ವಾಲಿವಾಲ್ ಅಂಕಣ ಅವೈಜ್ಞಾನಿಕ
ಜಿಲ್ಲಾ ಕ್ರೀಡಾಂಗಣ ಮುಂಭಾಗದ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವಾಲಿಬಾಲ್ ಅಂಕಣ ಅವೈಜ್ಞಾನಿಕವಾಗಿದ್ದು ಈವರೆಗೆ ಒಂದೇ ಒಂದು ವಾಲಿಬಾಲ್ ಪಂದ್ಯಾವಳಿ ಆಯೋಜಿಸಿಲ್ಲ. ಸ್ಮಾರ್ಟ್ ಸಿಟಿ ಕ್ರೀಡಾ ಇಲಾಖೆ ಅಧಿಕಾರಿಗಳು ಮುಂದಾಲೋಚನೆ ಇಲ್ಲದೆ ಅಂಕಣ ಸಿದ್ಧಪಡಿಸಿದ್ದಾರೆ. ಸಿಮೆಂಟ್ನಿಂದ ವಾಲಿಬಾಲ್ ಅಂಕಣ ನಿರ್ಮಿಸಿದ್ದು ಅಭ್ಯಾಸ ಮಾಡುವುದು ಕಷ್ಟಕರವಾಗುತ್ತಿದೆ. ವಾಲಿಬಾಲ್ಗೆ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಒಂದು ಕ್ರೀಡಾಕೂಟ ಆಯೋಜಿಸಲು ಕ್ರೀಡಾ ಇಲಾಖೆಗೆ ಸಾಧ್ಯವಾಗಿಲ್ಲ. ‘ದಸರಾ ಕ್ರೀಡಾಕೂಟದ ಸಮಯದಲ್ಲಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪಂದ್ಯಗಳನ್ನು ನಡೆಸುತ್ತಾರೆ. ವಾಲಿಬಾಲ್ ಅಂಕಣ ಇದ್ದರೂ ಬಳಕೆಗೆ ಬರುತ್ತಿಲ್ಲ’ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.