ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇ 2ರಿಂದ 31ರ ವರೆಗೆ ಉಚಿತವಾಗಿ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
‘ಭಯ ಬೇಡ-ಮುಂಜಾಗ್ರತೆ ಇರಲಿ’ ಎಂಬ ಘೋಷವಾಕ್ಯದೊಂದಿಗೆ ತಜ್ಞ ವೈದ್ಯರಿಂದ ಮಾಸಿಕ ಶಿಬಿರ ಆಯೋಜಿಸಲಾಗಿದೆ. ಚರ್ಮದಲ್ಲಿ ಗಡ್ಡೆ ಅಥವಾ ಊತ, ನೋವು, ಆಯಾಸ, ರಕ್ತಸ್ರಾವ, ನಿರಂತರ ಕೆಮ್ಮು, ಗಂಟಲಲ್ಲಿ ನುಂಗಲು ತೊಂದರೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಆಸಕ್ತರು ಮೊ.9886858553 ಸಂಪರ್ಕಿಸಬಹುದು ಎಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್ ತಿಳಿಸಿದ್ದಾರೆ.