<p><strong>ತುಮಕೂರು</strong>: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ತಾಲ್ಲೂಕಿನ ಬೀರನಕಲ್ಲು ಗ್ರಾಮದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಗ್ರಾಮೀಣ ಸುಗ್ಗಿ ರಂಗೋತ್ಸವ’ ಯಶಸ್ವಿಯಾಗಿ ನೆರವೇರಿತು.</p>.<p>ಮೊದಲಿಗೆ ರಂಗ ಸೊಗಡು ಕಲಾ ಟ್ರಸ್ಟ್ ವತಿಯಿಂದ ತತ್ವಪದ ಗಾಯನ ನೆರವೇರಿತು. ನಂತರ ಶಿವಕುಮಾರ್ ತಿಮ್ಮಲಾಪುರ ನಿರ್ದೇಶನದ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ಮತ್ತು ಅನುರಾಗ್ ಭೀಮಸಂದ್ರ ನಿರ್ದೇಶನದ ಶಿವರಾಮ ಕಾರಂತರ ‘ಹೊಟ್ಟೆಯ ಹಾಡು’ ನಾಟಕಗಳನ್ನು ಪ್ರದರ್ಶಿಸಲಾಯಿತು.</p>.<p>ಬೀರನಕಲ್ಲು ಗ್ರಾ.ಪಂ ಸದಸ್ಯ ಸತೀಶ್, ‘ರಂಗಭೂಮಿ ಒಂದು ಪ್ರಬಲ ಮಾಧ್ಯಮ. ವಿಜ್ಞಾನ, ತಂತ್ರಜ್ಞಾನ ಇಲ್ಲದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಒಂದು ಸಂದೇಶವನ್ನು ಮತ್ತೊಬ್ಬರಿಗೆ ತಲುಪಿಸಲು ರಂಗಭೂಮಿ ನೆರವಾಗಿದೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ’ ಎಂದರು.</p>.<p>ರಂಗಭೂಮಿ ಕಲಾವಿದ ನಂಜಪ್ಪಶೆಟ್ಟಿ, ‘ಶಾಲಾ–ಕಾಲೇಜು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಆಸಕ್ತಿ ಕೊಡಬೇಕು. ಕಲೆ, ಸಾಹಿತ್ಯ, ನೃತ್ಯ, ಗಾಯನದತ್ತ ಗಮನಹರಿಸಬೇಕು. ಇದು ಸಮಗ್ರ ವಿಕಾಸದ ಜತೆಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಸಲಹೆ ಮಾಡಿದರು.</p>.<p>ಸ್ವಾಂದೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷ ಲೋಕೇಶ್, ಸದಸ್ಯರಾದ ಮಂಗಳಾ ಪ್ರಕಾಶ್, ಸಾವಿತ್ರಮ್ಮ ಹನುಮಯ್ಯ, ಮುಖಂಡರಾದ ಬಿ.ಜಿ.ರವಿಕುಮಾರ್, ಪಟೇಲ್ ಪ್ರಕಾಶ್, ಪಣಗಾರ್ ಹನುಮಂತ ರಾಯಪ್ಪ, ಸಿದ್ದಲಿಂಗಪ್ಪ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಾಂತರಾಜು, ಎನ್.ಸಿದ್ದರಾಜು ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ತಾಲ್ಲೂಕಿನ ಬೀರನಕಲ್ಲು ಗ್ರಾಮದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಗ್ರಾಮೀಣ ಸುಗ್ಗಿ ರಂಗೋತ್ಸವ’ ಯಶಸ್ವಿಯಾಗಿ ನೆರವೇರಿತು.</p>.<p>ಮೊದಲಿಗೆ ರಂಗ ಸೊಗಡು ಕಲಾ ಟ್ರಸ್ಟ್ ವತಿಯಿಂದ ತತ್ವಪದ ಗಾಯನ ನೆರವೇರಿತು. ನಂತರ ಶಿವಕುಮಾರ್ ತಿಮ್ಮಲಾಪುರ ನಿರ್ದೇಶನದ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ಮತ್ತು ಅನುರಾಗ್ ಭೀಮಸಂದ್ರ ನಿರ್ದೇಶನದ ಶಿವರಾಮ ಕಾರಂತರ ‘ಹೊಟ್ಟೆಯ ಹಾಡು’ ನಾಟಕಗಳನ್ನು ಪ್ರದರ್ಶಿಸಲಾಯಿತು.</p>.<p>ಬೀರನಕಲ್ಲು ಗ್ರಾ.ಪಂ ಸದಸ್ಯ ಸತೀಶ್, ‘ರಂಗಭೂಮಿ ಒಂದು ಪ್ರಬಲ ಮಾಧ್ಯಮ. ವಿಜ್ಞಾನ, ತಂತ್ರಜ್ಞಾನ ಇಲ್ಲದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಒಂದು ಸಂದೇಶವನ್ನು ಮತ್ತೊಬ್ಬರಿಗೆ ತಲುಪಿಸಲು ರಂಗಭೂಮಿ ನೆರವಾಗಿದೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ’ ಎಂದರು.</p>.<p>ರಂಗಭೂಮಿ ಕಲಾವಿದ ನಂಜಪ್ಪಶೆಟ್ಟಿ, ‘ಶಾಲಾ–ಕಾಲೇಜು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಆಸಕ್ತಿ ಕೊಡಬೇಕು. ಕಲೆ, ಸಾಹಿತ್ಯ, ನೃತ್ಯ, ಗಾಯನದತ್ತ ಗಮನಹರಿಸಬೇಕು. ಇದು ಸಮಗ್ರ ವಿಕಾಸದ ಜತೆಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಸಲಹೆ ಮಾಡಿದರು.</p>.<p>ಸ್ವಾಂದೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷ ಲೋಕೇಶ್, ಸದಸ್ಯರಾದ ಮಂಗಳಾ ಪ್ರಕಾಶ್, ಸಾವಿತ್ರಮ್ಮ ಹನುಮಯ್ಯ, ಮುಖಂಡರಾದ ಬಿ.ಜಿ.ರವಿಕುಮಾರ್, ಪಟೇಲ್ ಪ್ರಕಾಶ್, ಪಣಗಾರ್ ಹನುಮಂತ ರಾಯಪ್ಪ, ಸಿದ್ದಲಿಂಗಪ್ಪ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಾಂತರಾಜು, ಎನ್.ಸಿದ್ದರಾಜು ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>