<p><strong>ರಾಯಚೂರು</strong>: ಲಾರಿಯೊಂದರಲ್ಲಿ ₹19.77 ಲಕ್ಷ ಮೌಲ್ಯದ 1200 ಅಕ್ಕಿ ಚೀಲಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸದೇ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಯರಗೇರಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಯಚೂರು-ಗದ್ವಾಲ್ ರಸ್ತೆ ಹಾಗೂ ಚಿಕ್ಕಸುಗೂರು ಗ್ರಾಮದ ಸಮೀಪದಲ್ಲಿರುವ ಎಂಆರ್ಎನ್ ಅಗ್ರೋ ಇಂಡಸ್ಟ್ರೀಸ್, ಪೂರ್ಣಸಾಯಿ, ಅನ್ನಪೂರ್ಣ, ಎಸ್ಎಲ್ಎನ್ ರೈಸ್ ಮಿಲ್ಗಳ 25 ಕೆ.ಜಿಯ ₹19.77 ಲಕ್ಷ ಮೌಲ್ಯದ 1200 ಅಕ್ಕಿ ಚೀಲಗಳನ್ನು ಲಾರಿಯಲ್ಲಿ ತುಂಬಿಕೊಂಡು ಜೂನ್ 26ರಂದು ಮೈಸೂರು ಹಾಗೂ ಮಳವಳ್ಳಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಮೈಸೂರು ಹಾಗೂ ಮಳವಳ್ಳಿಯಲ್ಲಿ ಅಕ್ಕಿಚೀಲಗಳನ್ನು ಇಳಿಸದೇ ಆರೋಪಿಗಳಾದ ಲಾರಿ ಚಾಲಕ ಮಂಜುನಾಥ ಜಿಗರಿ, ಕ್ಲೀನರ್ ಪರಶುರಾಮ ದಾದಾಪುರ ಪರಾರಿಯಾಗಿದ್ದರು.</p>.<p>ಆರೋಪಿಗಳಿಂದ ₹16 ಲಕ್ಷ ಮೌಲ್ಯದ 975 ಅಕ್ಕಿ ಚೀಲಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ₹20 ಲಕ್ಷ ಮೌಲ್ಯದ ಲಾರಿ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.</p>.<p>ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳಾದ ಕೆ.ಎಂ ಪ್ರಕಾಶ ದಾವಣಗೆರೆ, ಇಸ್ಮಾಯಿಲ್ ಖಾನ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<p>ಯರಗೇರಾ ಸಿಪಿಐ ನಿಂಗಪ್ಪ ಎನ್.ಆರ್ ನೇತೃತ್ವದಲ್ಲಿ ಪಿಎಸ್ಐಗಳಾದ ಅರುಣಕುಮಾರ ರಾಥೋಡ್, ಶಾಂತಮ್ಮ, ಅವಿನಾಶ ಕಾಂಬ್ಳೆ, ಇಡಪನೂರು ಎಎಸ್ಐ ರಂಗಣ್ಣ ಹಾಗೂ ಸಿಬ್ಬಂದಿ ಆದೇಶ, ಚಾಂದಪಾಷಾ, ಹನುಮಗೌಡ ಅವರನ್ನು ಒಳಗೊಂಡ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಲಾರಿಯೊಂದರಲ್ಲಿ ₹19.77 ಲಕ್ಷ ಮೌಲ್ಯದ 1200 ಅಕ್ಕಿ ಚೀಲಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸದೇ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಯರಗೇರಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಯಚೂರು-ಗದ್ವಾಲ್ ರಸ್ತೆ ಹಾಗೂ ಚಿಕ್ಕಸುಗೂರು ಗ್ರಾಮದ ಸಮೀಪದಲ್ಲಿರುವ ಎಂಆರ್ಎನ್ ಅಗ್ರೋ ಇಂಡಸ್ಟ್ರೀಸ್, ಪೂರ್ಣಸಾಯಿ, ಅನ್ನಪೂರ್ಣ, ಎಸ್ಎಲ್ಎನ್ ರೈಸ್ ಮಿಲ್ಗಳ 25 ಕೆ.ಜಿಯ ₹19.77 ಲಕ್ಷ ಮೌಲ್ಯದ 1200 ಅಕ್ಕಿ ಚೀಲಗಳನ್ನು ಲಾರಿಯಲ್ಲಿ ತುಂಬಿಕೊಂಡು ಜೂನ್ 26ರಂದು ಮೈಸೂರು ಹಾಗೂ ಮಳವಳ್ಳಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಮೈಸೂರು ಹಾಗೂ ಮಳವಳ್ಳಿಯಲ್ಲಿ ಅಕ್ಕಿಚೀಲಗಳನ್ನು ಇಳಿಸದೇ ಆರೋಪಿಗಳಾದ ಲಾರಿ ಚಾಲಕ ಮಂಜುನಾಥ ಜಿಗರಿ, ಕ್ಲೀನರ್ ಪರಶುರಾಮ ದಾದಾಪುರ ಪರಾರಿಯಾಗಿದ್ದರು.</p>.<p>ಆರೋಪಿಗಳಿಂದ ₹16 ಲಕ್ಷ ಮೌಲ್ಯದ 975 ಅಕ್ಕಿ ಚೀಲಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ₹20 ಲಕ್ಷ ಮೌಲ್ಯದ ಲಾರಿ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.</p>.<p>ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳಾದ ಕೆ.ಎಂ ಪ್ರಕಾಶ ದಾವಣಗೆರೆ, ಇಸ್ಮಾಯಿಲ್ ಖಾನ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<p>ಯರಗೇರಾ ಸಿಪಿಐ ನಿಂಗಪ್ಪ ಎನ್.ಆರ್ ನೇತೃತ್ವದಲ್ಲಿ ಪಿಎಸ್ಐಗಳಾದ ಅರುಣಕುಮಾರ ರಾಥೋಡ್, ಶಾಂತಮ್ಮ, ಅವಿನಾಶ ಕಾಂಬ್ಳೆ, ಇಡಪನೂರು ಎಎಸ್ಐ ರಂಗಣ್ಣ ಹಾಗೂ ಸಿಬ್ಬಂದಿ ಆದೇಶ, ಚಾಂದಪಾಷಾ, ಹನುಮಗೌಡ ಅವರನ್ನು ಒಳಗೊಂಡ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>