<p><strong>ಮೈಸೂರು</strong>: ‘ಮುಡಾದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ₹ 3ಸಾವಿರದಿಂದ ₹ 4ಸಾವಿರ ಕೋಟಿಯದ್ದಾಗಿದ್ದು, ಇದನ್ನು ತನಿಖೆ ಮಾಡಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯುವ ಮನಃಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.</p>.<p>ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಹಗರಣದಲ್ಲಿರುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಹಾಗೂ ನಿವೇಶನವನ್ನು ಮಾರಿದವರಾರೂ ಸಿಕ್ಕಿ ಬೀಳುವುದಿಲ್ಲ’ ಎಂದು ದೂರಿದರು.</p>.<p>‘ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರಿ ಎನ್ನುವುದಿಲ್ಲ. ಅದರೆ, 14 ನಿವೇಶನಗಳನ್ನು ಪಡೆದುಕೊಂಡ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಬೇಸರ ತರಿಸಿದೆ. ಅವರು ಭ್ರಷ್ಟಾಚಾರದ ಕಳಂಕ ಹೊತ್ತಿದ್ದನ್ನು ನಾನು ನೋಡಿಲ್ಲ. ಈ ನಿವೇಶನದ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ’ ಎಂದು ಹೇಳಿದರು.</p>.<p>‘ಅವರದ್ದು ತಪ್ಪೇ ಇಲ್ಲವೆಂದೇ ಭಾವಿಸೋಣ. ಆರೋಪ ಬಂದಾಗ ನಿವೇಶನಗಳನ್ನು ಒಪ್ಪಿಸಿ ತನಿಖೆ ಮಾಡಿಸಬೇಕಿತ್ತು. ಅದನ್ನ ಬಿಟ್ಟು ₹ 62 ಕೋಟಿ ಪರಿಹಾರ ಕೇಳುತ್ತಾರಲ್ಲ? ಹಗರಣಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ತನಿಖೆಯಿಂದ ಯಾರಿಗೂ ಏನೂ ಅಗುವುದಿಲ್ಲ. ಎಲ್ಲರೂ ಸೇಫ್ ಆಗಿರುತ್ತಾರೆ’ ಎಂದರು.</p>.<p>‘2019ರಲ್ಲಿ ವಿ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 7,500 ಸಾವಿರ ಖಾಲಿ ನಿವೇಶನಗಳ ಹಾರಾಜಿಗೆ ಮುಂದಾದರು. ಅಷ್ಟರಲ್ಲಿ ಅವರಿಗೆ ಗೇಟ್ ಪಾಸ್ ಸಿಕ್ಕಿತ್ತು. ಆಯುಕ್ತ ಕಾಂತರಾಜ್ಗೂ ಗೇಟ್ ಪಾಸ್ ಕೊಡಲಾಯಿತು. ಇದು ಮುಡಾದ ವ್ಯವಸ್ಥೆ. ಕಳೆದ ನಾಲ್ಕು ವರ್ಷಗಳಿಂದ ಈ ಹಗರಣ ನಡೆದಿದೆ’ ಎಂದು ಹೇಳಿದರು.</p>.<p>‘ಮುಖ್ಯಮಂತ್ರಿ ನಿವೇಶನಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸುತ್ತಾರೆ ಎಂದು ನಂಬಿದ್ದೆ. ಆದರೆ, ಹಾಗಾಗಲಿಲ್ಲ. ಇದು ನನಗೆ ಅವರ ಮೇಲಿದ್ದ ಅಭಿಮಾನ ಕಡಿಮೆಯಾಗಿದೆ. ಅವರಿಗೆ ದುಡ್ಡಿನ ಹಪಾಹಪಿ ಇಲ್ಲ ಎಂಬುದನ್ನು ನಾನು ಬೇರೆ ಪಕ್ಷದಲ್ಲಿದ್ದರೂ ಹೇಳಬಲ್ಲೆ. ಆದರೆ, ಈ ಪ್ರಕರಣದಲ್ಲಿ ದುಡ್ಡಿನ ವಿಚಾರವನ್ನು ಅವರು ಮಾತನಾಡಿದ್ದರಿಂದ ಬೇಸರವಾಗಿದೆ. ಬಿಜೆಪಿ ಆಡಳಿತದಲ್ಲೂ ಮುಡಾದಲ್ಲಿ ಮಣ್ಣು ತಿನ್ನುವ ಕೆಲಸವಾಗಿದೆ. ಅದೆಲ್ಲವನ್ನೂ ಸೇರಿಸಿ ತನಿಖೆ ಮಾಡಿಸಬೇಕಿತ್ತು. ಆದರೆ, ಈಗ ಏನಾಗಿದೆ ನೋಡಿ?’ ಎಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಮುಡಾದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ₹ 3ಸಾವಿರದಿಂದ ₹ 4ಸಾವಿರ ಕೋಟಿಯದ್ದಾಗಿದ್ದು, ಇದನ್ನು ತನಿಖೆ ಮಾಡಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯುವ ಮನಃಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.</p>.<p>ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಹಗರಣದಲ್ಲಿರುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಹಾಗೂ ನಿವೇಶನವನ್ನು ಮಾರಿದವರಾರೂ ಸಿಕ್ಕಿ ಬೀಳುವುದಿಲ್ಲ’ ಎಂದು ದೂರಿದರು.</p>.<p>‘ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರಿ ಎನ್ನುವುದಿಲ್ಲ. ಅದರೆ, 14 ನಿವೇಶನಗಳನ್ನು ಪಡೆದುಕೊಂಡ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಬೇಸರ ತರಿಸಿದೆ. ಅವರು ಭ್ರಷ್ಟಾಚಾರದ ಕಳಂಕ ಹೊತ್ತಿದ್ದನ್ನು ನಾನು ನೋಡಿಲ್ಲ. ಈ ನಿವೇಶನದ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ’ ಎಂದು ಹೇಳಿದರು.</p>.<p>‘ಅವರದ್ದು ತಪ್ಪೇ ಇಲ್ಲವೆಂದೇ ಭಾವಿಸೋಣ. ಆರೋಪ ಬಂದಾಗ ನಿವೇಶನಗಳನ್ನು ಒಪ್ಪಿಸಿ ತನಿಖೆ ಮಾಡಿಸಬೇಕಿತ್ತು. ಅದನ್ನ ಬಿಟ್ಟು ₹ 62 ಕೋಟಿ ಪರಿಹಾರ ಕೇಳುತ್ತಾರಲ್ಲ? ಹಗರಣಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ತನಿಖೆಯಿಂದ ಯಾರಿಗೂ ಏನೂ ಅಗುವುದಿಲ್ಲ. ಎಲ್ಲರೂ ಸೇಫ್ ಆಗಿರುತ್ತಾರೆ’ ಎಂದರು.</p>.<p>‘2019ರಲ್ಲಿ ವಿ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 7,500 ಸಾವಿರ ಖಾಲಿ ನಿವೇಶನಗಳ ಹಾರಾಜಿಗೆ ಮುಂದಾದರು. ಅಷ್ಟರಲ್ಲಿ ಅವರಿಗೆ ಗೇಟ್ ಪಾಸ್ ಸಿಕ್ಕಿತ್ತು. ಆಯುಕ್ತ ಕಾಂತರಾಜ್ಗೂ ಗೇಟ್ ಪಾಸ್ ಕೊಡಲಾಯಿತು. ಇದು ಮುಡಾದ ವ್ಯವಸ್ಥೆ. ಕಳೆದ ನಾಲ್ಕು ವರ್ಷಗಳಿಂದ ಈ ಹಗರಣ ನಡೆದಿದೆ’ ಎಂದು ಹೇಳಿದರು.</p>.<p>‘ಮುಖ್ಯಮಂತ್ರಿ ನಿವೇಶನಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸುತ್ತಾರೆ ಎಂದು ನಂಬಿದ್ದೆ. ಆದರೆ, ಹಾಗಾಗಲಿಲ್ಲ. ಇದು ನನಗೆ ಅವರ ಮೇಲಿದ್ದ ಅಭಿಮಾನ ಕಡಿಮೆಯಾಗಿದೆ. ಅವರಿಗೆ ದುಡ್ಡಿನ ಹಪಾಹಪಿ ಇಲ್ಲ ಎಂಬುದನ್ನು ನಾನು ಬೇರೆ ಪಕ್ಷದಲ್ಲಿದ್ದರೂ ಹೇಳಬಲ್ಲೆ. ಆದರೆ, ಈ ಪ್ರಕರಣದಲ್ಲಿ ದುಡ್ಡಿನ ವಿಚಾರವನ್ನು ಅವರು ಮಾತನಾಡಿದ್ದರಿಂದ ಬೇಸರವಾಗಿದೆ. ಬಿಜೆಪಿ ಆಡಳಿತದಲ್ಲೂ ಮುಡಾದಲ್ಲಿ ಮಣ್ಣು ತಿನ್ನುವ ಕೆಲಸವಾಗಿದೆ. ಅದೆಲ್ಲವನ್ನೂ ಸೇರಿಸಿ ತನಿಖೆ ಮಾಡಿಸಬೇಕಿತ್ತು. ಆದರೆ, ಈಗ ಏನಾಗಿದೆ ನೋಡಿ?’ ಎಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>