<p><strong>ತುಮಕೂರು: ‘</strong>ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರದಲ್ಲಿ ಪರೀಕ್ಷೆಯಲ್ಲಿ ಅತ್ಯಂತ ಕಠಿಣ ಎನಿಸುವ ಗಣಿತ, ವಿಜ್ಞಾನ ವಿಷಯಗಳ ಕುರಿತು ತಜ್ಞರು ವಿದ್ಯಾರ್ಥಿಗಳ ಆತಂಕ ದೂರ ಮಾಡಿದರು.</p>.<p>ವಿಜ್ಞಾನ ವಿಷಯದ ಬಗ್ಗೆ ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಟಿ.ಜಿ.ಜಗದೀಶ್ ಕುಮಾರ್, ಗಣಿತ ವಿಷಯದ ಬಗ್ಗೆ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎ.ಉಮಾಮಾಹೇಶ್ ತಿಳಿಸಿಕೊಟ್ಟರು.</p>.<p>ವಿಜ್ಞಾನ ವಿಚಾರ– ಸಲಹೆ</p>.<p>* ಚಿತ್ರಗಳ ಮಾದರಿ, ಭಾಗಗಳು, ಕಾರ್ಯ, ಆಕಾರದ ಬಗ್ಗೆ ಓದಿಕೊಳ್ಳಬೇಕು</p>.<p>* ಮುಖ್ಯವಾದ ವ್ಯಾಖ್ಯಾನ, ಅನುಕೂಲ– ಅನಾನುಕೂಲ, ವ್ಯತ್ಯಾಸ, ಮಾದರಿಗಳ ಅಧ್ಯಯನ ಮಾಡಬೇಕು</p>.<p>* ರೇಖಾಚಿತ್ರ, ಅವುಗಳ ಮಾದರಿ, ವಿನ್ಯಾಸ, ಸಂರಚನೆಯ ಸಿದ್ಧಾಂತ, ಪ್ರಯೋಗದ ವಿಧಾನಗಳ ಕಲಿಕೆಗೆ ಒತ್ತು ನೀಡಬೇಕು</p>.<p>ಗಣಿತ ವಿಚಾರ– ಸಲಹೆ</p>.<p>* ಪ್ರಮೇಯಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು</p>.<p>* ಲೆಕ್ಕ ಬಿಡಿಸುವ ಸೂತ್ರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು</p>.<p>* ಶೇ 50ರಷ್ಟು ಪ್ರಶ್ನೆಗಳಿಗೆ ಪ್ರಮೇಯ ಹಾಗೂ ಸೂತ್ರಗಳನ್ನು ಕಡ್ಡಾಯವಾಗಿ ಬರೆಯಬೇಕು</p>.<p>* ಅರ್ಧ ಉತ್ತರ ಬರೆದರೂ ಅದಕ್ಕೆ ಕನಿಷ್ಠ ಅಂಕ ನೀಡುತ್ತಾರೆ, ಅದರ ಅರಿವಿರಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: ‘</strong>ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರದಲ್ಲಿ ಪರೀಕ್ಷೆಯಲ್ಲಿ ಅತ್ಯಂತ ಕಠಿಣ ಎನಿಸುವ ಗಣಿತ, ವಿಜ್ಞಾನ ವಿಷಯಗಳ ಕುರಿತು ತಜ್ಞರು ವಿದ್ಯಾರ್ಥಿಗಳ ಆತಂಕ ದೂರ ಮಾಡಿದರು.</p>.<p>ವಿಜ್ಞಾನ ವಿಷಯದ ಬಗ್ಗೆ ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಟಿ.ಜಿ.ಜಗದೀಶ್ ಕುಮಾರ್, ಗಣಿತ ವಿಷಯದ ಬಗ್ಗೆ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎ.ಉಮಾಮಾಹೇಶ್ ತಿಳಿಸಿಕೊಟ್ಟರು.</p>.<p>ವಿಜ್ಞಾನ ವಿಚಾರ– ಸಲಹೆ</p>.<p>* ಚಿತ್ರಗಳ ಮಾದರಿ, ಭಾಗಗಳು, ಕಾರ್ಯ, ಆಕಾರದ ಬಗ್ಗೆ ಓದಿಕೊಳ್ಳಬೇಕು</p>.<p>* ಮುಖ್ಯವಾದ ವ್ಯಾಖ್ಯಾನ, ಅನುಕೂಲ– ಅನಾನುಕೂಲ, ವ್ಯತ್ಯಾಸ, ಮಾದರಿಗಳ ಅಧ್ಯಯನ ಮಾಡಬೇಕು</p>.<p>* ರೇಖಾಚಿತ್ರ, ಅವುಗಳ ಮಾದರಿ, ವಿನ್ಯಾಸ, ಸಂರಚನೆಯ ಸಿದ್ಧಾಂತ, ಪ್ರಯೋಗದ ವಿಧಾನಗಳ ಕಲಿಕೆಗೆ ಒತ್ತು ನೀಡಬೇಕು</p>.<p>ಗಣಿತ ವಿಚಾರ– ಸಲಹೆ</p>.<p>* ಪ್ರಮೇಯಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು</p>.<p>* ಲೆಕ್ಕ ಬಿಡಿಸುವ ಸೂತ್ರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು</p>.<p>* ಶೇ 50ರಷ್ಟು ಪ್ರಶ್ನೆಗಳಿಗೆ ಪ್ರಮೇಯ ಹಾಗೂ ಸೂತ್ರಗಳನ್ನು ಕಡ್ಡಾಯವಾಗಿ ಬರೆಯಬೇಕು</p>.<p>* ಅರ್ಧ ಉತ್ತರ ಬರೆದರೂ ಅದಕ್ಕೆ ಕನಿಷ್ಠ ಅಂಕ ನೀಡುತ್ತಾರೆ, ಅದರ ಅರಿವಿರಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>