<p><strong>ಮೈಸೂರು:</strong> ‘ಶಿಕ್ಷಣ, ಸರ್ಕಾರಿ ಕೆಲಸದಲ್ಲಿ ಹಿಂದುಳಿದ ಹಾಗೂ ತಳ ವರ್ಗದವರಿಗೆ ಮೀಸಲಾತಿ ಸೌಲಭ್ಯ ನೀಡುವ ಮೂಲಕ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ ನೀಡಿದ್ದರು. ಅಂತೆಯೇ ಮೈಸೂರು ಗುಣಮಟ್ಟದ ಶಿಕ್ಷಣಕ್ಕೂ ಹೆಸರುವಾಸಿಯಾಗಿದೆ’ ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಬಣ್ಣಿಸಿದರು.</p>.<p>ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರದ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಹಾಜನ ಕಾಲೇಜು ಐತಿಹಾಸಿಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿರುವುದು ಅಭಿನಂದನೀಯ’ ಎಂದರು.</p>.<p>‘ಭಾರತ ಹಲವು ಜಾತಿ–ಧರ್ಮಗಳ ನಾಡು. ಇಲ್ಲಿನ ಸಂಸ್ಕೃತಿ–ಭಾಷೆ ವೈವಿಧ್ಯಮಯವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಸದಾ ಹೊಂದಿರಬೇಕು. ಭಾವೈಕ್ಯದಿಂದ ಕೂಡಿರಬೇಕು. ಯುವ ಜನತೆ ಸದಾ ಶಾಂತಿ, ಸೌಹಾರ್ದದಿಂದ ನಡೆದುಕೊಂಡಾಗ ಮಾತ್ರ ಸಶಕ್ತ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.</p>.<p>‘ಗುರು ದ್ರೋಣಾಚಾರ್ಯ ಎಜ್ಯುಕೇಟರ್ ಆಫ್ ದಿ ಇಯರ್– 2023’ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತೆ ಕ್ಯಾಪ್ಟನ್ ಇಂದ್ರಾಣಿ ಅವರನ್ನು ಸನ್ಮಾನಿಸಲಾಯಿತು.</p>.<p>ಎನ್.ಸಿ.ಸಿ. ಸಂಯೋಜಕ ಟಿ. ಮಣಿಕಂಠ, ವಿದ್ಯಾರ್ಥಿ ಸ್ವಯಂಸೇವಕ ಧೀಮಂತ್, ಚಿರಂತನ್, ಎಂ.ಎಸ್. ಹರ್ಷಿತಾ, ಬಿ. ಕಾರ್ತಿಕ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.</p>.<p>ಕಾಲೇಜಿನ ಪ್ರಾಂಶುಪಾಲೆ ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಸಲಹೆಗಾರ ಎಸ್.ಆರ್. ರಮೇಶ್, ಮೇಜರ್ ಬಿ.ಆರ್. ನಿಖಿಲ್, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್. ತಿಮ್ಮೇಗೌಡ, ಎನ್ಸಿಸಿ ಅಧಿಕಾರಿ ಪಿ.ಜಿ. ಪುಷ್ಪರಾಣಿ, ಸಹಾಯಕ ಪ್ರಾಧ್ಯಾಪಕ ಎನ್. ಸುನಿಲ್ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಶಿಕ್ಷಣ, ಸರ್ಕಾರಿ ಕೆಲಸದಲ್ಲಿ ಹಿಂದುಳಿದ ಹಾಗೂ ತಳ ವರ್ಗದವರಿಗೆ ಮೀಸಲಾತಿ ಸೌಲಭ್ಯ ನೀಡುವ ಮೂಲಕ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ ನೀಡಿದ್ದರು. ಅಂತೆಯೇ ಮೈಸೂರು ಗುಣಮಟ್ಟದ ಶಿಕ್ಷಣಕ್ಕೂ ಹೆಸರುವಾಸಿಯಾಗಿದೆ’ ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಬಣ್ಣಿಸಿದರು.</p>.<p>ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರದ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಹಾಜನ ಕಾಲೇಜು ಐತಿಹಾಸಿಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿರುವುದು ಅಭಿನಂದನೀಯ’ ಎಂದರು.</p>.<p>‘ಭಾರತ ಹಲವು ಜಾತಿ–ಧರ್ಮಗಳ ನಾಡು. ಇಲ್ಲಿನ ಸಂಸ್ಕೃತಿ–ಭಾಷೆ ವೈವಿಧ್ಯಮಯವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಸದಾ ಹೊಂದಿರಬೇಕು. ಭಾವೈಕ್ಯದಿಂದ ಕೂಡಿರಬೇಕು. ಯುವ ಜನತೆ ಸದಾ ಶಾಂತಿ, ಸೌಹಾರ್ದದಿಂದ ನಡೆದುಕೊಂಡಾಗ ಮಾತ್ರ ಸಶಕ್ತ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.</p>.<p>‘ಗುರು ದ್ರೋಣಾಚಾರ್ಯ ಎಜ್ಯುಕೇಟರ್ ಆಫ್ ದಿ ಇಯರ್– 2023’ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತೆ ಕ್ಯಾಪ್ಟನ್ ಇಂದ್ರಾಣಿ ಅವರನ್ನು ಸನ್ಮಾನಿಸಲಾಯಿತು.</p>.<p>ಎನ್.ಸಿ.ಸಿ. ಸಂಯೋಜಕ ಟಿ. ಮಣಿಕಂಠ, ವಿದ್ಯಾರ್ಥಿ ಸ್ವಯಂಸೇವಕ ಧೀಮಂತ್, ಚಿರಂತನ್, ಎಂ.ಎಸ್. ಹರ್ಷಿತಾ, ಬಿ. ಕಾರ್ತಿಕ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.</p>.<p>ಕಾಲೇಜಿನ ಪ್ರಾಂಶುಪಾಲೆ ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಸಲಹೆಗಾರ ಎಸ್.ಆರ್. ರಮೇಶ್, ಮೇಜರ್ ಬಿ.ಆರ್. ನಿಖಿಲ್, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್. ತಿಮ್ಮೇಗೌಡ, ಎನ್ಸಿಸಿ ಅಧಿಕಾರಿ ಪಿ.ಜಿ. ಪುಷ್ಪರಾಣಿ, ಸಹಾಯಕ ಪ್ರಾಧ್ಯಾಪಕ ಎನ್. ಸುನಿಲ್ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>