ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಕೋಚ್‌ಗಳಿಲ್ಲದೆ ಬಳಲಿದ ಕ್ರೀಡಾ ಕ್ಷೇತ್ರ

Published : 24 ಮೇ 2024, 5:30 IST
Last Updated : 24 ಮೇ 2024, 5:30 IST
ಫಾಲೋ ಮಾಡಿ
Comments
ವಾಲಿಬಾಲ್‌, ಫುಟ್‌ಬಾಲ್‌ ತರಬೇತುದಾರರಿಲ್ಲ ಉಪಯೋಗಕ್ಕೆ ಬಾರದ ಫುಟ್‌ಬಾಲ್‌ ಮೈದಾನ ಕ್ರೀಡಾಕೂಟ ಆಯೋಜನೆಗೆ ನಿರುತ್ಸಾಹ
ವಾಲಿವಾಲ್‌ ಅಂಕಣ ಅವೈಜ್ಞಾನಿಕ 
ಜಿಲ್ಲಾ ಕ್ರೀಡಾಂಗಣ ಮುಂಭಾಗದ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವಾಲಿಬಾಲ್‌ ಅಂಕಣ ಅವೈಜ್ಞಾನಿಕವಾಗಿದ್ದು ಈವರೆಗೆ ಒಂದೇ ಒಂದು ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಿಲ್ಲ. ಸ್ಮಾರ್ಟ್‌ ಸಿಟಿ ಕ್ರೀಡಾ ಇಲಾಖೆ ಅಧಿಕಾರಿಗಳು ಮುಂದಾಲೋಚನೆ ಇಲ್ಲದೆ ಅಂಕಣ ಸಿದ್ಧಪಡಿಸಿದ್ದಾರೆ. ಸಿಮೆಂಟ್‌ನಿಂದ ವಾಲಿಬಾಲ್ ಅಂಕಣ ನಿರ್ಮಿಸಿದ್ದು ಅಭ್ಯಾಸ ಮಾಡುವುದು ಕಷ್ಟಕರವಾಗುತ್ತಿದೆ. ವಾಲಿಬಾಲ್‌ಗೆ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಒಂದು ಕ್ರೀಡಾಕೂಟ ಆಯೋಜಿಸಲು ಕ್ರೀಡಾ ಇಲಾಖೆಗೆ ಸಾಧ್ಯವಾಗಿಲ್ಲ. ‘ದಸರಾ ಕ್ರೀಡಾಕೂಟದ ಸಮಯದಲ್ಲಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಪಂದ್ಯಗಳನ್ನು ನಡೆಸುತ್ತಾರೆ. ವಾಲಿಬಾಲ್‌ ಅಂಕಣ ಇದ್ದರೂ ಬಳಕೆಗೆ ಬರುತ್ತಿಲ್ಲ’ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT