ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಹಳ್ಳಿಯ ಚಿತ್ರ ಕಟ್ಟಿಕೊಟ್ಟ ಸಿರಿಧಾನ್ಯ ಹಬ್ಬ

Published : 31 ಡಿಸೆಂಬರ್ 2023, 5:40 IST
Last Updated : 31 ಡಿಸೆಂಬರ್ 2023, 5:40 IST
ಫಾಲೋ ಮಾಡಿ
Comments
ತುಮಕೂರಿನಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿ ಧಾನ್ಯ ಹಬ್ಬಕ್ಕೆ ಸಚಿವ ಜಿ.ಪರಮೇಶ್ವರ ಎತ್ತಿನಗಾಡಿಯಲ್ಲಿ ಬಂದರು
ತುಮಕೂರಿನಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿ ಧಾನ್ಯ ಹಬ್ಬಕ್ಕೆ ಸಚಿವ ಜಿ.ಪರಮೇಶ್ವರ ಎತ್ತಿನಗಾಡಿಯಲ್ಲಿ ಬಂದರು
ರೈತರ ಬೆನ್ನು ಮುರಿಯಬಾರದು
‘ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೆಲವು ಸಲ ಉತ್ಪನ್ನಗಳನ್ನು ಮಾರಾಟ ಮಾಡಿ 6 ತಿಂಗಳು ಕಳೆದರೂ ಎಪಿಎಂಸಿ ಕೃಷಿ ಇಲಾಖೆಯಿಂದ ರೈತರಿಗೆ ದುಡ್ಡು ಬರಲ್ಲ. ಉತ್ಪನ್ನ ಮಾರಾಟ ಮಾಡಿದ ತಕ್ಷಣಕ್ಕೆ ಹಣ ನೀಡುವ ವ್ಯವಸ್ಥೆ ಬರಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು. ಸಿರಿ ಧಾನ್ಯ ಹಬ್ಬ ಉದ್ಘಾಟಿಸಿ ಮಾತನಾಡಿ ರೈತರು ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ಅವರ ಬೆನ್ನು ಮುರಿಯುವ ಕೆಲಸ ಮಾಡಬಾರದು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಕೈ ಸಾಲ ಬ್ಯಾಂಕ್‌ ಸಾಲ ಜಾಸ್ತಿ ಆಗಿದೆ ಎಂದು ಕೆಟ್ಟ ಆಲೋಚನೆ ಮಾಡಬಾರದು. ಕೈ ಸಾಲ ಕೊಡುವ ಪದ್ಧತಿ ನಿಲ್ಲಬೇಕು. ಶೋಷಣೆ ಮಾಡಬಾರದು ಎಂಬ ಕಾನೂನು ತಂದಿದ್ದೇವೆ ಎಂದು ಹೇಳಿದರು. ಸಿರಿ ಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹಾಸ್ಟೆಲ್‌ಗಳಲ್ಲಿ ಸಿರಿ ಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು ಎಂದು ತಿಳಿಸಿದ್ದೇವೆ. ಸಿರಿ ಧಾನ್ಯಗಳನ್ನು ಕ್ವಿಂಟಲ್‌ಗಟ್ಟಲೆ ಕೊಳ್ಳುವುದು ಕಡಿಮೆಯಾಗಿದೆ. ಹೀಗಾಗಿ ಹಾಸ್ಟೆಲ್‌ಗಳ ಮೂಲಕ ರೈತರಿಗೆ ಮಾರುಕಟ್ಟೆಯ ವ್ಯವಸ್ಥೆ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಜಿ.ಪಂ ಸಿಇಒ ಜಿ.ಪ್ರಭು ಜಂಟಿ ಕೃಷಿ ನಿರ್ದೇಶಕ ಎನ್‌.ರಮೇಶ್‌ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಸಿ.ಪಾಪಣ್ಣ ರಾಜ್ಯ ಪ್ರತಿನಿಧಿ ಜಿ.ಕೆ.ಅನಸೂಯ ಕಳಸೇಗೌಡ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT