<p><strong>ಗುಬ್ಬಿ:</strong> ಭರಣಿ ಮಳೆಯ ಕೊನೆಯ ದಿನವಾದ ಶುಕ್ರವಾರ ತಾಲ್ಲೂಕಿನೆಲ್ಲೆಡೆ ಉತ್ತಮವಾದ ಮಳೆಯಾಗುವ ಮೂಲಕ ಜನರು ನಿಟ್ಟುಸಿರು ಬಿಡುವಂತಾಗಿದೆ.</p>.<p>ಮಳೆ ಇಲ್ಲದೆ ಬೇಸತ್ತಿದ್ದ ರೈತರಿಗೆ ರಾತ್ರಿ ಸುರಿದ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ಕಳೆದ ವಾರದಿಂದ ಜಿಲ್ಲೆಯ ಅನೇಕ ಕಡೆ ಮಳೆಯಾಗುತ್ತಿದ್ದರೂ, ತಾಲ್ಲೂಕಿನಲ್ಲಿ ಮಳೆಯಾಗಿರಲಿಲ್ಲ. ತೀವ್ರ ಬರದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿತ್ತು.</p>.<p>ಹಲವೆಡೆ ದನ, ಕರುಗಳಿಗೆ ಕುಡಿಯಲು ಕೆರೆ-ಕಟ್ಟೆಗಳಲ್ಲಿ ಸ್ವಲ್ಪ ನೀರು ಬಂದಿದ್ದರೆ, ತೋಟಗಳಲ್ಲಿಯೂ ನೀರು ನಿಂತಿರುವುದು ರೈತರಿಗೆ ಸಮಾಧಾನ ತಂದಿದೆ. ಮಳೆ ಇಲ್ಲದೆ ಜಾನುವಾರಗಳ ಮೇವು, ತೆಂಗು, ಅಡಿಕೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತರು ಈಗ ಕೊಂಚ ನಿರಾಳರಾಗಿದ್ದಾರೆ.</p>.<p>ಮಳೆಬಿದ್ದ ರಭಸದಿಂದಾಗಿ ಬೆಣಚಿಗೆರೆ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬೆಸ್ಕಾಂ ತಕ್ಷಣ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ನಿಟ್ಟೂರು-ಸಂಪಿಗೆ ರಸ್ತೆಯಲ್ಲಿ ಮರ ಬಡಸಮೇತ ಮುರಿದು ಬಿದ್ದು ಸ್ವಲ್ಪಕಾಲ ಸಂಚಾರಕ್ಕೆ ತೊಂದರೆಯಾಗಿತ್ತು.</p>.<p>‘ಮಳೆ ಇಲ್ಲದೆ ಹತಾಶರಾಗಿದ್ದ ನಮಗೆ ಕಳೆದ ರಾತ್ರಿ ಸುರಿದಿರುವ ಹದಮಳೆ ನೆಮ್ಮದಿ ತಂದಿದೆ’ ಎಂದು ರೈತ ಶೇಖರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ಭರಣಿ ಮಳೆಯ ಕೊನೆಯ ದಿನವಾದ ಶುಕ್ರವಾರ ತಾಲ್ಲೂಕಿನೆಲ್ಲೆಡೆ ಉತ್ತಮವಾದ ಮಳೆಯಾಗುವ ಮೂಲಕ ಜನರು ನಿಟ್ಟುಸಿರು ಬಿಡುವಂತಾಗಿದೆ.</p>.<p>ಮಳೆ ಇಲ್ಲದೆ ಬೇಸತ್ತಿದ್ದ ರೈತರಿಗೆ ರಾತ್ರಿ ಸುರಿದ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ಕಳೆದ ವಾರದಿಂದ ಜಿಲ್ಲೆಯ ಅನೇಕ ಕಡೆ ಮಳೆಯಾಗುತ್ತಿದ್ದರೂ, ತಾಲ್ಲೂಕಿನಲ್ಲಿ ಮಳೆಯಾಗಿರಲಿಲ್ಲ. ತೀವ್ರ ಬರದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿತ್ತು.</p>.<p>ಹಲವೆಡೆ ದನ, ಕರುಗಳಿಗೆ ಕುಡಿಯಲು ಕೆರೆ-ಕಟ್ಟೆಗಳಲ್ಲಿ ಸ್ವಲ್ಪ ನೀರು ಬಂದಿದ್ದರೆ, ತೋಟಗಳಲ್ಲಿಯೂ ನೀರು ನಿಂತಿರುವುದು ರೈತರಿಗೆ ಸಮಾಧಾನ ತಂದಿದೆ. ಮಳೆ ಇಲ್ಲದೆ ಜಾನುವಾರಗಳ ಮೇವು, ತೆಂಗು, ಅಡಿಕೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತರು ಈಗ ಕೊಂಚ ನಿರಾಳರಾಗಿದ್ದಾರೆ.</p>.<p>ಮಳೆಬಿದ್ದ ರಭಸದಿಂದಾಗಿ ಬೆಣಚಿಗೆರೆ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬೆಸ್ಕಾಂ ತಕ್ಷಣ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ನಿಟ್ಟೂರು-ಸಂಪಿಗೆ ರಸ್ತೆಯಲ್ಲಿ ಮರ ಬಡಸಮೇತ ಮುರಿದು ಬಿದ್ದು ಸ್ವಲ್ಪಕಾಲ ಸಂಚಾರಕ್ಕೆ ತೊಂದರೆಯಾಗಿತ್ತು.</p>.<p>‘ಮಳೆ ಇಲ್ಲದೆ ಹತಾಶರಾಗಿದ್ದ ನಮಗೆ ಕಳೆದ ರಾತ್ರಿ ಸುರಿದಿರುವ ಹದಮಳೆ ನೆಮ್ಮದಿ ತಂದಿದೆ’ ಎಂದು ರೈತ ಶೇಖರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>