‘ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಓಬಳನರಸಯ್ಯ ಎಂಬುವರು ಕಳೆದ 20 ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದರು. ಆಯುಷ್ಮಾನ್ ಯೋಜನೆಯಡಿ ಪರಿಕರ ಸರಬರಾಜು ಮಾಡುವ ಟೆಂಡರ್ ಮುಗಿದಿದ್ದು, ಹೊರಗಡೆಯಿಂದ ಪರಿಕರ ತರಿಸಬೇಕು. ಅದಕ್ಕಾಗಿ ₹10 ಸಾವಿರ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ರೋಗಿಯಿಂದ ಮುಂಗಡವಾಗಿ ₹2 ಸಾವಿರ ಪಡೆದಿದ್ದರು’ ಎನ್ನಲಾಗಿದೆ.