ಮತದಾರರ ಮನವೊಲಿಸಲು ಹಲವು ಬಾರಿ ಸಭೆಗಳನ್ನು ಮಾಡಿದ್ದೆವು. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಲ್ಲ ಎಂಬುದನ್ನೂ ಮನವರಿಕೆ ಮಾಡಲು ಪ್ರಯತ್ನಿಸಿದ್ದೆವು. ಆದರೂ ಕೆಲವರು ಈ ವಿಚಾರವನ್ನು ಮುಂದಿಟ್ಟುಕೊಂಡು ಮತದಾನ ಮಾಡಿಲ್ಲಮಮತಾದೇವಿ ಜಿ.ಎಸ್. ಹೆಚ್ಚುವರಿ ಜಿಲ್ಲಾಧಿಕಾರಿ
ಕಸ್ತೂರಿರಂಗನ್ ವರದಿಯಿಂದ ಕಂದಾಯ ಭೂಮಿಯನ್ನು ಹೊರಗಿಡಬೇಕು. ವನ್ಯಜೀವಿಗಳ ಸಂರಕ್ಷಿತಾರಣ್ಯಗಳನ್ನು ಮಾತ್ರ ಸೇರಿಸಬೇಕು. ವರದಿ ಬಗ್ಗೆ ನಮಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ. ಈ ಕಾರಣಕ್ಕೆ ಮತದಾನ ಬಹಿಷ್ಕರಿಸಿದ್ದೇವೆರವೀಂದ್ರ ಶೆಟ್ಟಿ ಕೆರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಕಸ್ತೂರಿರಂಗನ್ ವರದಿ ಇನ್ನೂ ಜಾರಿಯಾಗದಿದ್ದರೂ ಭೂ ಪರಿವರ್ತನೆಗಾಗಿ ಸಲ್ಲಿಸಿರುವ ಸುಮಾರು 25 ಅರ್ಜಿಗಳನ್ನು ತಡೆ ಹಿಡಿಯಲಾಗಿದೆ. ಈ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಈ ಕಾರಣಕ್ಕೆ ಮತದಾನದಿಂದ ದೂರ ಉಳಿದಿದ್ದೇವೆಪಾರ್ವತಿ ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.