‘17 ವರ್ಷದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದೆ, ಈಗ ಕಾಯಂ ಮಾಡಲಾಗಿದೆ. ಇನ್ನೂ 30 ವರ್ಷ ಸೇವೆ ಸಲ್ಲಿಸಬಹುದು. ನಮ್ಮ ಶ್ರಮಕ್ಕೆ ಫಲ ದೊರೆತಿದೆ. ಇದು ನಿರಂತರ ಹೋರಾಟಕ್ಕೆ ಸಂದ ಜಯ. ಸರ್ಕಾರ ಮುಂದಿನ ಜೀವನಕ್ಕೆ ಭದ್ರತೆ ಒದಗಿಸಿದೆ. ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ’ ಎಂದು ಎನ್.ಶಿವಕುಮಾರ್ ಅವರು ಪಾಲಿಕೆಯ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.