಲಂಕೃತಗೊಂಡಿದ್ದ ರಥದಲ್ಲಿ ಯೋಗನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೂರಾರು ಮಂದಿ ಭಕ್ತರು ಯೋಗ ನರಸಿಂಹಸ್ವಾಮಿಗೆ ಜಯಘೋಷಣೆ ಕೂಗುತ್ತಾ ಬ್ರಹ್ಮರಥವನ್ನು ದೇವಾಲಯದ ಸುತ್ತ ಎಳೆದು ಸಂಭ್ರಮಿಸಿದರು.</p>.<p>ಮಹಿಳೆಯರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ಕೆಲವು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದ ಮೇರೆಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದವನ್ನು ವಿತರಿಸಿರು. ನಂತರ ಬ್ರಹ್ಮರಥವನ್ನು ಪಟ್ಟಣದ ಹೊಸ ಬೀದಿ ಮೂಲಕ ಪೇಟೆ ಬಾಗಿಲಿಗೆ ತಂದು ನಿಲ್ಲಿಸಲಾಯಿತು.</p>.<p>ಬ್ರಹ್ಮರಥಕ್ಕೆ ಪಟ್ಟಣದ ಸಾವಿರಾರು ಮಂದಿ ಭಕ್ತರು ಹಣ್ಣು ಧವನವನ್ನು ಎಸೆದು ಭಕ್ತಿ ತೋರಿದರು. ಉತ್ಸವದಲ್ಲಿ ದೇವಾಲಯದ ಪಾರುಪತ್ತೇದಾರ ಅಂಜನೀಗೌಡ, ಮುಖಂಡರಾದ ಎಸ್.ಅರ್. ರಾಮೇಗೌಡ ಭಾಗವಹಿಸಿದ್ದರು.</p>.<p>Highlights - ನರಸಿಂಹಸ್ವಾಮಿಗೆ ಜಯಘೋಷಣೆ ಮಹಿಳೆಯರಿಂದ ಪೂಜೆ, ಹರಕೆ ಪ್ರಸಾದ ವಿನಿಯೋಗ, ಸಂಭ್ರಮ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಲಿಗ್ರಾಮ</strong>: ಪಟ್ಟಣದ ಹೊರ ವಲಯದಲ್ಲಿ ಇರುವ ಪುರಾಣ ಪ್ರಸಿದ್ದ ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಮಂದಿ ಭಕ್ತರ ಜಯಘೋಷಣೆಯೊಂದಿಗೆ ಭಾನುವಾರ ಬಹಳ ಅದ್ದೂರಿಯಾಗಿ ನಡೆಯಿತು.</p>.<p>ದೇವಾಲಯದ ಪ್ರಾಂಗಣದಲ್ಲಿ ಮಧ್ಯಾಹ್ನದ ವೇಳೆ, ಹೂವಿನಿಂದ ಅಲಂಕೃತಗೊಂಡಿದ್ದ ರಥದಲ್ಲಿ ಯೋಗನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೂರಾರು ಮಂದಿ ಭಕ್ತರು ಯೋಗ ನರಸಿಂಹಸ್ವಾಮಿಗೆ ಜಯಘೋಷಣೆ ಕೂಗುತ್ತಾ ಬ್ರಹ್ಮರಥವನ್ನು ದೇವಾಲಯದ ಸುತ್ತ ಎಳೆದು ಸಂಭ್ರಮಿಸಿದರು.</p>.<p>ಮಹಿಳೆಯರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ಕೆಲವು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದ ಮೇರೆಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದವನ್ನು ವಿತರಿಸಿರು. ನಂತರ ಬ್ರಹ್ಮರಥವನ್ನು ಪಟ್ಟಣದ ಹೊಸ ಬೀದಿ ಮೂಲಕ ಪೇಟೆ ಬಾಗಿಲಿಗೆ ತಂದು ನಿಲ್ಲಿಸಲಾಯಿತು.</p>.<p>ಬ್ರಹ್ಮರಥಕ್ಕೆ ಪಟ್ಟಣದ ಸಾವಿರಾರು ಮಂದಿ ಭಕ್ತರು ಹಣ್ಣು ಧವನವನ್ನು ಎಸೆದು ಭಕ್ತಿ ತೋರಿದರು. ಉತ್ಸವದಲ್ಲಿ ದೇವಾಲಯದ ಪಾರುಪತ್ತೇದಾರ ಅಂಜನೀಗೌಡ, ಮುಖಂಡರಾದ ಎಸ್.ಅರ್. ರಾಮೇಗೌಡ ಭಾಗವಹಿಸಿದ್ದರು.</p>.<p>Highlights - ನರಸಿಂಹಸ್ವಾಮಿಗೆ ಜಯಘೋಷಣೆ ಮಹಿಳೆಯರಿಂದ ಪೂಜೆ, ಹರಕೆ ಪ್ರಸಾದ ವಿನಿಯೋಗ, ಸಂಭ್ರಮ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>