<p><strong>ರಾಯಚೂರು</strong>: ವಿದ್ಯುತ್ ಗ್ರಾಹಕರು ಪಾವತಿಸಿದ ₹22 ಲಕ್ಷ ದುರ್ಬಳಕೆ ವಿಷಯದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಭಾರ ಲೆಕ್ಕಾಧಿಕಾರಿ ಹಾಗೂ ಮೂವರು ಸಹಾಯಕರನ್ನು ಬಳ್ಳಾರಿ ವಲಯದ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ಅಮಾನತುಗೊಳಿಸಿದ್ದಾರೆ.</p>.<p>ಜೆಸ್ಕಾಂ ರಾಯಚೂರಿನ ಗ್ರಾಮೀಣ ಉಪ ವಿಭಾಗದ ಕಂದಾಯ ಶಾಖೆಯ ಪ್ರಭಾರ ಲೆಕ್ಕಾಧಿಕಾರಿ ಬಸಮ್ಮ, ಸಹಾಯಕರಾದ ಸುಧಾ, ಪರ್ವೀನಾ ಹಾಗೂ ತಾಯಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.</p>.<p>ಯಾಪದಿನ್ನಿ ಹಾಗೂ ಚಂದ್ರಬಂಡಾ ಭಾಗದ ಗ್ರಾಹಕರಿಂದ ಸಂಗ್ರಹವಾದ ₹22 ಲಕ್ಷ ಹಣ ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಜೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಪವನ್ಸಿಂಗ್ ಅವರು ಕಚೇರಿ ಖಾತೆಗೆ ₹22 ಲಕ್ಷ ಪಾವತಿಯಾಗದಿರುವ ಬಗ್ಗೆ ಮೇಲಾಧಿಕಾರಿಗೆ ವರದಿ ನೀಡಿದ್ದರು.</p>.<p>ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ದಿನಗೂಲಿ ನೌಕರರೊಬ್ಬರ ಮೂಲಕ ಕಂಪ್ಯೂಟರ್ನಲ್ಲಿ ದಾಖಲೆ ಅಪ್ಲೋಡ್ ಮಾಡಿಸುತ್ತಿದ್ದರು. ಮೂರು ವರ್ಷಗಳಿಂದ ಈ ರೀತಿಯಾಗಿ ಕೆಲಸ ಮಾಡಿರುವ ದೂರುಗಳು ಇವೆ. ಜೆಸ್ಕಾಂ ಅಧಿಕಾರಿಗಳು ಈ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ವಿದ್ಯುತ್ ಗ್ರಾಹಕರು ಪಾವತಿಸಿದ ₹22 ಲಕ್ಷ ದುರ್ಬಳಕೆ ವಿಷಯದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಭಾರ ಲೆಕ್ಕಾಧಿಕಾರಿ ಹಾಗೂ ಮೂವರು ಸಹಾಯಕರನ್ನು ಬಳ್ಳಾರಿ ವಲಯದ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ಅಮಾನತುಗೊಳಿಸಿದ್ದಾರೆ.</p>.<p>ಜೆಸ್ಕಾಂ ರಾಯಚೂರಿನ ಗ್ರಾಮೀಣ ಉಪ ವಿಭಾಗದ ಕಂದಾಯ ಶಾಖೆಯ ಪ್ರಭಾರ ಲೆಕ್ಕಾಧಿಕಾರಿ ಬಸಮ್ಮ, ಸಹಾಯಕರಾದ ಸುಧಾ, ಪರ್ವೀನಾ ಹಾಗೂ ತಾಯಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.</p>.<p>ಯಾಪದಿನ್ನಿ ಹಾಗೂ ಚಂದ್ರಬಂಡಾ ಭಾಗದ ಗ್ರಾಹಕರಿಂದ ಸಂಗ್ರಹವಾದ ₹22 ಲಕ್ಷ ಹಣ ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಜೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಪವನ್ಸಿಂಗ್ ಅವರು ಕಚೇರಿ ಖಾತೆಗೆ ₹22 ಲಕ್ಷ ಪಾವತಿಯಾಗದಿರುವ ಬಗ್ಗೆ ಮೇಲಾಧಿಕಾರಿಗೆ ವರದಿ ನೀಡಿದ್ದರು.</p>.<p>ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ದಿನಗೂಲಿ ನೌಕರರೊಬ್ಬರ ಮೂಲಕ ಕಂಪ್ಯೂಟರ್ನಲ್ಲಿ ದಾಖಲೆ ಅಪ್ಲೋಡ್ ಮಾಡಿಸುತ್ತಿದ್ದರು. ಮೂರು ವರ್ಷಗಳಿಂದ ಈ ರೀತಿಯಾಗಿ ಕೆಲಸ ಮಾಡಿರುವ ದೂರುಗಳು ಇವೆ. ಜೆಸ್ಕಾಂ ಅಧಿಕಾರಿಗಳು ಈ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>