<p>ರಿಪ್ಪನ್ ಪೇಟೆ: ಸಂಘರ್ಷ ರಹಿತ ಜೀವನದಿಂದ ವಿಶ್ವವನ್ನು ಶಾಂತಿಯೆಡೆಗೆ ಕೊಂಡೊಯ್ಯಬಹುದು ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಮಠದಲ್ಲಿ ಈಚೆಗೆ ನಡೆದ ಶ್ರೀಗಳ ಸಿಂಹಾಸನರೋಹಣ ಕಾರ್ಯಕ್ರಮದ ನಂತರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಪ್ರತಿಯೊಂದು ಜೀವರಾಶಿಗಳಲ್ಲಿ ದೈವತ್ವವನ್ನು ಕಾಣುವ ಮೂಲಕ ಪ್ರತಿಯೊಬ್ಬರು ಸಾತ್ವಿಕ ಮನೋಭಾವ ಹೊಂದಬೇಕು ಎಂಬುದು ಜೈನ ಧರ್ಮದ ಸಿದ್ಧಾಂತ. ಪ್ರತಿಯೊಂದು ಧರ್ಮವೂ ತನ್ನದೇ ಆಚಾರ, ವಿಚಾರಗಳ ಚೌಕಟ್ಟನ್ನು ನಿರ್ಮಿಸಿಕೊಂಡಿವೆ. ಆದರೆ ಎಲ್ಲಿಯೂ ಸಂಘರ್ಷಕ್ಕೆ ಅವಕಾಶವಿಲ್ಲ ಎಂದರು. </p>.<p>‘ಶಾಂತಿ, ಸಹನೆ, ಪ್ರೀತಿ ವಾತ್ಸಲ್ಯ, ಸೌಹಾರ್ದತೆಯ ಸಂದೇಶವನ್ನು ಸಾಧು, ಸಂತರು, ಸನ್ಮಾರ್ಗಿಗಳು ಜಗತ್ತಿನಲ್ಲಿ ಬಿಟ್ಟು ಹೋಗಿದ್ದಾರೆ. ಅಂತಹ ವಿಚಾರಧಾರೆಗಳನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವುದರಲ್ಲಿ ನಾವು ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೃದಯದಲ್ಲಿ ಚಿಂತನ-ಮಂಥನ ನಡೆಸಬೇಕು. ಆಗ ವಿಶ್ವ ಶಾಂತಿಧಾಮವಾಗಲು ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿಪ್ಪನ್ ಪೇಟೆ: ಸಂಘರ್ಷ ರಹಿತ ಜೀವನದಿಂದ ವಿಶ್ವವನ್ನು ಶಾಂತಿಯೆಡೆಗೆ ಕೊಂಡೊಯ್ಯಬಹುದು ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಮಠದಲ್ಲಿ ಈಚೆಗೆ ನಡೆದ ಶ್ರೀಗಳ ಸಿಂಹಾಸನರೋಹಣ ಕಾರ್ಯಕ್ರಮದ ನಂತರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಪ್ರತಿಯೊಂದು ಜೀವರಾಶಿಗಳಲ್ಲಿ ದೈವತ್ವವನ್ನು ಕಾಣುವ ಮೂಲಕ ಪ್ರತಿಯೊಬ್ಬರು ಸಾತ್ವಿಕ ಮನೋಭಾವ ಹೊಂದಬೇಕು ಎಂಬುದು ಜೈನ ಧರ್ಮದ ಸಿದ್ಧಾಂತ. ಪ್ರತಿಯೊಂದು ಧರ್ಮವೂ ತನ್ನದೇ ಆಚಾರ, ವಿಚಾರಗಳ ಚೌಕಟ್ಟನ್ನು ನಿರ್ಮಿಸಿಕೊಂಡಿವೆ. ಆದರೆ ಎಲ್ಲಿಯೂ ಸಂಘರ್ಷಕ್ಕೆ ಅವಕಾಶವಿಲ್ಲ ಎಂದರು. </p>.<p>‘ಶಾಂತಿ, ಸಹನೆ, ಪ್ರೀತಿ ವಾತ್ಸಲ್ಯ, ಸೌಹಾರ್ದತೆಯ ಸಂದೇಶವನ್ನು ಸಾಧು, ಸಂತರು, ಸನ್ಮಾರ್ಗಿಗಳು ಜಗತ್ತಿನಲ್ಲಿ ಬಿಟ್ಟು ಹೋಗಿದ್ದಾರೆ. ಅಂತಹ ವಿಚಾರಧಾರೆಗಳನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವುದರಲ್ಲಿ ನಾವು ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೃದಯದಲ್ಲಿ ಚಿಂತನ-ಮಂಥನ ನಡೆಸಬೇಕು. ಆಗ ವಿಶ್ವ ಶಾಂತಿಧಾಮವಾಗಲು ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>